ಬಾಹ್ಯಾಕಾಶ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಲಂಕೆ: ಪ್ರಥಮ ಉಪಗ್ರಹ 'ರಾವಣ -1'ಉಡಾವಣೆ ಯಶಸ್ವಿ 
ವಿದೇಶ

ಬಾಹ್ಯಾಕಾಶ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಲಂಕೆ: ಪ್ರಥಮ ಉಪಗ್ರಹ 'ರಾವಣ -1'ಉಡಾವಣೆ ಯಶಸ್ವಿ

ಇಬ್ಬರು ಸ್ಥಳೀಯ ಇಂಜಿನಿಯರ್‌ಗಳು ವಿನ್ಯಾಸಗೊಳಿಸಿಅಭಿವೃದ್ಧಿಪಡಿಸಿದ ಶ್ರೀಲಂಕಾದ ಮೊದಲ ಉಪಗ್ರಹ 'ರಾವಣ -1' ಅನ್ನು ಈ ವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ....

ಕೊಲಂಬೋ: ಇಬ್ಬರು ಸ್ಥಳೀಯ ಇಂಜಿನಿಯರ್‌ಗಳು ವಿನ್ಯಾಸಗೊಳಿಸಿಅಭಿವೃದ್ಧಿಪಡಿಸಿದ ಶ್ರೀಲಂಕಾದ ಮೊದಲ ಉಪಗ್ರಹ 'ರಾವಣ -1' ಅನ್ನು ಈ ವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಜಪಾನ್ ಮತ್ತು ನೇಪಾಳದ ಇತರ ಎರಡು BIRDS 3 ಉಪಗ್ರಹಗಳೊಂದಿಗೆ ಯಶಸ್ವಿಯಾಗಿ ಕಕ್ಷೆಗೆ ಉಡಾಯಿಸಲಾಯಿತು.
ರಾವಣ 1, ಘನ ಉಪಗ್ರಹ 11.3 ಸೆಂಮೀx 10 ಸೆಂಮೀx 10 ಸೆಂಮೀ ಅಳತೆ ಹೊಂದಿದ್ದು ಮಾರು 1.05 ಕೆಜಿ ತೂಕ ಹೊಂದಿದೆ. ಸೋಮವಾರ ಮಧ್ಯಾಹ್ನ 3: 45 ಕ್ಕೆ (ಶ್ರೀಲಂಕಾ ಸಮಯ) ಉಪಗ್ರಹ ಕಕ್ಷೆಗೆ ಉಡಾವಣೆಯಾಗಿದೆ ಎಂದು ಕೊಲಂಬೊ ಪೇಜ್ ವರದಿ ಮಾಡಿದೆ.
ಜಪಾನ್‌ನ ಕ್ಯುಶು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಾಹ್ಯಾಕಾಶ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ತರಿಂದು ದಯರತ್ನ ಮತ್ತು ದುಲಾನಿ ಚಮಿಕಾ ಎಂಬ ಇಬ್ಬರು ಶ್ರೀಲಂಕಾದ ಇಂಜಿನಿಯರ್‌ಗಳು ಈ ಉಪಗ್ರಹವನ್ನು ವಿನ್ಯಾಸಗೊಳಿಸಿದ್ದಾರೆ ರಾವಣ 1, ಅನ್ನು ಜಾಕ್ಸಾ (ಜಪಾನೀಸ್ ಏರೋಸ್ಪೇಸ್ ಮತ್ತು ಎಕ್ಸ್‌ಪ್ಲೋರೇಶನ್ ಏಜೆನ್ಸಿ) ಒಡೆತನದ ಕಿಬೊ ಪ್ರಯೋಗ ಘಟಕವನ್ನು ಬಳಸಿಕೊಂಡು 51.6 ಡಿಗ್ರಿಗಳಷ್ಟು ಇಳಿಜಾರಿನಲ್ಲಿ 400 ಕಿ.ಮೀ ಕಕ್ಷೆಗೆ ನಿಯೋಜಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.
ಈ ಉಪಗ್ರಹವನ್ನು ಅಧಿಕೃತವಾಗಿ ಫೆಬ್ರವರಿ 18 ರಂದು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಗೆ ಹಸ್ತಾಂತರಿಸಲಾಗಿತ್ತು.ಯುಎಸ್‌ನಿಂದ ಸಿಗ್ನಸ್ -1 ಬಾಹ್ಯಾಕಾಶ ನೌಕೆಯ ಸಹಾಯದ ಮೂಲಕ ಏಪ್ರಿಲ್ 17 ರಂದು ಐಎಸ್‌ಎಸ್‌ಗೆ ಕಳುಹಿಸಲಾಯಿತು.
ರಾವಣ -1 ಶ್ರೀಲಂಕಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಚಿತ್ರಗಳನ್ನು ಸೆರೆಹಿಡಿಯುವುದರ ಜತೆಗೆ ವಿವಿಧ ಬಗೆ ಐದು ಕೆಲಸಗಳನ್ನು ನಿರ್ವಹಿಸುವ ನಿರೀಕ್ಷೆ ಇದೆ.ಕನಿಷ್ಠ ಒಂದೂವರೆ ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಈ ಉಪಗ್ರಹ ಐದು ವರ್ಷಗಳವರೆಗೆ ಸಕ್ರಿಯವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT