ಟಿಕ್‌ಟಾಕ್‌ 
ವಿದೇಶ

ಟಿಕ್‌ಟಾಕ್‌ ವಿಡಿಯೋ ಮಾಡುವಾಗ ನದಿಗೆ ಬಿದ್ದು ಪಾಕಿಸ್ತಾನಿ ವ್ಯಕ್ತಿ ಜಲಸಮಾಧಿ

ಟಿಕ್‌ಟಾಕ್‌ಗಾಗಿ ವಿಡಿಯೋ ಮಾಡುತ್ತಲೇ 25 ವರ್ಷದ ಪಾಕಿಸ್ತಾನಿ ವ್ಯಕ್ತಿಯೊಬ್ಬ ಪಂಜಾಬ್ ಪ್ರಾಂತ್ಯದ ಝೀಲಂ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಲಾಹೋರ್: ಟಿಕ್‌ಟಾಕ್‌ಗಾಗಿ ವಿಡಿಯೋ ಮಾಡುತ್ತಲೇ 25 ವರ್ಷದ ಪಾಕಿಸ್ತಾನಿ ವ್ಯಕ್ತಿಯೊಬ್ಬ ಪಂಜಾಬ್ ಪ್ರಾಂತ್ಯದ ಝೀಲಂ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮೃತನನ್ನು  ಶೇಖ್ ಅಲಿ ಎಂದು ಗುರುತಿಸಲಾಗಿದ್ದು ಈತ ಸ್ನೇಹಿತರೊಂದಿಗೆ ಪಂಜಾಬ್ ಪ್ರಾಂತ್ಯದ ನೆಕೊಕಾರಾದ ನದಿಗೆ ಬೀಳುವುದನ್ನು ವಿಡಿಯೋ ಮಾಡಲು ಉದ್ದೇಶಿಸಿದ್ದಾನೆ. ಅದರಂತೆ ನದಿಗೆ ನೆಗೆಯುವುದನ್ನು ಅವನ ಸ್ನೇಹಿತ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಆದರೆ ಶೇಖ್ ಅಲಿ ನೀರಿಗೆ ಬಿದ್ದವನು ಮತ್ತೆ ಹೊರಬರದೆ ಹೋದಾಗ ಇದು ದುರಂತದ ರೂಪ ಪಡೆಯಿತು. ತಕ್ಷಣ ರಕ್ಷಣಾ ಪಡೆ ಮುಳುಗು ಪರಿಣಿತರು ನೀರಿಗಿಳಿದು ಆತನ ದೇಹಕ್ಕಾಗಿ ಶೋಧ ನಡೆಸಿದ್ದರೂ ಇದುವರೆಗೆ ಮೃತದೇಹ ಪತ್ತೆಯಾಗಿಲ್ಲ ಎಂದು ಡೈಲಿ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ನದಿಗೆ ಧುಮುಕಿದ ಅಲಿಯ ಸ್ನೇಹಿತನು ಸುರಕ್ಷಿತವಾಗಿದ್ದಾನೆ. ವಿಡಿಯೋ ಶೇರಿಂಗ್ ಸಾಮಾಜಿಕ ನೆಟ್ ವರ್ಕಿಂಗ್ ಅಪ್ಲಿಕೇಷನ್ ಟಿಕ್ ಟಾಕ್ ಪಾಕಿಸ್ತಾನದಲ್ಲಿ ಜನಪ್ರಿಯವಾಗಿದೆ. ಆದಾಗ್ಯೂ, ಹಲವಾರು ಅಪಾಯಕಾರಿ ವಿಡಿಯೋಗಳನ್ನು ಚಿತ್ರೀಕರಿಸುವ ಹಿನ್ನೆಲೆ  ಈವರೆಗೆ ಹಲವಾರು ಯುವಕರು ಸಾವನ್ನಪ್ಪಿದ್ದಾರೆ

ಕಳೆದ ವಾರ, 19 ವರ್ಷದ ಯುವಕ ಸಹ ವಿಡಿಯೋ ಚಿತ್ರೀಕರಣ ಮಾಡುವ ವೇಳೆ ಮೃತಪಟ್ಟಿದ್ದನು. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಯುವಕ ತಲೆಗೆ ಗನ್ ಇಟ್ಟು ಟ್ರಿಗರ್ ಎಳೆದಿದ್ದನು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಸರ್ಕಾರ ಟಿಕ್‌ಟಾಕ್ ಅನ್ನು ನಿಷೇಧಿಸಿತ್ತು. ಸ್ಥಳೀಯ ಕಾನೂನುಗಳಿಗೆ ಅನುಸಾರವಾಗಿ, ಅಶ್ಲೀಲತೆ ಮತ್ತು ಅನೈತಿಕತೆಯನ್ನು ಹರಡುವಲ್ಲಿ  ತೊಡಗಿರುವ ಎಲ್ಲಾ ಖಾತೆಗಳನ್ನು ನಿರ್ಬಂಧಿಸುವುದಾಗಿ ಕಂಪನಿ ಭರವಸೆ ನೀಡಿದತಿಂಗಳ ನಂತರ ನಿಷೇಧವನ್ನು ಹಿಂಪಡೆಯಲಾಗಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT