ಥಾಮಸ್ ಮಾಡ್ಲಿ 
ವಿದೇಶ

ಕೊರೋನಾಗೆ ನಲುಗಿದ ದೊಡ್ಡಣ್ಣ: ಅಮೆರಿಕಾ ನೌಕಾಸೇನೆಯ ಕಾರ್ಯದರ್ಶಿ ಥಾಮಸ್ ಮಾಡ್ಲಿ ರಾಜಿನಾಮೆ

ಸಾವಿರಾರು ಜನರನ್ನು ಬಲಿ ಪಡೆದಿರುವ ಈ ಮಾರಕ ವೈರಾಣು ಇದೀಗ ದೇಶದ ರಕ್ಷಣಾ ಪಡೆಗಳಲ್ಲೂ ಸಂಚಲನ ಉಂಟಾಗಲು ಕಾರಣವಾಗಿದೆ. ನೌಕಾಸೇನೆ ಕಾರ್ಯದರ್ಶಿ ಸ್ಥಾನಕ್ಕೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಮಾಡ್ಲಿ ರಾಜೀನಾಮೆ ನೀಡಿದ್ದು ರಕ್ಷಣಾ ಇಲಾಖೆ ಸ್ವೀಕರಿಸಿದೆ.

ವಾಷಿಂಗ್ಟನ್: ಮಾರಕ ಕೊರೊನಾ ವೈರಸ್ ಅಮೆರಿಕದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಸಾವಿರಾರು ಜನರನ್ನು ಬಲಿ ಪಡೆದಿರುವ ಈ ಮಾರಕ ವೈರಾಣು ಇದೀಗ ದೇಶದ ರಕ್ಷಣಾ ಪಡೆಗಳಲ್ಲೂ ಸಂಚಲನ ಉಂಟಾಗಲು ಕಾರಣವಾಗಿದೆ. ನೌಕಾಸೇನೆ ಕಾರ್ಯದರ್ಶಿ ಸ್ಥಾನಕ್ಕೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಮಾಡ್ಲಿ ರಾಜೀನಾಮೆ ನೀಡಿದ್ದು ರಕ್ಷಣಾ ಇಲಾಖೆ ಸ್ವೀಕರಿಸಿದೆ.

'ಥಿಯೊಡೋರ್ ರೂಸ್‌ವೆಲ್ಟ್' ಯುದ್ಧ ಹಡಗಿನಲ್ಲಿ ಕೊರೊನಾ ವೈರಸ್ ನುಸುಳಿದ್ದು, ಯುದ್ಧ ಹಡಗಿನಲ್ಲಿರುವ ಸೈನಿಕರನ್ನು ಕಾಪಾಡುವಂತೆ ಕ್ಯಾಪ್ಟನ್ ಬ್ರೆಟ್ ಕ್ರೊಜಿಯರ್ ನೌಕಾಪಡೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಆದರೆ ಈ ಮನವಿಯನ್ನು ಅಪಹಾಸ್ಯ ಮಾಡಿದ್ದ ಅಮೆರಿಕ ನೌಕಾಸೇನೆಯ ಕಾರ್ಯದರ್ಶಿ ಥಾಮಸ್ ಮಾಡ್ಲಿ, ಯುದ್ಧ ಹಡಗಿನಲ್ಲಿ ಕೊರೊನಾ ಬಂದರೆ ನಾವೇನು ಮಾಡೋಣ ಎಂದು ಪ್ರಶ್ನಿಸಿದ್ದರು. ಅಲ್ಲದೇ ಈ ಸುದ್ದಿಯನ್ನು ಬಹಿರಂಗಗೊಳಿಸಿದ್ದಕ್ಕೆ ಕ್ಯಾಪ್ಟನ್ ವಿರುದ್ಧ ಹರಿಹಾಯ್ದಿದ್ದರು.

ಇದಕ್ಕೆ ಪ್ರತಿಯಾಗಿ 'ಥಿಯೊಡೋರ್ ರೂಸ್‌ವೆಲ್ಟ್' ಹಡಗಿನಲ್ಲಿದ್ದ ಸೈನಿಕರು ತಮ್ಮ ಕ್ಯಾಪ್ಟನ್ ಅವರಿಗೆ ಗೌರವ ಸಲ್ಲಿಸಿ ವಿಡಿಯೋ ಬಿಡುಗಡೆ ಮಾಡಿದ್ದರು. ಇದು ಥಾಮಸ್ ಮಾಡ್ಲಿ ಅವರಿಗೆ ತೀವ್ರ ಮುಜುಗರ ತಂದಿತ್ತು ಎನ್ನಲಾಗಿದೆ.

ಥಾಮಸ್ ಮಾಡ್ಲಿಯ ಈ ಹೇಳಿಕೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ನೌಕಾಸೇನೆಯ ಕಾರ್ಯದರ್ಶಿಯಾಗಿ ಯುದ್ಧ ಹಡಗಿನ ಕ್ಯಾಪ್ಟನ್ ಪತ್ರವನ್ನು ಅಪಹಾಸ್ಯ ಮಾಡುವುದು ಸಲ್ಲ ಎಂದು ಮಾಡ್ಲಿ ವಿರುದ್ಧ ಹಲವರು ಆಕ್ರೋಶ ವ್ಯಕ್ತವಾಗಿತ್ತು.  ಇನ್ನೂ ನೌಕಾಸೇನೆ ಕಾರ್ಯದರ್ಶಿ ಮಾಡ್ಲಿ ಅವರ ರಾಜಿನಾಮೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಸರ ವ್ಯಕ್ತ ಪಡಿಸಿದ್ದಾರೆ, ಇಷ್ಟೊಂದು ಸ್ವಾರ್ಥಿಗಳಗಬಾರದು ಎಂದು ಟ್ವೀಟ್  ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT