ಸಂಗ್ರಹ ಚಿತ್ರ 
ವಿದೇಶ

ಭಾರತದ ಯುದ್ದ ವಿಮಾನ ಎಂದು ತಿಳಿದು ತನ್ನದೇ 2 ಯುದ್ದ ವಿಮಾನಗಳ ಹೊಡೆದುರುಳಿಸಿದ ಪಾಕಿಸ್ತಾನ!

ಪಾಕಿಸ್ತಾನದ ಮಂಕು ಬುದ್ಧಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.. ಪಾಕಿಸ್ತಾನ ಸೇನೆ ಭಾರತದ ಯುದ್ಧ ವಿಮಾನ ಎಂದು ತಿಳಿದು ತನ್ನದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಅದು ಒಂದಲ್ಲ.. ಎರಡೆರಡು ಯುದ್ದ ವಿಮಾನಗಳನ್ನು...

ಮುಲ್ತಾನ್: ಪಾಕಿಸ್ತಾನದ ಮಂಕು ಬುದ್ಧಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.. ಪಾಕಿಸ್ತಾನ ಸೇನೆ ಭಾರತದ ಯುದ್ಧ ವಿಮಾನ ಎಂದು ತಿಳಿದು ತನ್ನದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಅದು ಒಂದಲ್ಲ.. ಎರಡೆರಡು ಯುದ್ದ ವಿಮಾನಗಳನ್ನು...
ಬಾಲಾಕೋಟ್ ಏರ್ ಸ್ಟ್ರೈಕ್ ಬಳಿಕ ಆಗಸದಲ್ಲಿ ಏನೇ ಹಾರಾಡಿದರೂ ಭಾರತದ ಯುದ್ದ ವಿಮಾನಗಳೆಂದು ಪಾಕಿಸ್ತಾನ ಸೇನೆ ಬೆಚ್ಚಿ ಬೀಳುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಪಾಕಿಸ್ತಾನ ಸೇನೆ ಭಾರತದ ಯುದ್ಧ ವಿಮಾನಗಳೆಂದು ತಿಳಿದು ಮುಲ್ತಾನ್ ನಲ್ಲಿ ತನ್ನದೇ ಎರಡೆರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಪಾಕಿಸ್ತಾನದ ಈ ಪ್ರಮಾದಕ್ಕೆ ಚೀನಾ ಕೂಡ ಸಾಥ್ ನೀಡಿದ್ದು, ಪಾಕ್ ಸೇನೆಯ ಪ್ರಮಾದದಲ್ಲಿ ಚೀನಾ ಪಾಕಿಸ್ತಾನಕ್ಕೆ ನೀಡಿದ್ದ ಆ್ಯಂಟಿ-ಏರ್​​ ಮಿಸೈಲ್​ ಸಿಸ್ಟಮ್ ನ ಪಾತ್ರ ಮಹತ್ವದ್ದಾಗಿದೆ. ಏಕೆಂದರೆ ಪಾಕಿಸ್ತಾನದ 2 ಜೆಎಫ್ 17ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇ ಚೀನಾದ ಈ ಆ್ಯಂಟಿ-ಏರ್​​ ಮಿಸೈಲ್​ ಸಿಸ್ಟಮ್ ಅಂತೆ.
ಈ ಬಗ್ಗೆ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, 'ಪಾಕಿಸ್ತಾನವು ಭಾರತದ ವಿಮಾನವೆಂದು ತಿಳಿದು ತನ್ನದೇ ಎರಡು ಜೆಎಫ್-17 ವಿಮಾನಗಳನ್ನು ಹೊಡೆದುರುಳಿಸಿದೆ. ಆಗಸದಲ್ಲಿ ಎರಡು ದೊಡ್ಡ ಸ್ಫೋಟದ ಶಬ್ದ ಕೇಳಿಸಿದೆ. ಪಾಕಿಸ್ತಾನ ವಾಯುಸೇನೆ ಭಾರತದ ಯುದ್ಧ ವಿಮಾನಗಳು ಎಂದು ತಪ್ಪಾಗಿ ತಿಳಿದು ತನ್ನದೇ 2 ಜೆಎಫ್ 17 ಯುದ್ದ ವಿಮಾನಗಳನ್ನು ಹೊಡೆದುರುಳಿಸಿದೆ. ಬಹುಶಃ ಬಾಲಾಕೋಟ್ ವಾಯುದಾಳಿಯಿಂದ ಉಂಟಾಗಿರುವ ಭೀತಿ ಇಂದ ಇರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.
ಇನ್ನು ಪಾಕ್ ಪ್ರಜೆಯೊಬ್ಬ ಈ ಘಟನೆ ಬಗ್ಗೆ ಟ್ವಿಟ್ಟರ್ ​ನಲ್ಲಿ ಬರೆದುಕೊಂಡಿದ್ದು, 'ಇದು ನಿಜಕ್ಕೂ ಬೇಸರದ ಸಂಗತಿ. ಮುಲ್ತಾನ್ ​ನಲ್ಲಿ ಜೆಎಫ್​-17 ವಿಮಾನ ಹೊಡೆದುರುಳಿಸಲಾಗಿದೆ. ಚೀನಾದಿಂದ ಆಮದು ಮಾಡಿಕೊಂಡಿದ್ದ ಆ್ಯಂಟಿ-ಏರ್​​ ಮಿಸೈಲ್​ ಸಿಸ್ಟಮ್​ ನಮ್ಮ ವಿಮಾನವನ್ನು ನಾಶ ಮಾಡಿದೆ. ಚೀನಾದ ಆ್ಯಂಟಿ-ಏರ್​​ ಮಿಸೈಲ್​ ಸಿಸ್ಟಮ್ ನಮ್ಮ ದೇಶಕ್ಕೆ ಮಾರಕ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಈ ಘಟನೆಯಲ್ಲಿ ಪೈಲಟ್​ ಮೃತಪಟ್ಟಿದ್ದಾನೆ,” ಎಂದು ಬರೆದುಕೊಂಡಿದ್ದಾನೆ.
ಈ ಘಟನೆ ಬಗ್ಗೆ ಪಾಕಿಸ್ತಾನ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಭಾರತ ಎಫ್​-16 ಹೊಡೆದುರುಳಿಸಿದ ಸಂದರ್ಭದಲ್ಲೂ ಪಾಕಿಸ್ತಾನ ಆ ರೀತಿ ಘಟನೆ ನಡೆದೇ ಇಲ್ಲ ಎಂದು ಎಂದು ಹೇಳಿಕೊಂಡು ತಿರುಗಿದ್ದನ್ನು ಇಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT