ನಿರಾಶ್ರಿತರ ಸ್ಥಾನಮಾನ-ಕಾರ್ಡ್ ನೀಡಲು ಆಗ್ರಹಿಸಿ ಯುಎನ್ ಹೆಚ್ ಸಿಆರ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಅಫ್ಘನ್ನರು 
ವಿದೇಶ

ರಾಜಕೀಯ ಅಸ್ಥಿರತೆ: ಮುಂದಿನ 4 ತಿಂಗಳಲ್ಲಿ ಅಫ್ಘಾನಿಸ್ತಾನ ತೊರೆಯಲಿರುವ 5 ಲಕ್ಷ ಮಂದಿ: ಯುಎನ್ ಹೆಚ್ ಸಿಆರ್

ದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ 4 ತಿಂಗಳಲ್ಲಿ 5 ಲಕ್ಷ ಮಂದಿ ಅಫ್ಘನ್ನರು ತಮ್ಮ ದೇಶವನ್ನು ತೊರೆಯಲಿದ್ದಾರೆ ಎಂದು ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆ ಹೈಕಮಿಷನರ್ (ಯುಎನ್ ಹೆಚ್ ಸಿಆರ್)  ಅಂದಾಜಿಸಿದೆ.

ನವದೆಹಲಿ: ದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ 4 ತಿಂಗಳಲ್ಲಿ 5 ಲಕ್ಷ ಮಂದಿ ಅಫ್ಘನ್ನರು ತಮ್ಮ ದೇಶವನ್ನು ತೊರೆಯಲಿದ್ದಾರೆ ಎಂದು ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆ ಹೈಕಮಿಷನರ್ (ಯುಎನ್ ಹೆಚ್ ಸಿಆರ್)  ಅಂದಾಜಿಸಿದೆ.

ಯುಎನ್ ಹೆಚ್ ಸಿಆರ್ ಪ್ರಕಾರ ಈ ವರೆಗೂ ಸಾಮೂಹಿಕ ವಲಸೆ ಕಂಡುಬಂದಿಲ್ಲ. ಆದರೆ ಪರಿಸ್ಥಿತಿಯ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ಸಾಮೂಹಿಕ ವಲಸೆ ಪ್ರಾರಂಭವಾಗಬಹುದು.

ಅಫ್ಘಾನಿಸ್ತಾನದಿಂದ ಈವರೆಗೂ ವಲಸೆ ಹೋಗುತ್ತಿರುವುದು ಖಚಿತವಾಗಿಲ್ಲ. ನಿರೀಕ್ಷೆಗೂ ಮೀರಿ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಗಳು ಬೆಳವಣಿಗೆಯಾಗಿದೆ ಎಂದು ಡೆಪ್ಯುಟಿ ಹೈ ಕಮಿಷನರ್ ಕೆಲ್ಲಿ ಟಿ ಕ್ಲೆಮೆಂಟ್ಸ್ ಹೇಳಿದ್ದಾರೆ.

ಇದೇ ವೇಳೆ ಯುಎನ್ ಹೆಚ್ ಸಿಆರ್ ಅಫ್ಘನ್ ನಿರಾಶ್ರಿತರಿಗೆ ಗಡಿಗಳನ್ನು ಮುಕ್ತವಾಗಿಡುವಂತೆ ಅಫ್ಘಾನಿಸ್ತಾನದ ನೆರೆ ರಾಷ್ಟ್ರಗಳಿಗೆ ಕರೆ ನೀಡಿದೆ.

ಇನ್ನು ವಿಶ್ವ ಆರೋಗ್ಯ ಯೋಜನೆ (ಡಬ್ಲ್ಯುಎಫ್ ಪಿ) ವಿಶ್ವಸಂಸ್ಥೆಗೆ ಮನವಿ ಮಾಡಿದ್ದು, ಅಗತ್ಯವಿರುವ ಅಫ್ಘನ್ನರಿಗೆ ಆಹಾರ ನೀಡುವುದಕ್ಕಾಗಿ ಸಂಸ್ಥೆಗೆ 12 ಮಿಲಿಯನ್ ಯುಎಸ್ ಡಾಲರ್ಸ್ ನೆರವು ನೀಡುವಂತೆ ಕೋರಿದೆ. ಅಫ್ಘಾನಿಸ್ತಾನದ ಸ್ಥಳಿಯರ ಪ್ರಕಾರ ದೇಶದಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ನಿರುದ್ಯೋಗ ಸಮಸ್ಯೆಗಳು ದೇಶ ಬಿಡುವ ಸನ್ನಿವೇಶವನ್ನುಂಟುಮಾಡಿವೆ.

ದೇಶ ತೊರೆಯುವುದಕ್ಕೆ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಹಲವು ಸಾವಿರ ಕುಟುಂಬಗಳು ಕಾಯುತ್ತಿವೆ. ಈ ಪೈಕಿ ಇರುವ ಹಬೀಬುಲ್ಲಾ ಕುಟುಂಬ ಸದಸ್ಯರು ಮಾತನಾಡಿದ್ದು, ನಾಲ್ಕು ವರ್ಷಗಳ ಕಾಲ ವಿದೇಶಿಗರೊಂದಿಗೆ ಕೆಲಸ ಮಾಡಿದ್ದೇನೆ. ಈಗ ನನಗೆ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ತಾಲೀಬಾನಿಗಳು ವಿದೇಶಿಗರೊಂದಿಗೆ ಕೆಲಸ ಮಾಡಿದ್ದರಿಗಾಗಿ ಹುಡುಕಿ ಹತ್ಯೆ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನು ಕೇಳ್ಪಟ್ಟೆ. ಈ ಕಾರಣದಿಂದ ದೇಶ ತೊರೆಯಬೇಕಾಗಿದೆ ಎಂದು ಹಬೀಬುಲ್ಲ ಹೇಳಿದ್ದಾರೆ.

"ದೇಶದಲ್ಲಿ ಉಂಟಾಗಿರುವ ಭದ್ರತೆ ಸಮಸ್ಯೆಗಳು ಹಾಗೂ ನಿರುದ್ಯೋಗ ಸಮಸ್ಯೆಗಳು ನಮ್ಮನ್ನು ದೇಶ ತೊರೆಯುವಂತೆ ಮಾಡಿವೆ" ಎನ್ನುತ್ತಾರೆ ಹಬೀಬುಲ್ಲಾ ಅವರ ಪುತ್ರ

ಇನ್ನು ಮಹಿಳೆಯರು ಅತಂತ್ರ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ವಿದ್ಯಾವಂತರಾಗಿ ಶ್ರಮಿಸಿ ಕೆಲಸ ಮಾಡುತ್ತಿದ್ದವರಿಗೆ ಈಗ ತಮ್ಮ ಭವಿಷ್ಯ ಡೋಲಾಯಮಾನವಾಗಿದ್ದು ತಮಗೇನಾಗಲಿದೆ ಎಂಬುದೂ ತಿಳಿಯದ ಪರಿಸ್ಥಿತಿಯಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT