ಬುಲ್ಡೋಜರ್ 
ವಿದೇಶ

ನ್ಯೂಜೆರ್ಸಿ ಟೌನ್‌ನಲ್ಲಿ ಸ್ವಾತಂತ್ರ್ಯ ದಿನದ ಮೆರವಣಿಗೆಯಲ್ಲಿ ಬುಲ್ಡೋಜರ್ ಬಳಕೆಯಿಂದ ನಿವಾಸಿಗಳಿಗೆ ಬೇಸರ!

ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ ಭಾರತ ಸ್ವಾತಂತ್ರ್ಯ ದಿನಾಚರಣೆಯ ಪರೇಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಫೋಟೋವಿರುವ ಬುಲ್ಡೋಜರ್ ಭಾಗವಾಗಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ನ್ಯೂಜೆರ್ಸಿ: ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ ಭಾರತ ಸ್ವಾತಂತ್ರ್ಯ ದಿನಾಚರಣೆಯ ಪರೇಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಫೋಟೋವಿರುವ ಬುಲ್ಡೋಜರ್ ಭಾಗವಾಗಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಭಾರತದಲ್ಲಿನ ಮುಸ್ಲಿಂ ಮನೆಗಳನ್ನು ಕೆಡವುವ ಸಂಕೇತವಾಗಿರುವ ಬುಲ್ಡೋಜರ್, ಭಾರತದಲ್ಲಿನ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದಂತೆ ಸಮುದಾಯದ ಸದಸ್ಯರು ಮತ್ತು ಧಾರ್ಮಿಕ ಮುಖಂಡರಿಂದ ಪರೇಡ್‌ನಲ್ಲಿ ಅದನ್ನು ಬಳಸಿರುವುದು ತನಿಖೆಗೆ ಕಾರಣವಾಗಿದೆ. ಇನ್ನು ಮೆರವಣಿಗೆಯಲ್ಲಿ ಬುಲ್ಡೋಜರ್ ಅನ್ನು ನೋಡಿ ನಿರಾಶೆಗೊಂಡಿದ್ದೇವೆ ಎಂದು ಅನೇಕ ನಿವಾಸಿಗಳು ಹೇಳಿದ್ದು ಅದನ್ನು 'ದ್ವೇಷದ ಲಜ್ಜೆಗೆಟ್ಟ ಪ್ರದರ್ಶನ'ದ ಸಂಕೇತವೆಂದು ಬಣ್ಣಿಸಿದರು.

ಬುಲ್ಡೋಜರ್‌ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಮತ್ತು ಹಿಂದಿಯಲ್ಲಿ 'ಬಾಬಾ ಕಾ ಬುಲ್ಡೋಜರ್' ಎಂದು ಬರೆಯಲಾದ ಫಲಕವನ್ನು ಹೊಂದಿತ್ತು. ಬಾಬಾ ಅನ್ನುವುದು ಸಾಮಾನ್ಯವಾಗಿ ಯೋಗಿ ಆದಿತ್ಯನಾಥ್ ಅವರನ್ನು ಉಲ್ಲೇಖಿಸಲು ಬಳಸಲಾಗುತ್ತದೆ.

ಮೇಯರ್ ಸಮಿಪ್ ಜೋಶಿ ಅವರು, ಬುಲ್ಡೋಜರ್ ಅನ್ನು ಮೆರವಣಿಯಲ್ಲಿ ಬಳಸಿದ್ದು 'ವಿಭಜನೆ ಮತ್ತು ತಾರತಮ್ಯದ ಸಂಕೇತ' ಎಂದು ಹೇಳಿದರು. ಆದರೆ ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆಯನ್ನು ಟೌನ್‌ಶಿಪ್ ಪ್ರಾಯೋಜಿಸಲಿಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಸಂಸ್ಕೃತಿಗಳ ಜನರೊಂದಿಗೆ ಸೌಹಾರ್ದಯುತವಾಗಿ ಆಚರಿಸಲು ಮತ್ತು ಕೆಲಸ ಮಾಡಲು ತಮ್ಮ ಕಚೇರಿ ಬದ್ಧವಾಗಿದೆ ಎಂದು ಜೋಶಿ ಹೇಳಿದರು. 'ಭವಿಷ್ಯದಲ್ಲಿ ಆಚರಣೆಗಳು ನಮ್ಮ ಸಮುದಾಯದ ಉತ್ತಮ ಹಿತಾಸಕ್ತಿಯನ್ನು ಪೂರೈಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ನನ್ನ ಕಚೇರಿಯು ಮಧ್ಯಸ್ಥಗಾರರೊಂದಿಗೆ ಕೆಲಸ ಮಾಡುತ್ತದೆ' ಎಂದು ಅವರ ಹೇಳಿಕೆಯಲ್ಲಿ ಸೇರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT