ಡ್ಯಾನಿಶ್ ಸಿದ್ದಿಕಿ 
ವಿದೇಶ

ತಾಲಿಬಾನ್ ನಿಂದ ಭಾರತೀಯ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ಬರ್ಬರ ಹತ್ಯೆ: ವರದಿ

ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸುಮ್ಮನೆ ಕೊಲ್ಲಲ್ಪಟ್ಟಿಲ್ಲ, ಗುರುತನ್ನು ಪತ್ತೆಹಚ್ಚಿದ ನಂತರ ತಾಲಿಬಾನ್‌ನಿಂದ ಬರ್ಬರ ರೀತಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಯುಎಸ್ ಮೂಲದ ನಿಯತಕಾಲಿಕವೊಂದರಲ್ಲಿ ಗುರುವಾರ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.

ವಾಷಿಂಗ್ಟನ್: ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸುಮ್ಮನೆ ಕೊಲ್ಲಲ್ಪಟ್ಟಿಲ್ಲ, ಗುರುತನ್ನು ಪತ್ತೆಹಚ್ಚಿದ ನಂತರ ತಾಲಿಬಾನ್‌ನಿಂದ ಬರ್ಬರ ರೀತಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಯುಎಸ್ ಮೂಲದ ನಿಯತಕಾಲಿಕವೊಂದರಲ್ಲಿ ಗುರುವಾರ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ. 38 ವರ್ಷದ ಸಿದ್ಧಿಕಿ ಅಫ್ಘಾನಿಸ್ತಾನದಲ್ಲಿ ಕರ್ತವ್ಯದಲ್ಲಿ ನಿಯೋಜನೆಯಲ್ಲಿದ್ದಾಗ ಮೃತಪಟ್ಟಿದ್ದರು.

ವಾಷಿಂಗ್ಟನ್ ಪರಿಶೀಲನಾ ವರದಿ ಪ್ರಕಾರ, ಅಪ್ಘಾನ್ ಪಡೆ ಮತ್ತು ತಾಲಿಬಾನ್ ನಡುವಿನ ಕಾಳಗವನ್ನು ಸೆರೆ ಹಿಡಿಯಲು ಅಪ್ಘಾನ್ ರಾಷ್ಟ್ರೀಯ ಸೇನಾ ಸಿಬ್ಬಂದಿಯೊಂದಿಗೆ ಸ್ಪಿನ್ ಬೊಲ್ಡಾಕ್ ವಲಯಕ್ಕೆ ಸಿದ್ದಿಕಿ ತೆರಳಿದ್ದರು. ಕಸ್ಟಮ್ಸ್ ಪೋಸ್ಟ್‌ನ ಮೂರನೇ ಮೈಲಿಯಷ್ಟು ದೂರ ಹೋದಾಗ ತಾಲಿಬಾನ್  ಆ ತಂಡದ ಮೇಲೆ ದಾಳಿ ಮಾಡಿದ್ದು, ಕಮಾಂಡರ್ ಮತ್ತು ಕೆಲವರು ಸಿದ್ದಿಕಿಯಿಂದ ಪ್ರತ್ಯೇಕಗೊಂಡಿದ್ದಾರೆ. ಇತರ ಮೂವರು ಅಪ್ಘಾನ್ ಪಡೆ ಅವರೊಂದಿಗೆ ಇದ್ದರು. ದಾಳಿ ವೇಳೆ ಸ್ಫೋಟಕಗಳು ಸಿದ್ಧಿಕಿಗೆ ಹೊಡೆದ್ದಿದ್ದರಿಂದ ಸ್ಥಳೀಯ ಮಸೀದಿಯೊಂದಕ್ಕೆ ತೆರಳಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ.

 ಆದಾಗ್ಯೂ, ಒಬ್ಬ ಪತ್ರಕರ್ತ ಮಸೀದಿಯಲ್ಲಿದ್ದನೆಂಬ ಸುದ್ದಿ ಹರಡುತ್ತಿದ್ದಂತೆ, ತಾಲಿಬಾನ್ ದಾಳಿ ಮಾಡಿತು. ಸಿದ್ಧಿಕಿ ಅಲ್ಲಿದ್ದರಿಂದಲೇ  ತಾಲಿಬಾನ್ ಮಸೀದಿ ಮೇಲೆ ದಾಳಿ ಮಾಡಿತ್ತು ಎಂದು ಸ್ಥಳೀಯ ಮಾಹಿತಿಗಳಿಂದ ತಿಳಿದುಬಂದಿದೆ ಎಂದು ವರದಿ ಹೇಳಿದೆ. ಜೀವಂತವಾಗಿದ್ದ ಸಿದ್ದಿಕಿಯನ್ನು ಸೆರೆ ಹಿಡಿದ ತಾಲಿಬಾನ್ ಗುರುತು ಪತ್ತೆ ಹಚ್ಚಿದ ನಂತರ ಆತನನ್ನು ಗಲ್ಲಿಗೇರಿಸಿದೆ. ಆತನನ್ನು ರಕ್ಷಿಸಲು ಮುಂದಾದ ಕಮಾಂಡರ್ , ತಂಡದಲ್ಲಿದ್ದ ಇತರರನ್ನು ಸಹ ಸಾಯಿಸಿದೆ ಎಂದು ವರದಿ ತಿಳಿಸಿದೆ.

ಸಿದ್ದಿಕಿ ಅವರ ದೇಹದ ವೀಡಿಯೊವನ್ನು ಭಾರತ ಸರ್ಕಾರದ ಮೂಲವೊಂದು ನನಗೆ ಒದಗಿಸಿದೆ, ಅದು ತಾಲಿಬಾನ್ ಸಿದ್ದಿಕಿಯ ತಲೆ  ಸುತ್ತಲೂ ಹೊಡೆದು ನಂತರ ಅವರ ದೇಹವನ್ನು ಗುಂಡುಗಳಿಂದ ಹೊಡೆದಿದೆ ಎಂದು ತೋರಿಸುತ್ತದೆ ಎಂದು  ಅಮೆರಿಕನ್ ಎಂಟರ್ ಪ್ರೈಸಸ್  ಇನ್ಸ್ಟಿಟ್ಯೂಟಿನ ಹಿರಿಯ ಸಹವರ್ತಿ ಬರಹಗಾರ ಮೈಕೆಲ್ ರೂಬಿನ್ ಬರೆದಿದ್ದಾರೆ.

ಸಿದ್ದಿಕಿಯನ್ನು ಸೆರೆ ಹಿಡಿದು, ಮರಣ ದಂಡನೆಗೊಳಪಡಿಸಿ ನಂತರ ಶವವನ್ನು ವಿರೂಪಗೊಳಿಸುವ ತಾಲಿಬಾನ್ ನಿರ್ಧಾರವು ಯುದ್ಧದ ನಿಯಮಗಳನ್ನು ಅಥವಾ ಜಾಗತಿಕ ಸಮುದಾಯದ ನಡವಳಿಕೆಯನ್ನು ನಿಯಂತ್ರಿಸುವ ಸಂಪ್ರದಾಯಗಳನ್ನು ಗೌರವಿಸುವುದಿಲ್ಲ ಎಂದು ತೋರಿಸುತ್ತದೆ ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT