ಬುಲ್ಡೋಜರ್ 
ವಿದೇಶ

ನ್ಯೂಜೆರ್ಸಿ ಟೌನ್‌ನಲ್ಲಿ ಸ್ವಾತಂತ್ರ್ಯ ದಿನದ ಮೆರವಣಿಗೆಯಲ್ಲಿ ಬುಲ್ಡೋಜರ್ ಬಳಕೆಯಿಂದ ನಿವಾಸಿಗಳಿಗೆ ಬೇಸರ!

ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ ಭಾರತ ಸ್ವಾತಂತ್ರ್ಯ ದಿನಾಚರಣೆಯ ಪರೇಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಫೋಟೋವಿರುವ ಬುಲ್ಡೋಜರ್ ಭಾಗವಾಗಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ನ್ಯೂಜೆರ್ಸಿ: ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ ಭಾರತ ಸ್ವಾತಂತ್ರ್ಯ ದಿನಾಚರಣೆಯ ಪರೇಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಫೋಟೋವಿರುವ ಬುಲ್ಡೋಜರ್ ಭಾಗವಾಗಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಭಾರತದಲ್ಲಿನ ಮುಸ್ಲಿಂ ಮನೆಗಳನ್ನು ಕೆಡವುವ ಸಂಕೇತವಾಗಿರುವ ಬುಲ್ಡೋಜರ್, ಭಾರತದಲ್ಲಿನ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದಂತೆ ಸಮುದಾಯದ ಸದಸ್ಯರು ಮತ್ತು ಧಾರ್ಮಿಕ ಮುಖಂಡರಿಂದ ಪರೇಡ್‌ನಲ್ಲಿ ಅದನ್ನು ಬಳಸಿರುವುದು ತನಿಖೆಗೆ ಕಾರಣವಾಗಿದೆ. ಇನ್ನು ಮೆರವಣಿಗೆಯಲ್ಲಿ ಬುಲ್ಡೋಜರ್ ಅನ್ನು ನೋಡಿ ನಿರಾಶೆಗೊಂಡಿದ್ದೇವೆ ಎಂದು ಅನೇಕ ನಿವಾಸಿಗಳು ಹೇಳಿದ್ದು ಅದನ್ನು 'ದ್ವೇಷದ ಲಜ್ಜೆಗೆಟ್ಟ ಪ್ರದರ್ಶನ'ದ ಸಂಕೇತವೆಂದು ಬಣ್ಣಿಸಿದರು.

ಬುಲ್ಡೋಜರ್‌ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಮತ್ತು ಹಿಂದಿಯಲ್ಲಿ 'ಬಾಬಾ ಕಾ ಬುಲ್ಡೋಜರ್' ಎಂದು ಬರೆಯಲಾದ ಫಲಕವನ್ನು ಹೊಂದಿತ್ತು. ಬಾಬಾ ಅನ್ನುವುದು ಸಾಮಾನ್ಯವಾಗಿ ಯೋಗಿ ಆದಿತ್ಯನಾಥ್ ಅವರನ್ನು ಉಲ್ಲೇಖಿಸಲು ಬಳಸಲಾಗುತ್ತದೆ.

ಮೇಯರ್ ಸಮಿಪ್ ಜೋಶಿ ಅವರು, ಬುಲ್ಡೋಜರ್ ಅನ್ನು ಮೆರವಣಿಯಲ್ಲಿ ಬಳಸಿದ್ದು 'ವಿಭಜನೆ ಮತ್ತು ತಾರತಮ್ಯದ ಸಂಕೇತ' ಎಂದು ಹೇಳಿದರು. ಆದರೆ ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆಯನ್ನು ಟೌನ್‌ಶಿಪ್ ಪ್ರಾಯೋಜಿಸಲಿಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಸಂಸ್ಕೃತಿಗಳ ಜನರೊಂದಿಗೆ ಸೌಹಾರ್ದಯುತವಾಗಿ ಆಚರಿಸಲು ಮತ್ತು ಕೆಲಸ ಮಾಡಲು ತಮ್ಮ ಕಚೇರಿ ಬದ್ಧವಾಗಿದೆ ಎಂದು ಜೋಶಿ ಹೇಳಿದರು. 'ಭವಿಷ್ಯದಲ್ಲಿ ಆಚರಣೆಗಳು ನಮ್ಮ ಸಮುದಾಯದ ಉತ್ತಮ ಹಿತಾಸಕ್ತಿಯನ್ನು ಪೂರೈಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ನನ್ನ ಕಚೇರಿಯು ಮಧ್ಯಸ್ಥಗಾರರೊಂದಿಗೆ ಕೆಲಸ ಮಾಡುತ್ತದೆ' ಎಂದು ಅವರ ಹೇಳಿಕೆಯಲ್ಲಿ ಸೇರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT