ಜೋ ಲಾರಾ 
ವಿದೇಶ

ವಿಮಾನ ದುರಂತ: ಟಾರ್ಜನ್ ನಟ ಜೋ ಲಾರಾ, ಪತ್ನಿ ಸೇರಿದಂತೆ 7 ಮಂದಿ ದುರ್ಮರಣ

'ಟಾರ್ಜನ್' ಖ್ಯಾತಿಯ  ಅಮೆರಿಕಾ ನಟ ಜೋ ಲಾರಾ ವಿಮಾನ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಜೋ ಲಾರಾ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಏಳು ಮಂದಿಯೂ ಮೃತಪಟ್ಟಿದ್ದಾರೆ. 

ವಾಷಿಂಗ್ಟನ್: 'ಟಾರ್ಜನ್' ಖ್ಯಾತಿಯ  ಅಮೆರಿಕಾ ನಟ ಜೋ ಲಾರಾ ವಿಮಾನ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಜೋ ಲಾರಾ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಏಳು ಮಂದಿಯೂ ಮೃತಪಟ್ಟಿದ್ದಾರೆ. 

ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಟೆನ್ನೆಸ್ಸೀ ಏರ್‌ಪೋರ್ಟ್‌ನಿಂದ ಫ್ಲೋರಿಡಾದ ಪಾಮ್ ಬೀಚ್‌ಗೆ ಸಣ್ಣ ಬಿಸಿನೆಸ್ ಜೆಟ್ ಹೊರಟಿತ್ತು. ಜೆಟ್ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ನ್ಯಾಶ್‌ವಿಲ್ಲೆಯಲ್ಲಿರುವ ಪರ್ಸಿ ಪ್ರೀಸ್ಟ್ ಸರೋವರದಲ್ಲಿ ಪತನಗೊಂಡಿದೆ.

ವಿಮಾನದಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ದೃಢಪಡಿಸಿದೆ. ವಿಮಾನದಲ್ಲಿ ನಟ ಜೋ ಲಾರಾ ಹಾಗೂ ಪತ್ನಿ ಗ್ವೆನ್ ಶ್ಯಾಬ್ಲಿನ್ ಲಾರಾ ಪ್ರಯಾಣಿಸುತ್ತಿದ್ದರು. ಇವರಿಬ್ಬರೊಂದಿಗೆ ವಿಮಾನದಲ್ಲಿದ್ದ ಐವರು ಸ್ಥಳೀಯರು ಎನ್ನಲಾಗಿದೆ. ಅಪಘಾತಕ್ಕೆ ಖಚಿತ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೋ ಲಾರಾ (ವಿಲಿಯಂ ಜೋಸೆಫ್ ಲಾರಾ) ಅಮೇರಿಕಾದ ಖ್ಯಾತ ನಟ, ಮಾರ್ಷಲ್ ಆರ್ಟಿಸ್ಟ್ ಹಾಗೂ ಮ್ಯೂಸಿಷಿಯನ್. ಲಾರಾ (ವಿಲಿಯಂ ಜೋಸೆಫ್ ಲಾರಾ) 1989ರಲ್ಲಿ ತೆರೆ ಕಂಡ “ ಟಾರ್ಜನ್ ಇನ್ ಮ್ಯಾನ್‌ಹ್ಯಾಟನ್” ಸಿನಿಮಾ ಮೂಲಕ ಪ್ರಸಿದ್ಧರಾಗಿದ್ದರು. ನಂತರ ಅವರು 1996 ರಿಂದ ವರ್ಷ ಕಾಲ ಪ್ರಸಾರಗೊಂಡ ‘ಟಾರ್ಜನ್ ದಿ ಎಪಿಕ್ ಅಡ್ವೆಂಚರ್ಸ್’ ಟಿವಿ ಸರಣಿ ಮೂಲಕ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳನ್ನು ಪಡೆದಿದ್ದರು. ಸ್ವಭಾವತಃ ಮಾರ್ಷಲ್‌ ಆರ್ಟ್ಸ್‌ ತಜ್ಞರಾದ ಲಾರಾ ಟಾರ್ಜನ್‌ ಆಗಿ ಡೋಪ್ ಇಲ್ಲದೆ ಸಾಹಸ ಮಾಡುತ್ತಿದ್ದರು. 55 ವರ್ಷದ ಲಾರಾ, ಗ್ವೆನ್ ಶ್ವಾಂಬ್ಲಿನ್ ಅವರನ್ನು 2018 ರಲ್ಲಿ ವಿವಾಹವಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ: ಸೈರಾಂಗ್‌-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ; ಸ್ಥಳದಲ್ಲೇ 7 ಆನೆಗಳ ದಾರುಣ ಸಾವು

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

Air India Express ಪೈಲಟ್ ನಿಂದ ಸ್ಪೈಸ್ ಜೆಟ್ ಪ್ರಯಾಣಿಕನ ಮೇಲೆ ಹಲ್ಲೆ; ರಕ್ತಸ್ರಾವದಿಂದ ನರಳಿದ ಸಂತ್ರಸ್ತ

Epstein Files ಬಿಡುಗಡೆ: ಟ್ರಂಪ್ ಬಗ್ಗೆ ಹೆಚ್ಚಿನದ್ದಿಲ್ಲ; ಕ್ಲಿಂಟನ್ ಫೋಟೋಗಳು ಬಹಿರಂಗ!

ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಸಿಗದ ನಿರೀಕ್ಷಣಾ ಜಾಮೀನು: ಅಜ್ಞಾತ ಸ್ಥಳಕ್ಕೆ ತೆರಳಿದ ಬಿಜೆಪಿ ಶಾಸಕ ಭೈರತಿ ಬಸವರಾಜು?

SCROLL FOR NEXT