ಸಿರಿಶಾ ಬಾಂದ್ಲಾ 
ವಿದೇಶ

ಬಾಹ್ಯಾಕಾಶದಿಂದ ಭೂಮಿಯನ್ನು ನೋಡುವುದು ಜೀವನವನ್ನು ಬದಲಾಯಿಸುವ ಅನುಭವ: ಗಗನಯಾತ್ರಿ ಸಿರಿಶಾ ಬಾಂದ್ಲಾ

ಬ್ರಿಟನ್​ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ ಕನಸಿನ ಬಾಹ್ಯಾಕಾಶ ಯೋಜನೆ ವರ್ಜಿನ್ ಗ್ಯಾಲಕ್ಟಿಕ್ ಪರೀಕ್ಷಾ ಹಾರಾಟದಲ್ಲಿ ತನ್ನ ಮೊದಲ ಪ್ರವಾಸದ ಕೈಗೊಂಡಿರುವ ಭಾರತೀಯ-ಅಮೆರಿಕನ್ ಗಗನಯಾತ್ರಿ ಸಿರಿಶಾ ಬಾಂದ್ಲಾ, ಭೂಮಿಯನ್ನು ಬಾಹ್ಯಾಕಾಶದಿಂದ ನೋಡುವುದು 'ನಂಬಲಾಗದ' ಮತ್ತು 'ಜೀವನವನ್ನು ಬದಲಾಯಿಸುವ' ಅನುಭವ ಎಂದು ಹೇಳಿದ್ದಾರೆ.

ಹೌಸ್ಟನ್: ಬ್ರಿಟನ್​ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ ಕನಸಿನ ಬಾಹ್ಯಾಕಾಶ ಯೋಜನೆ ವರ್ಜಿನ್ ಗ್ಯಾಲಕ್ಟಿಕ್ ಪರೀಕ್ಷಾ ಹಾರಾಟದಲ್ಲಿ ತನ್ನ ಮೊದಲ ಪ್ರವಾಸದ ಕೈಗೊಂಡಿರುವ ಭಾರತೀಯ-ಅಮೆರಿಕನ್ ಗಗನಯಾತ್ರಿ ಸಿರಿಶಾ ಬಾಂದ್ಲಾ, ಭೂಮಿಯನ್ನು ಬಾಹ್ಯಾಕಾಶದಿಂದ ನೋಡುವುದು 'ನಂಬಲಾಗದ' ಮತ್ತು 'ಜೀವನವನ್ನು ಬದಲಾಯಿಸುವ' ಅನುಭವ ಎಂದು ಹೇಳಿದ್ದಾರೆ.

ಬಾಹ್ಯಾಕಾಶದತ್ತ ಜಿಗಿದಿದ್ದ ವಿಎಸ್​ಎಸ್​ ಯುನಿಟಿ ನೌಕೆಯಲ್ಲಿ Virgin Galactic ಸಂಸ್ಥೆಯ ಸಂಸ್ಥಾಪಕ ಉದ್ಯಮಿ ರಿಚರ್ಡ್ ಬ್ರಾನ್ಸನ್ ಮತ್ತು ಭಾರತ ಮೂಲದ ಗಗನಯಾನಿ 34 ವರ್ಷದ ಸಿರಿಶಾ ಬಾಂದ್ಲಾ ಸೇರಿದಂತೆ ಆರು ಗಗನಯಾನಿಗಳು ಬಾಹ್ಯಾಕಾಶಕ್ಕೆ ಜಿಗಿದಿದ್ದರು. 

