ಕೊರೋನಾ ಹೋರಾಟಕ್ಕೆ ಸಾಥ್ ನೀಡಿದ ಸ್ವಿಜರ್ಲೆಂಡ್: ಸ್ವಿಸ್ ಪರ್ವತದ ಮೇಲೆ ಭಾರತದ ತ್ರಿವರ್ಣಧ್ವಜ ಪ್ರತಿಫಲನ 
ವಿದೇಶ

ಕೊರೋನಾ ಹೋರಾಟಕ್ಕೆ ಸಾಥ್ ನೀಡಿದ ಸ್ವಿಜರ್ಲೆಂಡ್: ಸ್ವಿಸ್ ಪರ್ವತದ ಮೇಲೆ ಭಾರತದ ತ್ರಿವರ್ಣಧ್ವಜ ಪ್ರತಿಫಲನ

ಸ್ವಿಜರ್ಲೆಂಡ್'ನ ಹೆಗ್ಗುರುತುಗಳಲ್ಲಿ ಒಂದಾಗಿರುವ ಮ್ಯಾಟರ್ ಹಾರ್ನ್ ಪರ್ವತಗಳ ಮೇಲೆ ಶುಕ್ರವಾರ ರಾತ್ರಿ ಭಾರತದ ರಾಷ್ಟ್ರಧ್ವಜವಾದ ತ್ರಿವರ್ಣಧ್ವಜದ ಛಾಯಾವರ್ಣವನ್ನು ಬಿಡಲಾಗಿದ್ದು, ಈ ಮೂಲಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತದೊಂದಿಗೆ ಕೈಜೋಡಿಸಿದೆ. 

ಜಿನೇವಾ: ಸ್ವಿಜರ್ಲೆಂಡ್'ನ ಹೆಗ್ಗುರುತುಗಳಲ್ಲಿ ಒಂದಾಗಿರುವ ಮ್ಯಾಟರ್ ಹಾರ್ನ್ ಪರ್ವತಗಳ ಮೇಲೆ ಶುಕ್ರವಾರ ರಾತ್ರಿ ಭಾರತದ ರಾಷ್ಟ್ರಧ್ವಜವಾದ ತ್ರಿವರ್ಣಧ್ವಜದ ಛಾಯಾವರ್ಣವನ್ನು ಬಿಡಲಾಗಿದ್ದು, ಈ ಮೂಲಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತದೊಂದಿಗೆ ಕೈಜೋಡಿಸಿದೆ. 

ಸ್ವಿಜರ್ಲೆಂಡ್ ಖ್ಯಾತ ಬೆಳಕಿನ ಕಲಾವಿದ ಗ್ರೇ ಹಾಫ್ ಸೆಟ್ಟರ್ ಅವರು 14,690 ಅಡಿ ಎತ್ತರದ ಪರ್ವತವನ್ನು ತ್ರಿವರ್ಣಧ್ವಜದಿಂದ ಕಂಗೊಳಿಸುವಂತೆ ಮಾಡಿದ್ದಾರೆ. 

4 ಕಿ.ಮೀ ದೂರದಿಂಲೇ ಸೆಟ್ಟರ್ ಅವರು, ಲೈಟ್ ಪ್ರೊಜೆಕ್ಷನ್ ಇರಿಸಿ, ಪರ್ವತದ ಮೇಲೆ ಚಿತ್ತಾರ ಮೂಡಿಸಿ, ಇದು ಭರವಸೆಯ ಬೆಳಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 

ಭಾರತದ ರಾಜತಾಂತ್ರಿಕ ಅಧಿಕಾರಿಣಿ ಗುರ್ಲೀನ್ ಕೌರ್ ಅವರು, ಈ ಛಾಯಾಚಿತ್ರಗಳನ್ನು ಟ್ವೀಟ್ ಮಾಡಿದ್ದು, ಹಿಮಾಲಯದಿಂದ ಸ್ವಿಜರ್ಲೆಂಡ್'ನ ಆಲ್ಪ್ ಪರ್ವತದವರೆಗೆ ಸ್ನೇಹ ವಿಸ್ತರಿಸಿದೆ. ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. 

ಬುಧವಾರ ರಾತ್ರಿ ಕೂಡ ಸ್ವಿಸ್, ಅಮೆರಿಕಾ, ಬ್ರಿಟನ್, ಇಟಲಿಗಳ ರಾಷ್ಟ್ರಧ್ವಜಗಳು ಪರ್ವತದ ಮೇಲೆ ಪ್ರತಿಫಲಿಸುವಂತೆ ಮಾಡಲಾಗಿತ್ತು. 

ಹಾರ್ನ್ ಪರ್ವತಗಳ ಮೇಲೆ ಭಾರತದ ರಾಷ್ಟ್ರಧ್ವಜ ಪ್ರತಿಫಲಿಸಿರುವ ಈ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮಧ್ಯಪ್ರಾಚ್ಯ ಸಂಘರ್ಷ: ಇರಾನ್ ಯುದ್ಧಕ್ಕೆ ನಾನು 10ಕ್ಕೆ 15 ಅಂಕ ಕೊಡುತ್ತೇನೆ, ಅಮೆರಿಕಾ ಈಗ ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿದೆ': Donald Trump

ರಾಜ್ಯ ಬಜೆಟ್ 2026-27: ಮದ್ಯ ತೆರಿಗೆಯಿಂದ ರಾಜ್ಯಕ್ಕೆ ಭಾರೀ ಆದಾಯ, ಆದಾಯ ಗುರಿ 45,000 ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಚಿಂತನೆ..!

'ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಇಂಧನ ಬೆಲೆ ಬೆಲೆ ಏರಿಕೆ ಭೀತಿ, ಪೆಟ್ರೋಲ್ ಬಂಕ್‌'ಗಳಿಗೆ ಮುಗಿಬಿದ್ದ ಜನ..!

ಸಿಎಂ ಕುರ್ಚಿ ಕದನ ಮಧ್ಯೆ ಡಿಕೆಶಿಯಿಂದ ಮಾ.10ಕ್ಕೆ ಡಿನ್ನರ್ ಪಾರ್ಟಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸುತ್ತಾರಾ ಡಿಸಿಎಂ?

CM-ಪ್ರಧಾನಿ ಹುದ್ದೆಗೇರಿದವರು ಯಾವ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಿದ್ದಾರೆ: JDSಗೆ ಡಿಕೆಶಿ ಸವಾಲು

SCROLL FOR NEXT