ದಲೈ ಲಾಮಾಗೆ ಮಸೂದ್ ಅಜರ್ ಹೋಲಿಕೆ: ಪಾಕ್ ಪತ್ರಕರ್ತನಿಗೆ ಟ್ವಿಟರ್ ನಲ್ಲಿ ತಪರಾಕಿ! 
ವಿದೇಶ

ದಲೈ ಲಾಮಾಗೆ ಮಸೂದ್ ಅಜರ್ ಹೋಲಿಕೆ: ಪಾಕ್ ಪತ್ರಕರ್ತನಿಗೆ ಟ್ವಿಟರ್ ನಲ್ಲಿ ತಪರಾಕಿ!

ಪಾಕಿಸ್ತಾನದ ಪತ್ರಕರ್ತನೋರ್ವ ಟ್ವಿಟರ್ ನಲ್ಲಿ ಬೌದ್ಧ ಧರ್ಮಗುರು ದಲೈಲಾಮ ಅವರನ್ನು ಉಗ್ರ ಮಸೂದ್ ಅಜರ್ ಗೆ ಹೋಲಿಕೆ ಮಾಡಿ ಟ್ವೀಟಿಗರಿಂದ ಭರ್ಜರಿ ತಪರಾಕಿ ಪಡೆದಿದ್ದಾನೆ.

ನವದೆಹಲಿ: ಪುಲ್ವಾಮ ದಾಳಿಯಾದ ನಂತರ ಭಾರತ-ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಈ ನಡುವೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಗೆ ಜಾಗತಿಕ ನಿಷೇಧ ವಿಧಿಸಲು ಚೀನಾ ಅಡ್ಡಗಾಲು ಹಾಕಿದೆ. 
ಈ ಎಲ್ಲದರ ನಡುವೆ ಪಾಕಿಸ್ತಾನದ ಪತ್ರಕರ್ತನೋರ್ವ ಟ್ವಿಟರ್ ನಲ್ಲಿ ಬೌದ್ಧ ಧರ್ಮಗುರು  ದಲೈಲಾಮ ಅವರನ್ನು ಉಗ್ರ ಮಸೂದ್ ಅಜರ್ ಗೆ ಹೋಲಿಕೆ ಮಾಡಿ ಟ್ವೀಟಿಗರಿಂದ ಭರ್ಜರಿ ತಪರಾಕಿ ಪಡೆದಿದ್ದಾನೆ. 
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಹಳೆಯ ಲೇಖನವನ್ನು ಹಂಚಿಕೊಂಡಿದ್ದ ಪಾಕ್ ಪತ್ರಕರ್ತ ಹಮೀದ್ ಮಿರ್, ಚೀನಾ ಏಕೆ ಮಸೂದ್ ಅಜರ್ ನ ನಿಷೇಧಕ್ಕೆ ಅಡ್ಡಗಾಲು ಹಾಕುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಸುಲಭದ ಸಂಗತಿ. ಏಕೆಂದರೆ ಚೀನಾದ ದಶಕದ ಶತ್ರು ದಲೈ ಲಾಮಗೆ ಭಾರತ ಆಶ್ರಯ ನೀಡಿದೆ ಎಂದು ಟ್ವೀಟ್ ಮಾಡಿದ್ದರು. 
ಪತ್ರಕರ್ತ ಹಂಚಿಕೊಂಡಿದ್ದ 2008 ರಲ್ಲಿ ಪ್ರಕಟಗೊಂಡ ಲೇಖನಕ್ಕೆ ದಲೈ ಲಾಮ ಓರ್ವ ಭಯೋತ್ಪಾದಕ: ಚೀನಾ ಎಂಬ ಶೀರ್ಷಿಕೆ ನೀಡಲಾಗಿತ್ತು. 
ಆದರೆ ಪಾಕಿಸ್ತಾನದ ಪತ್ರಕರ್ತನ ಟ್ವೀಟ್ ಗೆ ಟ್ವಿಟರ್ ನಲ್ಲಿರುವವರು ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಈ ಪತ್ರಕರ್ತನ ಟ್ವೀಟ್ ಭಾರತದ ಕುರಿತು ಚೀನಾ-ಪಾಕಿಸ್ತಾನಕ್ಕೆ ಇರುವ ಮಸ್ಥಿತಿಯನ್ನು ಬಹಿರಂಗಗೊಳಿಸಿದೆ ಎಂದು ಟ್ವಿಟರ್ ನಲ್ಲಿ ಹಲವರು ತಿರುಗೇಟು ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT