ರಘು ಕಾರ್ನಾಡ್ 
ವಿದೇಶ

ಖ್ಯಾತ ಬರಹಗಾರ ರಘು ಕಾರ್ನಾಡ್ ಗೆ 'ವಿಂಧಾಮ್ ಕ್ಯಾಂಬೆಲ್' ಅಂತರಾಷ್ಟ್ರೀಯ ಪ್ರಶಸ್ತಿ ಪ್ರಧಾನ

ಖ್ಯಾತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಪುತ್ರ ರಘು ಕಾರ್ನಾಡ್ ಅವರಿಗೆ ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ "ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ" ಪ್ರಧಾನ ಮಾಡಲಾಗಿದೆ.

ಖ್ಯಾತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಪುತ್ರ ರಘು ಕಾರ್ನಾಡ್ ಅವರಿಗೆ ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ "ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ" ಪ್ರಧಾನ ಮಾಡಲಾಗಿದೆ.

ರಘು ಕಾರ್ನಾಡ್ ಅವರ "Farthest Field: An Indian Story of the Second World War" ಪುಸ್ತಕಕ್ಕಾಗಿ ಈ ಪ್ರಶಸ್ತಿ ಒಲಿದಿದೆ.

ಬಹುಮಾನವನ್ನು ಸ್ವೀಕರಿಸಿದ ನಂತರ, ಕರ್ನಾಡ್ ಮಾತನಾಡಿ ಈ ಪುಸ್ತಕ ಭಾರತದ ಹೊರಗೆ ಇಷ್ಟೊಂದು ಖ್ಯಾತಿಪಡೆಯಲಿದೆ ಎಂದುಕೊಂಡಿರಲಿಲ್ಲ, ಈ ಪುಸ್ತಕವನ್ನು ಗುರುತಿಸಿ ನನಗೆ ಇಂತಹಾ ಪ್ರಶಸ್ತಿ ನೀಡಿರುವುದು ನನ್ನಂತಹ ಇತರರಿಗೆ ಸ್ಪೂರ್ತಿಯಾಗಬಹುದು ಎಂದಿದ್ದಾರೆ.

ಪ್ರಶಸ್ತಿ ವಿಜೇತ ಕೃತಿಯನ್ನು 2016ರಲ್ಲಿ ಹಾರ್ಪರ್ ಕಾಲಿನ್ಸ್ ಪ್ರಕಟಿಸಿದೆ.ಪ್ರತಿಷ್ಠಿತ ಪ್ರಶಸ್ತಿ ಜತೆಗೆ165000 ಅಮೆರಿಕನ್ ಡಾಲರ್ (ಸುಮಾರು ಒಂದೂಕಾಲು ಕೋಟಿ ರು) ನಗದು  ಬಹುಮಾನವಿದೆ. ಇನ್ನು ಯೇಲ್ ವಿವಿ ನ ಕಾರ್ಯಕ್ರಮದಲ್ಲಿ ರಘು ಅವರನ್ನು ಒಳಗೊಂಡು ಒಟ್ಟು ಎಂಟು ಮಂದಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT