ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಂಡುಬಂದ ಶಿಶುಗಳ ಪರಿಸ್ಥಿತಿ 
ವಿದೇಶ

ಅಫ್ಘಾನ್ ನಲ್ಲಿ ಹೃದಯವಿದ್ರಾವಕ ಘಟನೆ: ಶಿಶುಗಳನ್ನು ಏರ್ ಪೋರ್ಟ್ ನತ್ತ ಎಸೆಯುತ್ತಿರುವ ಹತಾಶ ಮಹಿಳೆಯರು!

ಅಫ್ಘಾನಿಸ್ತಾನ ತಾಲೀಬಾನ್ ವಶವಾದಾಗಿನಿಂದಲೂ ಆ ದೇಶದ ಜನತೆ ಭಯದ ನಡುವೆ ಜೀವನ ನಡೆಸುತ್ತಿದ್ದಾರೆ.

ಕಾಬೂಲ್: ಅಫ್ಘಾನಿಸ್ತಾನ ತಾಲೀಬಾನ್ ವಶವಾದಾಗಿನಿಂದಲೂ ಆ ದೇಶದ ಜನತೆ ಭಯದ ನಡುವೆ ಜೀವನ ನಡೆಸುತ್ತಿದ್ದಾರೆ.

ತಾಲೀಬಾನ್ ಆಡಳಿತಕ್ಕೆ ಹೆದರಿ ಹಲವು ಮಂದಿ ದೇಶ ತೊರೆಯುತ್ತಿದ್ದರೆ, ಉಗ್ರರಿಂದ ತಪ್ಪಿಸಿಕೊಳ್ಳುವ ಹಲವರ ಕನಸು ಕಾಬೂಲ್ ನ ವಿಮಾನ ನಿಲ್ದಾಣದಲ್ಲಿಯೇ ಶಾಶ್ವತವಾಗಿ ಕಮರಿಹೋಗುತ್ತಿದೆ. ಈ ನಡುವೆ ಮಹಿಳೆಯರು ತಮ್ಮ ಶಿಶುಗಳನ್ನು ರಕ್ಷಿಸಲು ಅನ್ಯ ಮಾರ್ಗವಿಲ್ಲದೇ ವಿಮಾನ ನಿಲ್ದಾಣಗಳತ್ತ ಎಸೆಯುತ್ತಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ಸ್ಕೈ ನ್ಯೂಸ್ ವರದಿಯ ಪ್ರಕಾರ, ತಾಲೀಬಾನ್ ಭೀತಿಯಿಂದ ಹತಾಶಗೊಂಡಿರುವ ಮಹಿಳೆಯರು ಕಾಬೂಲ್ ವಿಮಾನ ನಿಲ್ದಾಣದ ಗೋಡೆಗೆ ಅಳವಡಿಸಲಾಗಿರುವ ರೇಜರ್ ವೈರ್ ನ ಆಚೆ ಬದಿಗೆ ತಮ್ಮ ಶಿಶುಗಳನ್ನು ಎಸೆಯುತ್ತಿರುವ ದೃಶ್ಯಗಳು ಕಂಡುಬಂದಿದೆ.

ಸ್ಕೈ ನ್ಯೂಸ್ ನ ವರದಿಗಾರ ಸ್ಟ್ರೌಟ್ ರಾಮ್ಸೆ ಅವರಿಗೆ ಹಿರಿಯ ಬ್ರಿಟೀಷ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಕಾಬೂಲ್ ನಿಂದ ತೆರಳಲು ಯತ್ನಿಸುತ್ತಿದ್ದವರಲ್ಲಿ ಹತಾಶ ಕೂಗು ಕೇಳಿಬರುತ್ತಿತ್ತು. ಮಹಿಳೆಯರು ಶಿಶುಗಳನ್ನು ವಿಮಾನ ನಿಲ್ದಾಣದ ರೇಜರ್ ತಂತಿಯಾಚೆಗೆ ಎಸೆದು ಮಕ್ಕಳನ್ನು ಕರೆದೊಯ್ಯುವಂತೆ ಬ್ರಿಟೀಶ್ ಯೋಧರಲ್ಲಿ ಕೇಳುತ್ತಿದ್ದರು ಎಂದು ಹೇಳಿದ್ದಾರೆ.

"ನಾನು ನನ್ನ ಜನರ ಬಗ್ಗೆ ಆತಂಕಿತನಾಗಿದ್ದೇನೆ, ಅವರಲ್ಲಿ ಹಲವರಿಗೆ ಸಮಾಧಾನ ಹೇಳುತ್ತಿದ್ದೇನೆ, ಮಹಿಳೆಯರು ಶಿಶುಗಳನ್ನು ರಕ್ಷಿಸುವುದಕ್ಕಾಗಿ ಎಸೆಯುತ್ತಿದ್ದ ಘಟನೆ ನೆನೆದು ಕಳೆದ ರಾತ್ರಿ ಎಲ್ಲರೂ ಕಣ್ಣೀರಿಟ್ಟಿದ್ದರು" ಎಂದು ಬ್ರಿಟನ್ ಅಧಿಕಾರಿ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ಕುಟುಂಬಗಳು ತಾಲಿಬಾನಿಗಳ ಕಿರುಕುಳ, ದಬ್ಬಾಳಿಕೆಗೆ ಭಯಪಟ್ಟು ಅಪಾಯದಲ್ಲೇ ಬದುಕುತ್ತಿದ್ದಾರೆ. ಅಫ್ಘಾನಿಸ್ತಾನದಿಂದ ಹೊರ ನಡೆಯಲು ಬ್ರಿಟನ್ ಯೋಧರು ತಮ್ಮ ಸರದಿಗಾಗಿ ಕಾಬೂಲ್ ನ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT