ಸಿಂಗಾಪುರದ ರಸ್ತೆ 
ವಿದೇಶ

ಕೊರೋನಾ ಲಾಕ್ ಡೌನ್ :ಸಿಂಗಾಪುರ್ ನಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಭಾರತೀಯನ ಮೇಲೆ ದೂರು ದಾಖಲು

ಕೊರೋನಾ ವೈರಸ್ ನಡುವೆ ಸ್ವ ನಿರ್ಬಂಧ ಆದೇಶವನ್ನು ಉಲ್ಲಂಘಿಸಿದ ಭಾರತೀಯನ ವಿರುದ್ಧ ಕೇಸು ದಾಖಲಾಗಿದೆ. ಪ್ರಕರಣ ಕೋರ್ಟ್ ಮೆಟ್ಟಲೇರಿದ್ದು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕಾಗಿದೆ.

ಸಿಂಗಾಪುರ: ಕೊರೋನಾ ವೈರಸ್ ನಡುವೆ ಸ್ವ ನಿರ್ಬಂಧ ಆದೇಶವನ್ನು ಉಲ್ಲಂಘಿಸಿದ ಭಾರತೀಯನ ವಿರುದ್ಧ ಕೇಸು ದಾಖಲಾಗಿದೆ. ಪ್ರಕರಣ ಕೋರ್ಟ್ ಮೆಟ್ಟಲೇರಿದ್ದು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕಾಗಿದೆ.

ಕಳೆದ ಫೆಬ್ರವರಿ 16ರಿಂದ 25ರವರೆಗೆ ಸ್ವ ನಿರ್ಬಂಧನದಲ್ಲಿ ಭಾರತೀಯ ಮೂಲದ ವ್ಯಕ್ತಿ 35 ವರ್ಷದ ವಾರ್ದಿರೆಡ್ಡಿ ನಾಗೇಶ್ವರ ರೆಡ್ಡಿ ಇರಬೇಕಾಗಿತ್ತು. ಆದರೆ ಅವರು ಫೆಬ್ರವರಿ 24ರಂದು ಮನೆಯಿಂದ ಹೊರಬಂದಿದ್ದರು. ಹೀಗೆ ನಿಯಮ ಉಲ್ಲಂಘಿಸಿದ ಆರೋಪ ಇವರ ಮೇಲಿದ್ದು, ನ್ಯಾಯಾಲಯದ ಮುಂದೆ ಇದೇ ತಿಂಗಳ 23ರಂದು ಹಾಜರಾಗಿ ತಪ್ಪೊಪ್ಪಿಕೊಳ್ಳುವ ಸಾಧ್ಯತೆಯಿದೆ. ನ್ಯಾಯಾಲಯ ಏನು ತೀರ್ಪು ನೀಡಲಿದೆ ಎಂಬುದನ್ನು ನೋಡಬೇಕಾಗಿದೆ.

ಇದೇ ಆರೋಪದ ಮೇಲೆ ಚೀನಾ ಪ್ರಜೆ 49 ವರ್ಷದ ಲಿಯು ಡುಫೆಂಗ್ ಆರೋಪಿಯಾಗಿದ್ದು ಈತನ ವಿಚಾರಣೆ ಮೇ 8ರಂದು ನಡೆಯಲಿದೆ. ಮತ್ತೊಬ್ಬ ಸಿಂಗಾಪುರ್ ಪ್ರಜೆ 32 ವರ್ಷದ ಫೂ ಚಿಂಗ್ ಗೌನ್ ಕೂಡ ಇದೇ ಆರೋಪ ಎದುರಿಸುತ್ತಿದ್ದಾರೆ.

ಸಿಂಗಾಪುರ್ ದಲ್ಲಿ ನಿನ್ನೆ 623 ಹೊಸ ಕೊರೋನಾ ಕೇಸುಗಳು ದಾಖಲಾಗಿದ್ದು ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5 ಸಾವಿರದ 50ಕ್ಕೇರಿದೆ. ವಿದೇಶಿ ಕೆಲಸಗಾರರಲ್ಲಿ ಕೊರೋನಾ ಹೆಚ್ಚಾಗಿ ಕಂಡುಬರುತ್ತಿದ್ದು, ಅವರಲ್ಲಿ ಭಾರತೀಯರು ಹಲವರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT