ನಿತ್ಯಾನಂದನಿಗೆ ಶಾಕ್ ನೀಡಿದ ವಿಶ್ವಸಂಸ್ಥೆ 
ವಿದೇಶ

‘ಕೈಲಾಸ’ ಮಂಡಿಸಿದ ವಿಷಯ ಅಪ್ರಸ್ತುತ, ಅರ್ಜಿ ವಜಾ; ನಿತ್ಯಾನಂದನಿಗೆ ಶಾಕ್ ನೀಡಿದ ವಿಶ್ವಸಂಸ್ಥೆ

ಕೈಲಾಸ ದೇಶ ಸ್ಥಾಪನೆ ಮಾಡಿ ಅದಕ್ಕೆ ಜಾಗತಿಕ ಮನ್ನಣೆ ಪಡೆಯುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಪ್ರಯತ್ನಕ್ಕೆ ವಿಶ್ವಸಂಸ್ಥೆ ತಣ್ಣೀರೆರಚಿದ್ದು, ‘ಕೈಲಾಸ ಸಂಯುಕ್ತ ಸಂಸ್ಥಾನ’ (ಯುಎಸ್‌ಕೆ) ಪ್ರತಿನಿಧಿಗಳು ಕಳೆದ ವಾರ ಜಿನೀವಾದಲ್ಲಿ ನಡೆದ ಸಭೆಯಲ್ಲಿ ಮಂಡಿಸಿದ್ದ ವಿಷಯಗಳು ಅಪ್ರಸ್ತುತ’ ಎಂದು ತಳ್ಳಿ ಹಾಕಿದೆ.

ಲಂಡನ್: ಕೈಲಾಸ ದೇಶ ಸ್ಥಾಪನೆ ಮಾಡಿ ಅದಕ್ಕೆ ಜಾಗತಿಕ ಮನ್ನಣೆ ಪಡೆಯುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಪ್ರಯತ್ನಕ್ಕೆ ವಿಶ್ವಸಂಸ್ಥೆ ತಣ್ಣೀರೆರಚಿದ್ದು, ‘ಕೈಲಾಸ ಸಂಯುಕ್ತ ಸಂಸ್ಥಾನ’ (ಯುಎಸ್‌ಕೆ) ಪ್ರತಿನಿಧಿಗಳು ಕಳೆದ ವಾರ ಜಿನೀವಾದಲ್ಲಿ ನಡೆದ ಸಭೆಯಲ್ಲಿ ಮಂಡಿಸಿದ್ದ ವಿಷಯಗಳು ಅಪ್ರಸ್ತುತ’ ಎಂದು ತಳ್ಳಿ ಹಾಕಿದೆ.

ಹೌದು.. ‘ದೇಶಭ್ರಷ್ಟ, ಭಾರತ ಮೂಲದ ನಿತ್ಯಾನಂದ ಸ್ಥಾಪಿಸಿದ್ದು ಎನ್ನಲಾದ ‘ಕೈಲಾಸ ಸಂಯುಕ್ತ ಸಂಸ್ಥಾನಗಳ’ (ಯುಎಸ್‌ಕೆ) ಪ್ರತಿನಿಧಿಗಳು ಕಳೆದ ವಾರ ಜಿನೀವಾದಲ್ಲಿ ನಡೆದ ಸಭೆಯಲ್ಲಿ ಮಂಡಿಸಿದ್ದ ವಿಷಯಗಳು ಅಪ್ರಸ್ತುತ.. ಯುಎಸ್‌ಕೆ ಪ್ರತಿನಿಧಿಗಳು ಸಲ್ಲಿಸಿದ್ದ ಮನವಿಗಳನ್ನು ಸಭೆಯ ನಿರ್ಣಯಗಳಲ್ಲಿ ಸೇರ್ಪಡೆ ಮಾಡಲು ಪರಿಗಣಿಸುವುದಿಲ್ಲ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಗುರುವಾರ ಹೇಳಿದೆ.

‘ಯುಎಸ್‌ಕೆ’ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದನ್ನು ಖಚಿತಪಡಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್, ‘ಅಂದಿನ ಸಭೆಯಲ್ಲಿ ಪ್ರಚಾರ ಸಾಮಗ್ರಿಗಳನ್ನು ಹಂಚದಂತೆ ಅವರನ್ನು ತಡೆಯಲಾಯಿತು  ಎಂದು ಹೇಳಿದ್ದಾರೆ. 'USK (United States of Kailash) ಪ್ರತಿನಿಧಿಗಳು ಎಂದು ಕರೆಯಲ್ಪಡುವ ಅದರ ಎರಡು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವಿಕೆಯನ್ನು ದೃಢೀಕರಿಸಿದೆ, ಈ ಸಭೆಯಲ್ಲಿ ನೋಂದಣಿಗೆ ಎಲ್ಲರಿಗೂ ಮುಕ್ತವಾಗಿರುತ್ತದೆ. ಮಾನವ ಹಕ್ಕುಗಳ ಹೈ ಕಮಿಷನರ್ (OHCHR) ಕಚೇರಿಯು ಪ್ರಚಾರ ವಿಚಾರಗಳನ್ನು ವಿತರಿಸುವುದನ್ನು ತಡೆಯಲಾಗಿದೆ ಎಂದು ಹೇಳಿದರು. ನಮಗೆ ಭಾಷಣದಲ್ಲಿ ಆ ದೇಶದ ಅಥವಾ ಭೂಪ್ರದೇಶದ ಬಗ್ಗೆ ಸರಿಯಾಗಿ ತಿಳಿಸಿಲ್ಲ' ಎಂದು ಹೇಳಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮಗಳಿಗೆ ನೋಂದಣಿ ಎನ್‌ಜಿಒಗಳು ಮತ್ತು ಸಾರ್ವಜನಿಕರಿಗೆ ಮುಕ್ತವಾಗಿದೆ. ಯಾರಾದರೂ ಒಪ್ಪಂದದ ಸಂಸ್ಥೆಗಳಿಗೆ ಮಾಹಿತಿಯನ್ನು ಸಲ್ಲಿಸಬಹುದು, ಸ್ವೀಕರಿಸಿದ ಅರ್ಜಿಗಳ ವಿಶ್ವಾಸಾರ್ಹತೆಯನ್ನು ನಿರ್ಧರಿಸಲು ಮತ್ತು ತಮ್ಮ ಅಭಿಪ್ರಾಯವನ್ನು ತಿಳಿಸಲು ಅವಕಾಶವನ್ನು ನೀಡುತ್ತದೆ ಎಂದು OHCHR ವಕ್ತಾರರು ಹೇಳಿದೆ.

ಫೆ.22 ಹಾಗೂ 24ರಂದು ನಡೆದ ಸಭೆಗಳಲ್ಲಿ ‘ಯುಎಸ್‌ಕೆ’ ಪ್ರತಿನಿಧಿಯೊಬ್ಬರು ‘ಮೂಲನಿವಾಸಿಗಳ ಹಕ್ಕುಗಳು ಹಾಗೂ ಸುಸ್ಥಿರ ಅಭಿವೃದ್ಧಿ’ ಕುರಿತು ಮಾತನಾಡಿದ್ದ ದೃಶ್ಯಗಳನ್ನು ಒಳಗೊಂಡ ವಿಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಹೀಗಾಗಿ ವಿಶ್ವಸಂಸ್ಥೆ ಈ ಹೇಳಿಕೆ ನೀಡಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT