ಕುಲಭೂಷಣ್ ಜಾಧವ್ 
ವಿದೇಶ

ಕುಲಭೂಷಣ್ ಜಾಧವ್ ಪ್ರತಿನಿಧಿಸಲು ವಕೀಲರ ನೇಮಿಸಿ: ಭಾರತಕ್ಕೆ ಪಾಕಿಸ್ತಾನ ಒತ್ತಾಯ

ಅಂತರಾಷ್ಟ್ರೀಯ ನ್ಯಾಯಾಂಗದ ತೀರ್ಪು ಜಾರಿಗಾಗಿ ಮರಣದಂಡನೆ ಶಿಕ್ಷೆಗೊಳಗಾದ ಕುಲಭೂಷಣ್ ಜಾಧವ್ ಅವರನ್ನು ಪ್ರತಿನಿಧಿಸಲು ವಕೀಲರನ್ನು ನೇಮಿಸುವಂತೆ ಪಾಕಿಸ್ತಾನ ಭಾರತವನ್ನು ಮತ್ತೊಮ್ಮೆ ಒತ್ತಾಯಿಸಿದೆ.

ಇಸ್ಲಾಮಾಬಾದ್: ಅಂತರಾಷ್ಟ್ರೀಯ ನ್ಯಾಯಾಂಗದ ತೀರ್ಪು ಜಾರಿಗಾಗಿ ಮರಣದಂಡನೆ ಶಿಕ್ಷೆಗೊಳಗಾದ ಕುಲಭೂಷಣ್ ಜಾಧವ್ ಅವರನ್ನು ಪ್ರತಿನಿಧಿಸಲು ವಕೀಲರನ್ನು ನೇಮಿಸುವಂತೆ ಪಾಕಿಸ್ತಾನ ಭಾರತವನ್ನು ಮತ್ತೊಮ್ಮೆ ಒತ್ತಾಯಿಸಿದೆ.

ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ಗುರುವಾರ ಈ ಪ್ರಕರಣದ ವಿಚಾರಣೆ ನಡೆಸುವ ವೇಳೆ ವಿದೇಶಾಂಗ ಕಚೇರಿಯನ್ನು (ಎಫ್‌ಒ) ಭಾರತವನ್ನು ಸಂಪರ್ಕಿಸಿ ವಕೀಲರನ್ನು ನೇಮಕ ಮಾಡುವ ಬಗ್ಗೆ ಮತ್ತು ನ್ಯಾಯಾಲಯವು ವಿಚಾರಣೆಗೆ ಒಳಪಡಿಸುವ ಪ್ರಕರಣದ ನ್ಯಾಯವ್ಯಾಪ್ತಿಯ ವಿಷಯವನ್ನು ಸ್ಪಷ್ಟಪಡಿಸುವ ಬಗ್ಗೆ ಕೇಳಿದೆ.

ವಿದೇಶಾಂಗ ಕಚೇರಿ ವಕ್ತಾರ ಝಿಯಾದ್ ಹಫೀಜ್ ಚೌಧರಿ, ವಾರದ ಬ್ರೀಫಿಂಗ್ ಅನ್ನು ಉದ್ದೇಶಿಸಿ"ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ವಕೀಲರನ್ನು ನೇಮಕ ಮಾಡುವ ಮೂಲಕ ಪಾಕಿಸ್ತಾನದ ನ್ಯಾಯಾಲಯದೊಂದಿಗೆ ಸಹಕರಿಸುವಂತೆ ನಾವು ಮತ್ತೊಮ್ಮೆ ಭಾರತವನ್ನು ಒತ್ತಾಯಿಸುತ್ತೇವೆ, ಇದರಿಂದಾಗಿ ಐಸಿಜೆ ತೀರ್ಪಿನ ಪೂರ್ಣ ಪರಿಣಮಕಾರಿ ಜಾರಿ ಸಾಧ್ಯವಾಗಲಿದೆ" ಎಂದರು.

50 ವರ್ಷದ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್ ಅವರಿಗೆ 2017 ರ ಏಪ್ರಿಲ್‌ನಲ್ಲಿ ಗೂಡಚಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಜಾಧವ್‌ಗೆ ಕಾನ್ಸುಲರ್ ಪ್ರವೇಶವನ್ನು ನಿರಾಕರಿಸಿದ್ದಕ್ಕಾಗಿ ಮತ್ತು ಮರಣದಂಡನೆಯನ್ನು ಪ್ರಶ್ನಿಸಿದ್ದಭಾರತ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಹೇಗ್ ಮೂಲದ ಐಸಿಜೆ ಜುಲೈ 2019 ರಲ್ಲಿ ತೀರ್ಪು ನೀಡಿಜಾಧವ್ ಅವರ ಶಿಕ್ಷೆ ಮತ್ತು ಶಿಕ್ಷೆಯ ಬಗ್ಗೆ ಪಾಕಿಸ್ತಾನವು "ಪರಿಣಾಮಕಾರಿ ವಿಮರ್ಶೆ ಮತ್ತು ಮರುಪರಿಶೀಲನೆ" ಯನ್ನು ಕೈಗೊಳ್ಳಬೇಕು ಮತ್ತು ಹೆಚ್ಚಿನ ವಿಳಂಬವಿಲ್ಲದೆ ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ನೀಡಬೇಕು. ಎಂದಿತ್ತು. ಅಲ್ಲದೆ ಐಸಿಜೆ ತನ್ನ 2019 ರ ತೀರ್ಪಿನಲ್ಲಿ, ಜಾಧವ್ ಅವರಿಗೆ ಮಿಲಿಟರಿ ನ್ಯಾಯಾಲಯ ನೀಡಿದ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರಿಯಾದ ವೇದಿಕೆಯನ್ನು ನೀಡುವಂತೆ ಪಾಕಿಸ್ತಾನವನ್ನು ಕೇಳಿಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲ ಗೆಹ್ಲೋಟ್!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!