ಕಲಾ ನಾರಾಯಣಸಾಮಿ 
ವಿದೇಶ

ಕೋವಿಡ್ ಸಂಕಷ್ಟ ಕಾಲದಲ್ಲಿ ಉತ್ತಮ ಸೇವೆ: ಭಾರತೀಯ ಮೂಲದ ದಾದಿಗೆ ಸಿಂಗಾಪುರ ಪ್ರೆಸಿಡೆಂಟ್ ಅವಾರ್ಡ್

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅತ್ಯಂತ ಮುತುವರ್ಜಿಯಿಂದ ಸೇವೆ ಸಲ್ಲಿಸಿದ್ದಕ್ಕಾಗಿ  ಸಿಂಗಾಪುರದ 59 ವರ್ಷದ ಭಾರತೀಯ ಮೂಲದ ದಾದಿಯೊಬ್ಬರಿಗೆ ದಾದಿಯರಿಗೆ ನೀಡಲಾಗುವ ಅತ್ಯುನ್ನತ ಪುರಸ್ಕಾರದಲ್ಲಿ ಒಂದಾದ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ನೀಡಿ ಸನ್ಮಾನಿಸಲಾಗಿದೆ.

ಸಿಂಗಾಪುರ: ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅತ್ಯಂತ ಮುತುವರ್ಜಿಯಿಂದ ಸೇವೆ ಸಲ್ಲಿಸಿದ್ದಕ್ಕಾಗಿ  ಸಿಂಗಾಪುರದ 59 ವರ್ಷದ ಭಾರತೀಯ ಮೂಲದ ದಾದಿಯೊಬ್ಬರಿಗೆ ದಾದಿಯರಿಗೆ ನೀಡಲಾಗುವ ಅತ್ಯುನ್ನತ ಪುರಸ್ಕಾರದಲ್ಲಿ ಒಂದಾದ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ನೀಡಿ ಸನ್ಮಾನಿಸಲಾಗಿದೆ.

ಭಾರತ ಮೂಲದವರಾದ  ಕಲಾ ನಾರಾಯಣಸಾಮಿ ಈ ಪ್ರತಿಷ್ಠಿತ ಗೌರವ ಸ್ವೀಕರಿಸಿದವರೆಂದು ತಿಳಿದುಬಂದಿದೆ. ಪ್ರಶಸ್ತಿಯು ಟ್ರೋಫಿ, ಅಧ್ಯಕ್ಷ ಹಲೀಮಾ ಯಾಕೋಬ್ ಸಹಿ ಮಾಡಿದ ಪ್ರಮಾಣಪತ್ರ ಮತ್ತು 10,000  ಸಿಂಗಾಪುರ ಡಾಲರ್ ( 7,228 ಅಮೆರಿಕನ್ ಡಾಲರ್) ನಗದನ್ನು ಒಳಗೊಂಡಿದೆ.

ವುಡ್ ಲ್ಯಾಂಡ್ಸ್ ಹೆಲ್ತ್ ಕ್ಯಾಂಪ್ ನ;ಲ್ಲಿ ನರ್ಸಿಂಗ್ ವಿಭಾಗದ ಉಪನಿರ್ದೇಶಕರಾಗಿರುವ ನಾರಾಯಣಸ್ವಾಮಿ  ಅವರಿಗೆ ಸೋಂಕಿನ ನಿಯಂತ್ರಣ ಅಭ್ಯಾಸದ ವೇಳೆ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ  ಪ್ರಶಸ್ತಿ ನೀಡಲಾಯಿತು, ಕೋವಿಡ್ 19 ರೋಗಿಗಳ ಆರೈಕೆಗಾಗಿ ಯಿಶುನ್ ಸಮುದಾಯ ಆಸ್ಪತ್ರೆಯಲ್ಲಿ ವಾರ್ಡ್‌ಗಳನ್ನು ಪರಿವರ್ತಿಸಲು ಕೆಲಸದ ಹರಿವು ಮತ್ತು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಪರಿಚಯಿಸುವ ಮೂಲಕ ನಾರಾಯಣಸ್ವಾಮಿ ಉತ್ತಮ ಸಾಧನೆ ಮಾಡಿದ್ದಾರೆ.

"ನಾವು ಸಾರ್ಸ್ ನಿಂದ ಕಲಿತದ್ದೆಲ್ಲವನ್ನೂ ಇಲ್ಲಿ ಪ್ರಯೋಗಕ್ಕೆ ಒಳಪಡಿಸಿದ್ದೇವೆ,. " ನಾರಾಯಣಸ್ವಾಮಿಯವರ ಹೆಸರು ಉಲ್ಲೇಖಿಸಿ ಚಾನೆಲ್ ನ್ಯೂಸ್ ಏಷ್ಯಾ  ವರದಿ ಹೇಳಿದೆ. ಸಿಂಗಾಪುರದಲ್ಲಿ ಶುಶ್ರೂಷೆಯ ಆಧುನೀಕರಣದೊಂದಿಗೆ ಅವರು ತೊಡಗಿಸಿಕೊಂಡಿದ್ದಾರೆ, ವಸ್ತುಗಳ ಬಳಕೆಯನ್ನು ಪತ್ತೆಹಚ್ಚಲು ಸ್ವಯಂಚೆಕ್ ಔಟ್ ದಾಸ್ತಾನು ನಿರ್ವಹಣಾ ವಿತರಣಾ ಮಾದರಿಯ ಜಾರಿ ಸೇರಿದಂತೆ  ನಿಖರವಾದ  ಮಾಪನಗಳು ಮತ್ತು ಇಮೇಜ್ ಸೆರೆಹಿಡಿಯುವಿಕೆಯನ್ನು ಒದಗಿಸುವ ಸುವ್ಯವಸ್ಥಿತ ಮೌಲ್ಯಮಾಪನ ಪ್ರಕ್ರಿಯೆಯ ಪರಿಚಯಿಸುವಲ್ಲಿಯೂ ಇವರ ಪಾತ್ರ ಮಹತ್ವದ್ದಾಗಿತ್ತು.

ರೋಗಿಗಳ ಆರೈಕೆ, ಕಾಳಜಿ, ಶಿಕ್ಷಣ, ಸಂಶೋಧನೆ ಮತ್ತು ಆಡಳಿತಕ್ಕೆ ನಿರಂತರ ಕೊಡುಗೆ ನೀಡಿ ಸಾಧನೆ ಮೆರೆದ ದಾದಿಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. 2000 ರಲ್ಲಿ ಈ ಪ್ರಶಸ್ತಿ ಸ್ಥಾಪನೆಯಾದಂದಿನಿಂದ ಇಂದಿನವರೆಗೆ ಒಟ್ಟೂ ಎಪ್ಪತ್ತೇಳು ದಾದಿಯರು ಈ ಗೌರವಕ್ಕೆ ಪಾತ್ರವಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT