ಮೈಕ್ ಪೊಂಪಿಯೊ 
ವಿದೇಶ

ವುಹಾನ್ ಲ್ಯಾಬ್ ಮಿಲಿಟರಿ ಚಟುವಟಿಕೆಯಲ್ಲಿ ತೊಡಗಿತ್ತು: ಅಮೆರಿಕದ ಮಾಜಿ ರಾಜ್ಯ ಕಾರ್ಯದರ್ಶಿ ಪೊಂಪಿಯೊ

ಕೋವಿಡ್-19 ಸಾಂಕ್ರಾಮಿಕ ರಹಸ್ಯ ಪ್ರಯೋಗಾಲಯದಿಂದ ಹೊರಹೊಮ್ಮಿತು ಎಂಬ ಸಿದ್ದಾಂತದ ಹೊಸ ಪರಿಶೀಲನೆ ನಡುವೆ ವುಹಾನ್ ಇನ್ಸಿಟಿಟ್ಯೂಟ್ ಆಫ್ ವೈರಾಲಜಿ, ಅದರ ನಾಗರಿಕ ಸಂಶೋಧನೆಯೊಂದಿಗೆ ಮಿಲಿಟರಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು ಎಂದು ಅಮೆರಿಕಾದ ಮಾಜಿ ಸೆಕ್ರಟರಿ ಆಫ್ ಸ್ಟೇಟ್ ಮೈಕ್ ಪೊಂಪಿಯೊ ಹೇಳಿದ್ದಾರೆ.

ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕ ರಹಸ್ಯ ಪ್ರಯೋಗಾಲಯದಿಂದ ಹೊರಹೊಮ್ಮಿತು ಎಂಬ ಸಿದ್ದಾಂತದ ಹೊಸ ಪರಿಶೀಲನೆ ನಡುವೆ ವುಹಾನ್ ಇನ್ಸಿಟಿಟ್ಯೂಟ್ ಆಫ್ ವೈರಾಲಜಿ, ಅದರ ನಾಗರಿಕ ಸಂಶೋಧನೆಯೊಂದಿಗೆ ಮಿಲಿಟರಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು ಎಂದು ಅಮೆರಿಕಾದ ಮಾಜಿ ಸೆಕ್ರಟರಿ ಆಫ್ ಸ್ಟೇಟ್ ಮೈಕ್ ಪೊಂಪಿಯೊ ಹೇಳಿದ್ದಾರೆ.

ನಾನು ಖಚಿತವಾಗಿ ಇದನ್ನು ಹೇಳುತ್ತೇನೆ. ವುಹಾನ್ ಲ್ಯಾಬೊರೇಟರಿ ಒಳಗಡೆ ಪೀಪಲ್ಸ್ ಲಿಬರೇಶನ್ ಆರ್ಮಿಗೆ ಸಂಪರ್ಕ ಕಲ್ಪಿಸುವ ಪ್ರಯತ್ನಗಳಲ್ಲಿ  ನಿರತರಾಗಿದ್ದರು ಎಂಬುದು ನಮಗೆ ತಿಳಿದಿತ್ತು. ಆದ್ದರಿಂದ ಹಳೆಯ ಉತ್ತಮ ನಾಗರಿಕ ಸಂಶೋಧನೆ ಎಂದು ಹೇಳಿಕೊಳ್ಳುವುದರ ಜೊತೆಗೆ ಮಿಲಿಟರಿ ಚಟುವಟಿಕೆಯಲ್ಲಿ ತೊಡಿಗಿಸಿಕೊಂಡಿದ್ದರು ಎಂದು ಪೊಂಪಿಯೊ ಹೇಳಿರುವುದಾಗಿ ಪಾಕ್ಸ್ ನ್ಯೂಸ್ ವರದಿ ಮಾಡಿದೆ.

ಅದು ಏನೆಂದು ನಮಗೆ ಹೇಳಲು ಅವರು ನಿರಾಕರಿಸಿದರು. ಆ ಎರಡರ ಸ್ವರೂಪವನ್ನು ವಿವರಿಸಲು ಅವರು ತಿರಸ್ಕರಿಸಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ಅಲ್ಲಿಗೆ ಹೋಗಲು ಪ್ರಯತ್ನಿಸಿದಾಗಲೂ ಅವಕಾಶ ನೀಡಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಾಗತಿಕ ಸಾಂಕ್ರಾಮಿಕದ ಹುಟ್ಟಿನ ಬಗ್ಗೆ ಚೀನಾದ ಬಗ್ಗೆ ಒತ್ತಡ ಹೆಚ್ಚಾಗಿದ್ದು, ವಿಜ್ಞಾನಿಗಳು ಕೂಡಾ ಹೆಚ್ಚಿನ ಸ್ಪಷ್ಟತೆ ಬಯಸಿದ್ದಾರೆ. 
ಇತ್ತೀಚಿಗೆ ಸ್ಕೈ ನ್ಯೂಸ್ ಆಸ್ಟ್ರೇಲಿಯಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಚೀನಾದಿಂದ ವಿಶ್ವ ವೈಜ್ಞಾನಿಕ ಸಮುದಾಯವನ್ನು
ಮೋಸಗೊಳಿಸಲಾಗಿದೆ ಎಂದು ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಮೆಡಿಸಿನ್ ಮತ್ತು ಸಾರ್ವಜನಿಕ ಆರೋಗ್ಯ ಕಾಲೇಜಿನ ಪ್ರಾಧ್ಯಾಪಕ 
ನಿಕೊಲಾಯ್ ಪೆಟ್ರೋವ್ಸ್ಕಿ ಹೇಳಿದ್ದರು.

ವುಹಾನ್ ಲ್ಯಾಬ್ ನಿಂದ ಸಾಂಕ್ರಾಮಿಕ ಸೃಷ್ಟಿಯಾಗಿರುವ ಕುರಿತಂತೆ ಹೆಚ್ಚಿನ ತನಿಖೆಗಾಗಿ ಬಿಡೆನ್ ಆಡಳಿತ ಚೀನಾವನ್ನು ಒತ್ತಾಯಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

SCROLL FOR NEXT