ಜೆನ್ ಸಾಕಿ 
ವಿದೇಶ

ಭದ್ರತಾ ಮೈತ್ರಿಗೆ ಆಸ್ಟ್ರೇಲಿಯಾ, ಬ್ರಿಟನ್ ಜೊತೆಗೆ ಜಪಾನ್ ಅಥವಾ ಭಾರತ ಸೇರ್ಪಡೆಯನ್ನು ತಳ್ಳಿಹಾಕಿದ ಅಮೆರಿಕ

ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಒಳಗೊಂಡ ಹೊಸ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯಲ್ಲಿ ಭಾರತ ಅಥವಾ ಜಪಾನ್ ನ್ನು ಸೇರಿಸಿಕೊಳ್ಳುವುದನ್ನು ಅಮೆರಿಕ ತಳ್ಳಿಹಾಕಿದೆ.

ವಾಷಿಂಗ್ ಟನ್: ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಒಳಗೊಂಡ ಹೊಸ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯಲ್ಲಿ ಭಾರತ ಅಥವಾ ಜಪಾನ್ ನ್ನು ಸೇರಿಸಿಕೊಳ್ಳುವುದನ್ನು ಅಮೆರಿಕ ತಳ್ಳಿಹಾಕಿದೆ.

ಇಂಡೋ-ಪೆಸಿಫಿಕ್ ಪ್ರದೇಶದ 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಆಸ್ಟ್ರೇಲಿಯಾ-ಬ್ರಿಟನ್-ಅಮೆರಿಕಾ ಒಳಗೊಂಡ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯನ್ನು ರಚಿಸಲಾಗಿದೆ.

ಸೆ.15 ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜಂಟಿಯಾಗಿ ತ್ರಿಪಕ್ಷೀಯ ಭದ್ರತಾ ಮೈತ್ರಿ ಎಯುಕೆಯುಎಸ್ ರಚನೆಯನ್ನು ಘೋಷಿಸಿದ್ದರು. ಈ ಯೋಜನೆಯಡಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾಗೆ ಅಣ್ವಸ್ತ್ರ ಸಾಮರ್ಥ್ಯದ ಸಬ್ ಮರೀನ್ ಗಳು ಲಭ್ಯವಾಗಲಿದೆ.

ಕಳೆದ ವಾರ ಎಯುಕೆಯುಎಸ್ ನ ಘೋಷಣೆ ಸೂಚನೆಯಾಗಿರಬೇಕೆಂದಿಲ್ಲ ಹಾಗೂ ಇಂಡೋ-ಪೆಸಿಫಿಕ್ ನ ಭದ್ರತೆಯ ವಿಷಯವಾಗಿ ಬೇರೆ ಯಾರೂ ಭಾಗಿಯಾಗಬಾರದು ಎಂಬ ಸಂದೇಶವನ್ನು ಫ್ರೆಂಚ್ ನ ಅಧ್ಯಕ್ಷರಿಗೂ ಅಮೆರಿಕ ಅಧ್ಯಕ್ಷರು ಕಳಿಸಿದ್ದಾರೆ ಎಂದು ಶ್ವೇತ ಭವನದ ಕಾರ್ಯದರ್ಶಿ ಜೆನ್ ಸಾಕಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಕ್ವಾಡ್ ಶೃಂಗಸಭೆಗಾಗಿ ಜಪಾನ್-ಭಾರತದ ನಾಯಕರು ವಾಷಿಂಗ್ ನಲ್ಲಿದ್ದು ಅವರನ್ನೂ ಹೊಸ ಭದ್ರತಾ ಮೈತ್ರಿಕೂಟದ ಭಾಗವಾಗಿಸುತ್ತೀರಾ? ಎಂಬ ಪ್ರಶ್ನೆಗೆ ಜೆನ್ ಸಾಕಿ ಉತ್ತರಿಸುತ್ತಿದ್ದರು. ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳು ಕ್ವಾಡ್ ನ ಸದಸ್ಯ ರಾಷ್ಟ್ರಗಳಾಗಿವೆ. ಸೆ.24 ರಂದು ಜೋ ಬೈಡನ್ ಆಯೋಜಿಸಿರುವ ಕ್ವಾಡ್ ಸಭೆಯಲ್ಲಿ ಮೊದಲ ಬಾರಿಗೆ ದೇಶಗಳ ನಾಯಕರು ಭೌತಿಕವಾಗಿ ಪಾಲ್ಗೊಳ್ಳಲಿದ್ದಾರೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನು ನಿಯಂತ್ರಿಸುವುದಕ್ಕೆ ಎಯುಕೆಯುಎಸ್ ಮೈತ್ರಿಕೂಟವನ್ನು ರಚನೆ ಮಾಡಿಕೊಳ್ಳಲಾಗಿದೆ. ಚೀನಾ ಎಯುಕೆಯುಎಸ್ ಮೈತ್ರಿಕೂಟವನ್ನು ತೀವ್ರ ಟೀಕೆ ಮಾಡಿದ್ದು ಈ ಗುಂಪಿಗೆ ದೀರ್ಘಾವಧಿ ಭವಿಷ್ಯವಿಲ್ಲ ಎಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT