ಕಮಲ್ ಹ್ಯಾರಿಸ್ 
ವಿದೇಶ

ಕಮಲಾ ಹ್ಯಾರಿಸ್ ರನ್ನು ‘ದುರ್ಗಾಮಾತೆ‘ಯಾಗಿ ಚಿತ್ರಿಸಿದ್ದಕ್ಕೆ ಆಕ್ಷೇಪ: ಕ್ಷಮೆ ಕೋರುವಂತೆ ಹಿಂದೂಗಳ ಆಗ್ರಹ

ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ‘ದುರ್ಗಾಮಾತೆ‘ಯಾಗಿ ಚಿತ್ರಿಸಿ ಅದನ್ನು ಟ್ವೀಟ್‌ ಮಾಡಿದ ಕಮಲಾ ಅವರ ಸೋದರ ಸೊಸೆ ಮೀನಾ ಹ್ಯಾರಿಸ್ ಅವರು ಕ್ಷಮೆಯಾಚಿಸಬೇಕು ಎಂದು ಅಮೆರಿಕದಲ್ಲಿರುವ ಹಿಂದೂಗಳು ಆಗ್ರಹಿಸಿದ್ದಾರೆ.

ವಾಷಿಂಗ್ಟನ್‌: ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ‘ದುರ್ಗಾಮಾತೆ‘ಯಾಗಿ ಚಿತ್ರಿಸಿ ಅದನ್ನು ಟ್ವೀಟ್‌ ಮಾಡಿದ ಕಮಲಾ ಅವರ ಸೋದರ ಸೊಸೆ ಮೀನಾ ಹ್ಯಾರಿಸ್ ಅವರು ಕ್ಷಮೆಯಾಚಿಸಬೇಕು ಎಂದು ಅಮೆರಿಕದಲ್ಲಿರುವ ಹಿಂದೂಗಳು ಆಗ್ರಹಿಸಿದ್ದಾರೆ.

ವಿವಾದ ಸೃಷ್ಟಿಯಾಗುತ್ತಿದ್ದಂತೆ ಮೀನಾ ಹ್ಯಾರಿಸ್ ಅವರು ತಾವು ಟ್ವೀಟ್‌ ಮಾಡಿದ್ದ ಚಿತ್ರವನ್ನು ತಕ್ಷಣ ತೆಗೆದು ಹಾಕಿದ್ದಾರೆ. ಅಮೆರಿಕದಲ್ಲಿ ವಕೀಲೆಯಾಗಿರುವ ಮೀನಾ ಅವರು, ಮಕ್ಕಳ ಪುಸ್ತಕದ ಲೇಖಕಿಯೂ ಹೌದು. ಜತೆಗೆ, ಫೆನೊಮಿನಲ್ ವುಮೆನ್ ಆಕ್ಷನ್ ಆಂದೋಲನದ ಸಂಸ್ಥಾಪಕಿ.

ಮೀನಾ ಅವರ ಟ್ವೀಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಹಿಂದೂ ಅಮೆರಿಕನ್‌ ಫೌಂಡೇಷನ್‌ನ ಸುಹಾಗ್ ಎ ಶುಕ್ಲಾ, ‘ನೀವು ದೇವಿ ದುರ್ಗಾಮಾತೆಯ ವ್ಯಂಗ್ಯಚಿತ್ರವನ್ನು ಟ್ವೀಟ್ ಮಾಡಿದ್ದೀರಿ. ದೇವಿಯ ಮುಖವನ್ನು ತಿರುಚಿದಂತೆ ಚಿತ್ರಿಸುವ ಮೂಲಕ, ವಿಶ್ವದ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದೀರಿ‘ ಎಂದು ಟ್ವೀಟ್ ಮಾಡಿದ್ದಾರೆ.

ಅಮೆರಿಕದಲ್ಲಿರುವ ಹಿಂದೂ ಸಮುದಾಯವನ್ನು ಪ್ರತಿನಿಧಿಸುವ ಈ ಫೌಂಡೇಷನ್‌, ಧರ್ಮಕ್ಕೆ ಸಂಬಂಧಿಸಿದ ಚಿತ್ರಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಾಗ ಅನುಸರಿಸುವ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಹಿಂದೂ ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ರಿಷಿ ಭೂತಾಡಾ, ‘ಈ ಅವಮಾನಕರ ಚಿತ್ರವನ್ನು ಮೀನಾ ಹ್ಯಾರಿಸ್ ರಚಿಸಿಲ್ಲ. ಅವರು ಈ ಚಿತ್ರವನ್ನು ಟ್ವೀಟ್ ಮಾಡುವ ಮುನ್ನವೇ ಅದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿತ್ತು. ಈ ಚಿತ್ರವನ್ನು ನಮ್ಮ ತಂಡ ಸೃಷ್ಟಿಸಿಲ್ಲ ಎಂದು ಈಗಾಗಲೇ ಜೊ ಬೈಡನ್ ಪ್ರಚಾರ ತಂಡ ಖಚಿತಪಡಿಸಿದೆ‘ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

SCROLL FOR NEXT