ಡ್ರೋನ್ ದಾಳಿಗೆ ತೈಲ ಉತ್ಪಾದನೆ ಘಟಕದ ಸುತ್ತಮುತ್ತಲಿನ ದೃಶ್ಯ 
ವಿದೇಶ

ಡ್ರೋನ್ ದಾಳಿಗೊಳಗಾದ ಸೌದಿ ಅರೇಬಿಯಾದ ಘಟಕಗಳಲ್ಲಿ ತೈಲ ಉತ್ಪಾದನೆ ತಾತ್ಕಾಲಿಕ ಸ್ಥಗಿತ 

ಯೆಮನ್ ಬಂಡುಕೋರರಿಂದ ದಾಳಿಗೊಳಗಾದ ಸೌದಿ ಅರೇಬಿಯಾದ ಅರಮ್ಕೊ ತೈಲ ಉತ್ಪಾದನೆ ಘಟನೆಗಳಲ್ಲಿ ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

ರಿಯಾದ್: ಯೆಮನ್ ಬಂಡುಕೋರರಿಂದ ದಾಳಿಗೊಳಗಾದ ಸೌದಿ ಅರೇಬಿಯಾದ ಅರಮ್ಕೊ ತೈಲ ಉತ್ಪಾದನೆ ಘಟನೆಗಳಲ್ಲಿ ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಂಪೆನಿಯ ಒಟ್ಟು ಉತ್ಪಾದನೆ, ಮಾರಾಟದ ಮೇಲೆ ಪರಿಣಾಮ ಬೀರಲಿದೆ ಎಂದು ಇಂಧನ ಸಚಿವರು ತಿಳಿಸಿದ್ದಾರೆ.


ಅಬ್ಕೈಕ್ ಮತ್ತು ಖುರೈಸ್ ಘಟಕಗಳಲ್ಲಿನ ತೈಲ ಉತ್ಪನ್ನದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಸೌದಿ ಅರೇಬಿಯಾ ಇಂಧನ ಖಾತೆ ಸಚಿವ ಪ್ರಿನ್ಸ್ ಅಬ್ದುಲಾಜಿಜ್ ಬಿನ್ ಸಲ್ಮಾನ್ ತಿಳಿಸಿದ್ದಾರೆ. ಒಟ್ಟು ಉತ್ಪಾದನೆಯ ಶೇಕಡಾ 50ರಷ್ಟು ಕಡಿಮೆಯಾಗಿದೆ. ಕಚ್ಚಾ ತೈಲ ಪ್ರತಿದಿನ 5.7 ದಶಲಕ್ಷ ಬ್ಯಾರಲ್ ಗಳಷ್ಟು ಕಡಿಮೆಯಾಗಿದೆ ಎಂದು ದೇಶೀ ಒಡೆತನದ ಅರಮ್ಕೊ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.


ತೈಲ ಉತ್ಪನ್ನವನ್ನು ಮತ್ತೆ ಆರಂಭಿಸಲು ಕೆಲಸಗಳು ನಡೆಯುತ್ತಿದ್ದು ಮುಂದಿನ ಎರಡು ದಿನಗಳಲ್ಲಿ ಪ್ರಗತಿಯ ಬಗ್ಗೆ ತಿಳಿಸುತ್ತೇವೆ ಎಂದು ಅರಮ್ಕೊ ಸಿಇಒ ಅಮಿನ್ ನಸ್ಸರ್ ತಿಳಿಸಿದ್ದಾರೆ.


ಪೂರ್ವ ಸೌದಿ ಅರೇಬಿಯಾದ ಎರಡು ಪ್ರಮುಖ ಅರಮ್ಕೊ ಕೇಂದ್ರಗಳಾದ ಅಬ್ಕೈಕ್ ಮತ್ತು ಖುರೈಸ್ ಘಟಕಗಳ ಮೇಲೆ ಹುತಿ ಬಂಡುಕೋರರು ದಾಳಿ ನಡೆಸಿದೆ. ದಾಳಿಯಲ್ಲಿ ಯಾರಿಗೂ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. 


ಇರಾನ್ ಜೊತೆಗೆ ಸಂಪರ್ಕ ಹೊಂದಿರುವ ಹುತಿ ಬಂಡುಕೋರರು 10 ಡ್ರೋನ್ ಮೂಲಕ ಬಹುದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. 


ಅಮೆರಿಕಾ ಗೃಹ ಕಾರ್ಯದರ್ಶಿ ಮೈಕ್ ಪೊಂಪಿಯೊ, ದಾಳಿಗೆ ಇರಾನ್ ಕಾರಣ ಎಂದು ಆರೋಪಿಸಿದ್ದಾರೆ. ವಿಶ್ವದ ಇಂಧನ ಪೂರೈಕೆ ಘಟಕಗಳ ಮೇಲೆ ಇರಾನ್ ದಾಳಿ ಆರಂಭಿಸಿದೆ ಎಂದರು.


ಅಮೆರಿಕಾದ ಸಹವರ್ತಿ ಸೌದಿ ಅರೇಬಿಯಾ, ಬಂಡುಕೋರರಿಗೆ ಶಸ್ತ್ರಾಸ್ತ್ರಗಳನ್ನು ಇರಾನ್ ಪೂರೈಸುತ್ತದೆ ಎಂದು ಆರೋಪಿಸುತ್ತದೆ. ಇರಾನ್ ಈ ಆರೋಪವನ್ನು ನಿರಾಕರಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BJPಗೆ ಶೆಹಜಾದ್ ಪೂನಾವಾಲಾ ಶಾಕ್‌: ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಮತ್ತೊಮ್ಮೆ ರಾಜೀನಾಮೆ; ‘ಯಾರನ್ನೂ ದೂಷಿಸುತ್ತಿಲ್ಲ, ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ’ ಎಂದ ಫೈರ್‌ಬ್ರಾಂಡ್..!

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'

‘ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ಮತ್ತೆ ಪ್ರತಿಭಟನೆ!’: ಕೇಂದ್ರಕ್ಕೆ ಬಾಬಾ ರಾಮದೇವ್ ಖಡಕ್ ಎಚ್ಚರಿಕೆ

ಬಿಹಾರದ ಲಖಿಸರಾಯಿ ದೇವಾಲಯದ ಬಳಿ ಭೀಕರ ಕಾಲ್ತುಳಿತ: 7 ಭಕ್ತರ ಸಾವು, ಹಲವರಿಗೆ ಗಾಯ

ಪಶ್ಚಿಮ ಬಂಗಾಳ: ದೇವಸ್ಥಾನ ಸಮೀಪದ ಹೋಟೆಲ್‌ನಲ್ಲಿ ಭಾರೀ ಅಗ್ನಿ ಅವಘಡ: 7 ಯಾತ್ರಿಕರು ಸಜೀವ ದಹನ