'ನಾನು ಇನ್ನೂ ಅಲ್ಲಿಯೇ ಇದ್ದೇನೆ. ಆದರೆ ಇಲ್ಲಿಗೆ ಬಂದಿರುವುದು ತುಂಬಾ ಖುಷಿಯಾಗಿದೆ. ನಾನು ನಂಬಲಸಾಧ್ಯವಾದದ್ದಕ್ಕಿಂತ ಉತ್ತಮವಾದ ಪದದ ಬಗ್ಗೆ ಯೋಚಿಸಲು ಪ್ರಯತ್ನಿಸುತ್ತಿದ್ದೆ ಆದರೆ ಅದು ನನ್ನ ಮನಸ್ಸಿಗೆ ಬರಬಹುದಾದ ಏಕೈಕ ಪದವಾಗಿದೆ. ಭೂಮಿಯ ಕಣ್ಣಿನಿಂದ ನೋಡುವುದರಿಂದ ಜೀವನ ಬದಲಾಗುತ್ತದೆ. ಬಾಹ್ಯಾಕಾಶ ಮತ್ತು ಹಿಂದಕ್ಕೆ ಇಡೀ ಪ್ರವಾಸವು ಅದ್ಭುತವಾಗಿದೆ ಎಂದು ಬಾಂದ್ಲಾ ಎನ್ಬಿಸಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಈ ಕ್ಷಣವನ್ನು ಭಾವನಾತ್ಮಕ ಎಂದು ವಿವರಿಸಿದ ಬಾಂದ್ಲಾ, "ನಾನು ಚಿಕ್ಕವಳಿದ್ದಾಗಿನಿಂದಲೂ ಬಾಹ್ಯಾಕಾಶಕ್ಕೆ ಹೋಗುವ ಕನಸು ಕಾಣುತ್ತಿದ್ದೇ, ಇಂದು ಅಕ್ಷರಶಃ ಒಂದು ಕನಸು ನನಸಾಗಿದೆ" ಎಂದು ಬಾಂದ್ಲಾ ಹೇಳಿದರು.

'ನಾನು ಗಗನಯಾತ್ರಿ ಆಗಬೇಕೆಂದು ಬಯಸಿದ್ದೇ. ಆದರೆ ಸ್ವದೇಶದ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಸಂಸ್ಧೆ(ನಾಸಾ)ಗೆ ಸೇರಲು ನನ್ನಿಂದ ಸಾಧ್ಯವಾಗಲಿಲ್ಲ. ಬಾಹ್ಯಾಕಾಶಕ್ಕೆ ಹೋಗಲು ನಾನು ಅಸಾಂಪ್ರದಾಯಿಕ ಮಾರ್ಗವನ್ನು ತೆಗೆದುಕೊಂಡಿದ್ದೇನೆ. ಮುಂದೆ ಬಹಳಷ್ಟು ಜನರು ಹೋಗಲಿದ್ದಾರೆ ಎಂದು ನಾನು ನಂಬುತ್ತೇನೆ. ಇದನ್ನು ಅನುಭವಿಸಲು ಸಾಧ್ಯವಾಗುತ್ತದೆ ಮತ್ತು ಅದಕ್ಕಾಗಿಯೇ ನಾವು ಇಲ್ಲಿದ್ದೇವೆ ಎಂದು ಅವರು ಹೇಳಿದರು.

ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ನಂತರ ಬಾಹ್ಯಾಕಾಶಕ್ಕೆ ಹಾರಿದ ಮೂರನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಸಿರಿಶಾ ಬಾಂದ್ಲಾ ಪಾತ್ರರಾಗಿದ್ದಾರೆ. ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಏಕೈಕ ಭಾರತೀಯ ಪ್ರಜೆ. ಮಾಜಿ ಭಾರತೀಯ ವಾಯುಪಡೆಯ ಪೈಲಟ್ ಸೋವಿಯತ್ ಇಂಟರ್ಕೊಸ್ಮೋಸ್ ಕಾರ್ಯಕ್ರಮದ ಭಾಗವಾಗಿ ಏಪ್ರಿಲ್ 3, 1984ರಂದು ಸೋಯುಜ್ ಟಿ -11 ನಲ್ಲಿ ಹಾರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT