ನಿರವ್ ಮೋದಿ 
ವಿದೇಶ

ಪಿಎನ್‌ಬಿ ಹಗರಣ: ನೀರವ್ ಮೋದಿ ನ್ಯಾಯಾಂಗ ಬಂಧನ ಅವಧಿ ಆ.27ರವರೆಗೆ ವಿಸ್ತರಣೆ, ಸೆಪ್ಟೆಂಬರ್‌ನಲ್ಲಿ ವಿಚಾರಣೆ

ಸುಮಾರು 2 ಬಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗೆ ವಂಚನೆ ಮಾಡಿದ್ದ ಆರೋಪದ ಮೇಲೆ ಯುಕೆ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸುತ್ತಿರುವ ದೇಶಭ್ರಷ್ಟ ವಜ್ರದ ವ್ಯಾಪಾರಿ ನೀರವ್ ಮೋದಿ ಇಂದು ವಿಡಿಯೋಲಿಂಕ್ ಮೂಲಕ ಕೋರ್ಟ್ ಗೆ ಹಾಜರಾಗಿದ್ದಾರೆ.

ಲಂಡನ್: ಸುಮಾರು 2 ಬಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗೆ ವಂಚನೆ ಮಾಡಿದ್ದ ಆರೋಪದ ಮೇಲೆ ಯುಕೆ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸುತ್ತಿರುವ ದೇಶಭ್ರಷ್ಟ ವಜ್ರದ ವ್ಯಾಪಾರಿ ನೀರವ್ ಮೋದಿ ಇಂದು ವಿಡಿಯೋಲಿಂಕ್ ಮೂಲಕ ಕೋರ್ಟ್ ಗೆ ಹಾಜರಾಗಿದ್ದಾರೆ. ಇದೀಗ ನ್ಯಾಯಾಲಯ ಅವರ ಬಂಧನ ಅವಧಿಯನ್ನು  ಆಗಸ್ಟ್ 27 ವರೆಗೆ ವಿಸ್ತರಿಸಿದ್ದು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿದೆ,

ಕಳೆದ ಮಾರ್ಚ್‌ನಲ್ಲಿ ಬಂಧನಕ್ಕೊಳಗಾದ ನಂತರ ನೈಋತ್ಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿರುವ ನೀರವ್ ಮೋದಿ ವಿಡಿಯೋಲಿಂಕ್ ಮೂಲಕವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ವನೆಸ್ಸಾ ಬಾರೈಟ್ಸರ್ ಅವರ ಮುಂದೆ ಹಾಜರಾಗಿದ್ದರು. ಇದು ಪ್ರತಿ  28 ದಿನಗಳಿಗೊಮ್ಮೆ ನಡೆಯುವ ಕಾಲ್-ಓವರ್ ಹಿಯರಿಂಗ್ ಆಗಿದೆ.

ನೀರವ್ ಮೋದಿ ಹಸ್ತಾಂತರದ ವಿಚಾರಣೆಯನ್ನುವಿಡಿಯೋಲಿಂಕ್  ಮೂಲಕವೇ ನಡೆಸಲಾಗುತ್ತಿದ್ದು ಎರಡನೇ ಭಾಗದ ವಿಚಾರಣೆಯು  ಸೆಪ್ಟೆಂಬರ್ 7 ಮತ್ತು 11 ರ ನಡುವೆ ನಿಗದಿಪಡಿಸಲಾಗಿದೆ. ಇದಲ್ಲದೆ, ನೀರವ್ ಮೋದಿ  ವಿರುದ್ಧ ಪ್ರಥಮ ಪ್ರಕರಣವನ್ನು ಸ್ಥಾಪಿಸುವ ವಾದಗಳನ್ನು ಪೂರ್ಣಗೊಳಿಸಿಮುಂದಿನ ತಿಂಗಳು ವಿಚಾರಣೆಯು ಎರಡನೇ ಹಸ್ತಾಂತರದ ಕೋರಿಕೆಯನ್ನು ಪ್ರಾರಂಭಿಸಲಾಗುವುದು.  ಇದನ್ನು ಭಾರತೀಯ ಅಧಿಕಾರಿಗಳು ಮತ್ತು ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಈ ವರ್ಷದ ಆರಂಭದಲ್ಲಿ ಪ್ರಮಾಣೀಕರಿಸಿದರು.

ಎರಡನೆಯ ವಿನಂತಿಯು ನೀರವ್ ಮೋದಿ ವಿರುದ್ಧ "ಸಾಕ್ಷ್ಯಗಳ ಕಣ್ಮರೆಗೆ ಕಾರಣವಾಗಿದೆ" ಮತ್ತು ಸಾಕ್ಷಿಗಳನ್ನು ಬೆದರಿಸುವುದು ಅಥವಾ "ಸಾವಿಗೆ ಕಾರಣವಾಗುವಂತೆ ಕ್ರಿಮಿನಲ್ ಬೆದರಿಕೆ" ಎಂಬ ಎರಡು ಹೆಚ್ಚುವರಿ ಆರೋಪಗಳನ್ನುಒಳಗೊಂಡಿದೆ. ನ್ಯಾಯಾಧೀಶರು ಎರಡು ವಿನಂತಿಗಳನ್ನು "ಬೇರ್ಪಡಿಸಲಾಗದಂತೆ ಲಿಂಕ್ ಮಾಡಲಾಗಿದೆ" ಎಂದು ಸೂಚಿಸಿದ್ದಾರೆ ಮತ್ತು ಆದ್ದರಿಂದ ಅವರು ಸೆಪ್ಟೆಂಬರ್‌ನಲ್ಲಿ ಎರಡನೇ ವಿಚಾರಣೆಯ ಕೊನೆಯಲ್ಲಿ ಒಟ್ಟಾರೆ ತೀರ್ಪನ್ನು ನೀಡಲಿದ್ದಾರೆ.

ಮೋದಿ ವಾಂಡ್ಸ್‌ವರ್ತ್ ಕಾರಾಗೃಹದ ಕೋಣೆಯಿಂದ ನ್ಯಾಯಾಲಯದ ವಿಚಾರಣೆಯನ್ನು ಅನುಸರಿಸುತ್ತಿದ್ದು ನಡು ನಡುವೆ ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel