ಅದಿಶ್ ಸಿ ಅಗರವಾಲ್ 
ವಿದೇಶ

ಕೋವಿಡ್ ಸಂಬಂಧ ಡಬ್ಲ್ಯೂಹೆಚ್‌ಓ ಶ್ವೇತಪತ್ರ ಹೊರಡಿಸಲಿ: ಐಸಿಜೆ

ಕಾನೂನು ತಜ್ಞರ ಪ್ರಮುಖ ಸಂಘಟನೆಯಾದ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್(ಐಸಿಜೆ) ಕೊರೋನ ಸಂಬಂಧ ಶ್ವೇತಪತ್ರವನ್ನು ಹೊರಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ(ಡಬ್ಲ್ಯುಹೆಚ್ಒ) ಮನವಿ ಮಾಡಿದೆ.

ನವದೆಹಲಿ: ಕಾನೂನು ತಜ್ಞರ ಪ್ರಮುಖ ಸಂಘಟನೆಯಾದ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್ (ಐಸಿಜೆ) ಕೊರೋನ ಸಂಬಂಧ ಶ್ವೇತಪತ್ರವನ್ನು ಹೊರಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ(ಡಬ್ಲ್ಯುಹೆಚ್ಒ) ಮನವಿ ಮಾಡಿದೆ.

ಕೊರೋನಾ ವೈರಸ್ ನ ಹುಟ್ಟು,ಹರಡುವಿಕೆ ಸಂಬಂಧ ಶ್ವೇತಪತ್ರವನ್ನು ಹೊರಡಿಸುವ ಮೂಲಕ ವಿಶ್ವದಾದ್ಯಂತ ಉದ್ಭವಿಸುವ ಅನುಮಾನಗಳಿಗೆ ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಐಸಿಜೆ ಡಬ್ಲ್ಯುಹೆಚ್ಒ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು,ಕೊರೋನಾಗೆ ಸಂಬಂಧಿಸಿದ ಎಲ್ಲಾ ವೈಜ್ಞಾನಿಕ ಮತ್ತು ವೈದ್ಯಕೀಯ ಮಾಹಿತಿ ಬಿಡುಗಡೆ ಮಾಡುವಂತೆ ಐಸಿಜೆ ಒತ್ತಾಯಿಸಿದೆ.

ಐಸಿಜೆ ಅಧ್ಯಕ್ಷ ಮತ್ತು ಹಿರಿಯ ವಕೀಲ ಆದಿಶ್ ಸಿ ಅಗರ್ವಾಲ್ ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈರಸ್ ಮೂಲದ ಬಗ್ಗೆ ಹಲವು ಅನುಮಾನಗಳಿವೆ. ಇದು ಮಾತ್ರವಲ್ಲ, ಇದರ ಹರಡುವಿಕೆಯ ಬಗ್ಗೆ ವಿವಿಧ ವೈಜ್ಞಾನಿಕ, ವೈದ್ಯಕೀಯ ಮತ್ತು ಮಾಧ್ಯಮ ವರದಿಗಳು ಸಹ ಇಂತಹ ಭಯ ಮತ್ತು ಕಳವಳಗಳಿಗೆ ಕಾರಣವಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಡಬ್ಲ್ಯುಹೆಚ್ಒಗೆ ಮೇಲ್ಮನವಿ ಸಲ್ಲಿಸುವ ಐಸಿಜೆ ನಿರ್ಧಾರವು ವುಹಾನ್ ನ ಪ್ರಯೋಗಾಲಯದಲ್ಲಿ ಕೊರೋನಾ ಹುಟ್ಟಿಕೊಂಡಿದೆ ಎಂದು ವರದಿಯಾಗಿದೆ. ಕೊರೋನಾ ವೈರಸ್ ನ ಉಗಮದ ಬಗ್ಗೆ ವಿಶ್ವದಾದ್ಯಂತ ಉದ್ಭವಿಸುವ ಅನುಮಾನಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಶ್ವೇತಪತ್ರವನ್ನು ನೀಡುವಂತೆ ಐಸಿಜೆ ಡಬ್ಲ್ಯುಎಚ್ಒಗೆ ಮನವಿ ಮಾಡಿದೆ. ಹೀಗಾಗಿ ಆ ಎಲ್ಲಾ ಮಾಹಿತಿಯನ್ನು ಶ್ವೇತಪತ್ರದಲ್ಲಿ ಬಿಡುಗಡೆ ಮಾಡಿದರೆ, ಅದು ಡಬ್ಲ್ಯೂಹೆಚ್ಒನ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಎಂದು ಅಗರ್ ವಾಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT