ಸಂಗ್ರಹ ಚಿತ್ರ 
ವಿದೇಶ

ಇಮ್ರಾನ್ ಖಾನ್ ನಮ್ಮನ್ನು ಕಾಪಾಡಿ: ಸಿಖ್ ಯುವತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ!

ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಿಸಲು ಬಲವಂತವಾಗಿ ಸಿಖ್ ಯುವತಿಯನ್ನು ಇಸ್ಲಾಂ ಮತಾಂತರ ಮಾಡಲಾಗಿದ್ದು ನಮಗೆ ಸಹಾಯ ಮಾಡಿದ ಎಂದು ಸಂತ್ರಸ್ತ ಯುವತಿಯ ಪೋಷಕರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬೇಡಿಕೊಂಡಿದ್ದಾರೆ.

ಲಾಹೋರ್: ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಿಸಲು ಬಲವಂತವಾಗಿ ಸಿಖ್ ಯುವತಿಯನ್ನು ಇಸ್ಲಾಂ ಮತಾಂತರ ಮಾಡಲಾಗಿದ್ದು ನಮಗೆ ಸಹಾಯ ಮಾಡಿದ ಎಂದು ಸಂತ್ರಸ್ತ ಯುವತಿಯ ಪೋಷಕರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬೇಡಿಕೊಂಡಿದ್ದಾರೆ.

ಲಾಹೋರ್ ನ ನನ್ಕಾನ ಸಾಹೀಬ್ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಗುರುದ್ವಾರ ತಂಬು ಸಾಹೀಬ್ ನ ಪಾದ್ರಿ ಭಗವಾನ್ ಸಿಂಗ್ ರ 19 ವರ್ಷದ ಜಗಜೀತ್ ಕೌರ್ ಎಂಬಾಕೆ ನಾಪತ್ತೆಯಾಗಿದ್ದಳು. ಆಕೆಯನ್ನು ಗನ್ ಪಾಯಿಂಟ್ ನಲ್ಲಿ ಇಸ್ಲಾಂಗೆ ಮತಾಂತರ ಮಾಡಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. 

ತಮ್ಮ ಮಗಳನ್ನು ಬಿಡಿಸಿಕೊಡದಿದ್ದರೆ ನಾವು ಪಂಜಾಬ್ ಗೌವರ್ನರ್ ಮನೆ ಮುಂದೆ ಕುಟುಂಬ ಸಮೇತರಾಗಿ ಸ್ವಯಂ ಪ್ರೇರಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ತಮ್ಮ ಪುತ್ರಿ ಸುರಕ್ಷಿತವಾಗಿ ಹಿಂದಿರುಗುವಂತೆ ಮಾಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಮುಖ್ಯ ನ್ಯಾಯಾಧೀಶ ಆಸೀಫ್ ಸಯೀದ್ ಅವರಿಗೆ ಮನವಿ ಮಾಡಿದ್ದಾರೆ. 

ಜಗಜೀತ್ ಕೌರ್ ಸಹೋದರ ಸುರೀಂದರ್ ಸಿಂಗ್ ಕೆಲ ಆಗುಂತಕರು ಮನೆಗೆ ಬಂದು ತಮ್ಮನ್ನು ಹಿಂಸಿಸಿ ಬಲವಂತವಾಗಿ ತನ್ನ ಸಹೋದರಯನ್ನು ಹೆದರಿಸಿ ಇಸ್ಲಾಂಗೆ ಮತಾಂತರ ಮಾಡಿದರು ಎಂದು ದೂರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT