ಮೈಕ್ ಪೋಂಪಿಯೊ 
ವಿದೇಶ

ಭಾರತಕ್ಕೆ ಚೀನಾ ಅಪಾಯ ಎದುರಿಸಲು ಅಮೆರಿಕಾ ಪಡೆಗಳ ವರ್ಗಾವಣೆ!

ಭಾರತಕ್ಕೆ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಎದುರಾಗಿರುವ ಚೀನಾ ಅಪಾಯವನ್ನು ಎದುರಿಸಲು ಅಮೆರಿಕಾ ಪಡೆಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಅಮೆರಿಕ ಸಚಿವ ಮೈಕ್ ಪೋಂಪಿಯೊ ಹೇಳಿದ್ದಾರೆ.

ಭಾರತಕ್ಕೆ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಎದುರಾಗಿರುವ ಚೀನಾ ಅಪಾಯವನ್ನು ಎದುರಿಸಲು ಅಮೆರಿಕಾ ಪಡೆಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಅಮೆರಿಕ ಸಚಿವ ಮೈಕ್ ಪೋಂಪಿಯೊ ಹೇಳಿದ್ದಾರೆ.

ಬ್ರಸಲ್ಸ್ ಫೋರಂ ಆಯೋಜಿಸಿದ್ದ ವಿಡಿಯೋ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಪೋಂಪಿಯೊ, ಜರ್ಮನಿಯಲ್ಲೇಕೆ ಅಮೆರಿಕ ಸೇನಾ ಸಿಬ್ಬಂದಿಗಳ ಇರುವಿಕೆಯನ್ನು ಕಡಿಮೆಗೊಳಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದು,  ಅಮೆರಿಕ ಯುರೋಪ್ ನಿಂದ ತನ್ನ ಸೇನಾ ಸಿಬ್ಬಂದಿಗಳನ್ನು ಕಡಿತಗೊಳಿಸುತ್ತಿದೆಯೆಂದರೆ, ಅದಕ್ಕೆ ಭಾರತ ಹಾಗೂ ದಕ್ಷಿಣ ಚೀನಾ ಸಮುದ್ರಗಳಲ್ಲಿ ಚೀನಾದಿಂದ ಎದುರಾಗಿರುವ ಅಪಾಯಗಳೂ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಿದ್ದು, ಯುರೋಪ್ ನಿಂದ ಅಮೆರಿಕಾ ಸೇನೆಗಳನ್ನು ಭಾರತ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದಿಂದ ಉಂಟಾಗಿರುವ ಅಪಾಯವನ್ನು ಎದುರಿಸಲು ನಿಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಚೀನಾದ ಕಮ್ಯುನಿಸ್ಟ್ ಪಕ್ಷದ ನಡೆಗಳಿಂದ ಭಾರತಕ್ಕೆ, ವಿಯೆಟ್ನಾಮ್ ಗೆ ಮಲೇಷ್ಯಾ, ಇಂಡೋನೇಷ್ಯಾ ಹಾಗೂ ದಕ್ಷಿಣ ಚೀನಾ ಸಮುದ್ರಕ್ಕೆ ಅಪಾಯ ಎದುರಾಗುತ್ತಿದೆ. ಈ ಅಪಾಯಗಳನ್ನು ಎದುರಿಸಲು ಅಮೆರಿಕಾ ಸೇನೆಯನ್ನು ಬಳಕೆ ಮಾಡಿಕೊಳ್ಳುವುದರತ್ತ ಗಮನ ಹರಿಸಿದ್ದೇವೆ ಎಂದು ಪೋಂಪಿಯೊ ಹೇಳಿದ್ದಾರೆ. ಭಾರತದೊಂದಿಗೆ ಗಡಿ ಸಂಘರ್ಷಕ್ಕೆ ಮುಂದಾಗಿ, ದಕ್ಷಿಣ ಚೀನಾ ಸಮುದ್ರವನ್ನು ಮಿಲಿಟರೀಕರಣಗೊಳಿಸಿದ್ದಕ್ಕೆ ಚೀನಾವನ್ನು ದುರಳ ನಡೆ ಹೊಂದಿರುವ ರಾಷ್ಟ್ರ ಎಂದು ಪೊಂಪಿಯೋ ಜರಿದಿದ್ದರು.

ನ್ಯಾಟೋ ಸೇರಿದಂತೆ ಹಲವು ಸಾಂಸ್ಥಿಕ ರಚನೆಯ ಮೂಲಕ ಮುಕ್ತ ಪ್ರಪಂಚ ಮಾಡಿರುವ ಎಲ್ಲಾ ಅಭಿವೃದ್ಧಿಗಳನ್ನೂ ಚೀನಾದ ಕಮ್ಯುನಿಸ್ಟ್ ಪಕ್ಷ ಹಾಳುಗೆಡವಲು ಯತ್ನಿಸುತ್ತಿದ್ದು, ತನಗೆ ಸಹಕಾರಿಯಾಗಬಲ್ಲ ನಿಯಮಗಳನ್ನು ರೂಪಿಸುತ್ತಿದೆ ಎಂದು ಪೊಂಪೊಯೋ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT