ಭಾರತೀಯ ಯೋಧರಿಗಾಗಿ 'ಜನ ಗಣ ಮನ' ನುಡಿಸಿದ ಅಮೆರಿಕಾ ಸೇನಾ ಬ್ಯಾಂಡ್: ವಿಡಿಯೋ ವೈರಲ್ 
ವಿದೇಶ

ಭಾರತೀಯ ಯೋಧರಿಗಾಗಿ 'ಜನ ಗಣ ಮನ' ನುಡಿಸಿದ ಅಮೆರಿಕಾ ಸೇನಾ ಬ್ಯಾಂಡ್: ವಿಡಿಯೋ ವೈರಲ್

ಭಾರತೀಯ ಸೇನೆ ಮತ್ತು ಅಮೆರಿಕಾ ಸೇನೆ ನಡೆಸುತ್ತಿರುವ ಜಂಟಿ ಸಮಾರಾಭ್ಯಾಸದ ವೇಳೆ ಭಾರತೀಯ ಯೋಧರಿಗಾಗಿ ಅಮೆರಿಕಾ ಸೇನಾ ಬ್ಯಾಂಡ್ ರಾಷ್ಟ್ರಗೀತೆ 'ಜನ ಗಣ ಮನ' ನುಡಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ವಾಷಿಂಗ್ಟನ್: ಭಾರತೀಯ ಸೇನೆ ಮತ್ತು ಅಮೆರಿಕಾ ಸೇನೆ ನಡೆಸುತ್ತಿರುವ ಜಂಟಿ ಸಮಾರಾಭ್ಯಾಸದ ವೇಳೆ ಭಾರತೀಯ ಯೋಧರಿಗಾಗಿ ಅಮೆರಿಕಾ ಸೇನಾ ಬ್ಯಾಂಡ್ ರಾಷ್ಟ್ರಗೀತೆ 'ಜನ ಗಣ ಮನ' ನುಡಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬುಧವಾರ ಉಭಯ ಸೇನೆಗಳ ಜಂಟಿ ಸಮರಾಭ್ಯಾಸದ ಕೊನೆಯ ದಿನವಾಗಿದ್ದು, ಈ ಹಿನ್ನಲೆಯಲ್ಲಿ ಅಮೆರಿಕಾ ಸೇನಾ ಬ್ಯಾಂಡ್ ಭಾರತದ ರಾಷ್ಟ್ರಗೀತೆಯನ್ನು ನುಡಿಸಿದೆ. 

ಭಾರತ ಮತ್ತು ಅಮೆರಿಕಾ ನಡುವಣ ರಕ್ಷಣಾ ಸಹಕಾರದ ಭಾಗವಾಗಿ 'ಯುದ್ಧ್ ಅಭ್ಯಾಸ್' ಎಂಬ ಹೆಸರಿನಲ್ಲಿ ಉಭಯ ಸೇನೆಗಳು ಜಂಟಿ ಸಮರಾಭ್ಯಾಸವನ್ನು ಕಳೆದ ಶುಕ್ರವಾರದಿಂದ ವಾಷಿಂಗ್ಟನ್'ನಲ್ಲಿ ಆರಂಭಿಸಿತ್ತು. ಇದರಂತೆ ಜಂಟಿ ಸಮರಾಭ್ಯಾಸ ನಿನ್ನೆ ಅಮರಿಕಾದ ರಾಜಧಾನಿ ವಾಷಿಂಗ್ಟನ್'ನ ಜಾಯಿಂಟ್ ಬೇಸ್ ಲೂಯಿಸ್ ಮ್ಯಾಕ್'ಕಾರ್ಡ್ ನಲ್ಲಿ ಕೊನೆಗೊಂಡಿತ್ತು. 

ಕಳೆದ ಭಾನುವಾರ ಉಭಯ ರಾಷ್ಟ್ರಗಳ ಸೇನಾ ಯೋಧರು ಅಸ್ಸಾಂ ರೆಜಿಮೆಂಟ್'ನ ಮಾರ್ಚಿಂಗ್ ಸಾಂಗ್ 'ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ'ಯನ್ನು ಹಾಡುತ್ತಿರುವ ಮತ್ತು ಅದಕ್ಕೆ ನೃತ್ಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

ಈ ಗೀತೆ 2ನೇ ವಿಶ್ವಯುದ್ಧದ ನೈಜ ಕಥೆಯೊಂದನ್ನು ಆಧರಿಸಿದೆ. ಭಾರತೀಯ ಸೇನೆಯ ಯೋಧ ಬದ್ಲುರಾಮ್ ಜಪಾನ್ ವಿರುದ್ಧ ಹೋರಾಡಿ ಮರಣಹೊಂದಿದ್ದ. ಬದ್ಲುರಾಮ್ ಸಾವಿನ ಬಳಿಕ, ಒಬ್ಬ ಅಧಿಕಾರಿ ಬದ್ಲುರಾಮ್ ಸಾವನ್ನು ಸೈನ್ಯಕ್ಕೆ ವರದಿ ಮಾಡಲು ಮರೆತು ಹೋಗಿದ್ದರು. ಇದರ ಪರಿಣಾಮವಾಗಿ, ಬದ್ಲುರಾಮ್'ನ ಆಹಾರ ಸಾಮಾಗ್ರಿ ಸೇನಾ ಘಟಕ್ಕೆ ಹೆಚ್ಚುವರಿ ಪಡಿತರ ರೂಪದಲ್ಲಿ ಬರುತ್ತಲೇ ಇತ್ತು. ಈ ಆಹಾರವೇ ಅಂತಿಕವಾಗಿ ಭಾರತೀಯ ಸೈನಿಕರ ಉಳಿಗೆ ಕಾರಣವಾಗಿತ್ತು. ಈ ಕಥೆಯನ್ನು ಆಧರಿಸಿ ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಎಂಬ ಹಾಡನ್ನು ರಚನೆ ಮಾಡಲಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್ ವಿಜಯ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

SCROLL FOR NEXT