ಟಿಕ್‌ಟಾಕ್‌ 
ವಿದೇಶ

ಟಿಕ್‌ಟಾಕ್‌ ವಿಡಿಯೋ ಮಾಡುವಾಗ ನದಿಗೆ ಬಿದ್ದು ಪಾಕಿಸ್ತಾನಿ ವ್ಯಕ್ತಿ ಜಲಸಮಾಧಿ

ಟಿಕ್‌ಟಾಕ್‌ಗಾಗಿ ವಿಡಿಯೋ ಮಾಡುತ್ತಲೇ 25 ವರ್ಷದ ಪಾಕಿಸ್ತಾನಿ ವ್ಯಕ್ತಿಯೊಬ್ಬ ಪಂಜಾಬ್ ಪ್ರಾಂತ್ಯದ ಝೀಲಂ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಲಾಹೋರ್: ಟಿಕ್‌ಟಾಕ್‌ಗಾಗಿ ವಿಡಿಯೋ ಮಾಡುತ್ತಲೇ 25 ವರ್ಷದ ಪಾಕಿಸ್ತಾನಿ ವ್ಯಕ್ತಿಯೊಬ್ಬ ಪಂಜಾಬ್ ಪ್ರಾಂತ್ಯದ ಝೀಲಂ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮೃತನನ್ನು  ಶೇಖ್ ಅಲಿ ಎಂದು ಗುರುತಿಸಲಾಗಿದ್ದು ಈತ ಸ್ನೇಹಿತರೊಂದಿಗೆ ಪಂಜಾಬ್ ಪ್ರಾಂತ್ಯದ ನೆಕೊಕಾರಾದ ನದಿಗೆ ಬೀಳುವುದನ್ನು ವಿಡಿಯೋ ಮಾಡಲು ಉದ್ದೇಶಿಸಿದ್ದಾನೆ. ಅದರಂತೆ ನದಿಗೆ ನೆಗೆಯುವುದನ್ನು ಅವನ ಸ್ನೇಹಿತ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಆದರೆ ಶೇಖ್ ಅಲಿ ನೀರಿಗೆ ಬಿದ್ದವನು ಮತ್ತೆ ಹೊರಬರದೆ ಹೋದಾಗ ಇದು ದುರಂತದ ರೂಪ ಪಡೆಯಿತು. ತಕ್ಷಣ ರಕ್ಷಣಾ ಪಡೆ ಮುಳುಗು ಪರಿಣಿತರು ನೀರಿಗಿಳಿದು ಆತನ ದೇಹಕ್ಕಾಗಿ ಶೋಧ ನಡೆಸಿದ್ದರೂ ಇದುವರೆಗೆ ಮೃತದೇಹ ಪತ್ತೆಯಾಗಿಲ್ಲ ಎಂದು ಡೈಲಿ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ನದಿಗೆ ಧುಮುಕಿದ ಅಲಿಯ ಸ್ನೇಹಿತನು ಸುರಕ್ಷಿತವಾಗಿದ್ದಾನೆ. ವಿಡಿಯೋ ಶೇರಿಂಗ್ ಸಾಮಾಜಿಕ ನೆಟ್ ವರ್ಕಿಂಗ್ ಅಪ್ಲಿಕೇಷನ್ ಟಿಕ್ ಟಾಕ್ ಪಾಕಿಸ್ತಾನದಲ್ಲಿ ಜನಪ್ರಿಯವಾಗಿದೆ. ಆದಾಗ್ಯೂ, ಹಲವಾರು ಅಪಾಯಕಾರಿ ವಿಡಿಯೋಗಳನ್ನು ಚಿತ್ರೀಕರಿಸುವ ಹಿನ್ನೆಲೆ  ಈವರೆಗೆ ಹಲವಾರು ಯುವಕರು ಸಾವನ್ನಪ್ಪಿದ್ದಾರೆ

ಕಳೆದ ವಾರ, 19 ವರ್ಷದ ಯುವಕ ಸಹ ವಿಡಿಯೋ ಚಿತ್ರೀಕರಣ ಮಾಡುವ ವೇಳೆ ಮೃತಪಟ್ಟಿದ್ದನು. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಯುವಕ ತಲೆಗೆ ಗನ್ ಇಟ್ಟು ಟ್ರಿಗರ್ ಎಳೆದಿದ್ದನು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಸರ್ಕಾರ ಟಿಕ್‌ಟಾಕ್ ಅನ್ನು ನಿಷೇಧಿಸಿತ್ತು. ಸ್ಥಳೀಯ ಕಾನೂನುಗಳಿಗೆ ಅನುಸಾರವಾಗಿ, ಅಶ್ಲೀಲತೆ ಮತ್ತು ಅನೈತಿಕತೆಯನ್ನು ಹರಡುವಲ್ಲಿ  ತೊಡಗಿರುವ ಎಲ್ಲಾ ಖಾತೆಗಳನ್ನು ನಿರ್ಬಂಧಿಸುವುದಾಗಿ ಕಂಪನಿ ಭರವಸೆ ನೀಡಿದತಿಂಗಳ ನಂತರ ನಿಷೇಧವನ್ನು ಹಿಂಪಡೆಯಲಾಗಿತ್ತು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ತೀರ್ಮಾನಿಸಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

SCROLL FOR NEXT