ಟರ್ಕಿ ಮತ್ತು ಸಿರಿಯಾದ ಗಡಿ ಪ್ರದೇಶದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಮನೆಗಳು ನಾಶವಾದ ನಂತರ ಬದುಕುಳಿದವರು ಕುಸಿದ ಕಟ್ಟಡಗಳ ಹೊರಗೆ ಆಶ್ರಯ ಪಡೆದಿರುವುದು. 
ವಿದೇಶ

ಭೂಕಂಪದಿಂದ ಪಾರಾಗಿದ್ದ ಐವರು ಸಿರಿಯಾದ ಮಕ್ಕಳು, ಪೋಷಕರು ಬೆಂಕಿ ಅವಘಡದಲ್ಲಿ ಸಾವು

ಕಳೆದ ವಾರ ಸಂಭವಿಸಿದ ಭೂಕಂಪದಿಂದ ಬದುಕುಳಿದ ನಂತರ ಟರ್ಕಿಯ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಸಿರಿಯಾದ ಮಕ್ಕಳು ಮತ್ತು ಅವರ ಪೋಷಕರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಸ್ತಾನ್‌ಬುಲ್: ಕಳೆದ ವಾರ ಸಂಭವಿಸಿದ ಭೂಕಂಪದಿಂದ ಬದುಕುಳಿದ ನಂತರ ಟರ್ಕಿಯ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಸಿರಿಯಾದ ಮಕ್ಕಳು ಮತ್ತು ಅವರ ಪೋಷಕರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಿರಿಯನ್ ಕುಟುಂಬವು ಫೆಬ್ರುವರಿ 6ರ ಕಂಪನದಿಂದ ತೀವ್ರವಾಗಿ ಹಾನಿಗೊಳಗಾದ ಆಗ್ನೇಯ ಟರ್ಕಿಶ್ ನಗರವಾದ ನೂರ್ಡಗಿಯಿಂದ ಕೊನ್ಯಾದ ಪ್ರದೇಶಕ್ಕೆ ಸ್ಥಳಾಂತರಗೊಂಡಿತ್ತು.

7.8 ತೀವ್ರತೆಯ ಭೂಕಂಪದಿಂದಾಗಿ ಟರ್ಕಿ ಮತ್ತು ಸಿರಿಯಾದಾದ್ಯಂತ ಮೃತಪಟ್ಟವರ ಸಂಖ್ಯೆ 41,000 ಮೀರಿದೆ. ಇದು ಶತಮಾನಗಳಲ್ಲೇ ಈ ಪ್ರದೇಶದ ಮಾರಣಾಂತಿಕ ನೈಸರ್ಗಿಕ ವಿಕೋಪವಾಗಿದೆ.

ಭೂಕಂಪದ ನಂತರ ಸಿರಿಯನ್ ಕುಟುಂಬವು ತಮ್ಮ ಸಂಬಂಧಿಕರೊಂದಿಗೆ ಕೊನ್ಯಾಗೆ ಸ್ಥಳಾಂತರಗೊಂಡಿತ್ತು ಎಂದು ಅನಡೋಲು ರಾಜ್ಯ ಸುದ್ದಿ ಸಂಸ್ಥೆ ತಿಳಿಸಿದೆ.  ಭೂಕಂಪದಿಂದಾಗಿ ಸ್ಥಳಾಂತರಗೊಂಡ ಲಕ್ಷಾಂತರ ಜನರು ಅನುಸರಿಸಿದ ಮಾರ್ಗವನ್ನೇ ಅವರು ಅನುಸರಿಸಿದ್ದರು.

ಬೆಂಕಿ ಹೊತ್ತಿಕೊಂಡಾಗ ನಾವು ಕಂಡೆವು. ಆದರೆ, ಮಧ್ಯಪ್ರವೇಶಿಸಲು ಸಾಧ್ಯವಾಗಲಿಲ್ಲ. ಕಿಟಕಿ ಮೂಲಕ ಓರ್ವ ಬಾಲಕಿಯನ್ನು ರಕ್ಷಿಸಲಾಗಿದೆ. ಮೃತಪಟ್ಟ ಐದು ಮಕ್ಕಳ ಪೈಕಿ ನಾಲ್ಕರು 13 ವರ್ಷದೊಳಗಿನವರು ಎಂದು ನಿವಾಸಿ ಮುಹ್ಸಿನ್ ಕಾಕೀರ್ ಅನಾಡೋಲು ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟ ಬಾಲಕಿ ಅದೇ ಕುಟುಂಬದ ಸದಸ್ಯಳೇ ಎಂಬುದು ಸ್ಪಷ್ಟವಾಗಿಲ್ಲ.

ಟರ್ಕಿಯು ಸುಮಾರು ನಾಲ್ಕು ಮಿಲಿಯನ್ ಸಿರಿಯನ್ನರಿಗೆ ನೆಲೆಯಾಗಿದೆ. ಅವರಲ್ಲಿ ಹಲವರು ಕಳೆದ ವಾರದ ದುರಂತದಿಂದ ಧ್ವಂಸಗೊಂಡ ಆಗ್ನೇಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಭೂಕಂಪದಿಂದಾಗಿ ಟರ್ಕಿಯಲ್ಲಿ 38,000ಕ್ಕೂ ಹೆಚ್ಚು ಮತ್ತು ಸಿರಿಯಾದಲ್ಲಿ ಸುಮಾರು 3,700 ಜನರು ಪ್ರಾಣ ಕಳೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT