ವಿದೇಶ

ಇಮ್ರಾನ್ ಖಾನ್ ನಮ್ಮನ್ನು ಕಾಪಾಡಿ: ಸಿಖ್ ಯುವತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ!

Vishwanath S

ಲಾಹೋರ್: ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಿಸಲು ಬಲವಂತವಾಗಿ ಸಿಖ್ ಯುವತಿಯನ್ನು ಇಸ್ಲಾಂ ಮತಾಂತರ ಮಾಡಲಾಗಿದ್ದು ನಮಗೆ ಸಹಾಯ ಮಾಡಿದ ಎಂದು ಸಂತ್ರಸ್ತ ಯುವತಿಯ ಪೋಷಕರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬೇಡಿಕೊಂಡಿದ್ದಾರೆ.

ಲಾಹೋರ್ ನ ನನ್ಕಾನ ಸಾಹೀಬ್ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಗುರುದ್ವಾರ ತಂಬು ಸಾಹೀಬ್ ನ ಪಾದ್ರಿ ಭಗವಾನ್ ಸಿಂಗ್ ರ 19 ವರ್ಷದ ಜಗಜೀತ್ ಕೌರ್ ಎಂಬಾಕೆ ನಾಪತ್ತೆಯಾಗಿದ್ದಳು. ಆಕೆಯನ್ನು ಗನ್ ಪಾಯಿಂಟ್ ನಲ್ಲಿ ಇಸ್ಲಾಂಗೆ ಮತಾಂತರ ಮಾಡಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. 

ತಮ್ಮ ಮಗಳನ್ನು ಬಿಡಿಸಿಕೊಡದಿದ್ದರೆ ನಾವು ಪಂಜಾಬ್ ಗೌವರ್ನರ್ ಮನೆ ಮುಂದೆ ಕುಟುಂಬ ಸಮೇತರಾಗಿ ಸ್ವಯಂ ಪ್ರೇರಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ತಮ್ಮ ಪುತ್ರಿ ಸುರಕ್ಷಿತವಾಗಿ ಹಿಂದಿರುಗುವಂತೆ ಮಾಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಮುಖ್ಯ ನ್ಯಾಯಾಧೀಶ ಆಸೀಫ್ ಸಯೀದ್ ಅವರಿಗೆ ಮನವಿ ಮಾಡಿದ್ದಾರೆ. 

ಜಗಜೀತ್ ಕೌರ್ ಸಹೋದರ ಸುರೀಂದರ್ ಸಿಂಗ್ ಕೆಲ ಆಗುಂತಕರು ಮನೆಗೆ ಬಂದು ತಮ್ಮನ್ನು ಹಿಂಸಿಸಿ ಬಲವಂತವಾಗಿ ತನ್ನ ಸಹೋದರಯನ್ನು ಹೆದರಿಸಿ ಇಸ್ಲಾಂಗೆ ಮತಾಂತರ ಮಾಡಿದರು ಎಂದು ದೂರಿದ್ದಾರೆ.

SCROLL FOR NEXT