ಗಾಜಾದಲ್ಲಿನ ಪರಿಸ್ಥಿತಿ (ಸಾಂಕೇತಿಕ ಚಿತ್ರ) 
ವಿದೇಶ

ಗಾಜಾ ಪಟ್ಟಿ: 45 ದಿನಗಳಲ್ಲಿ ಇಸ್ರೇಲ್ ಸೇನೆಯಿಂದ 50 ಮಂದಿ ಪತ್ರಕರ್ತರ ಹತ್ಯೆ!

ಹಮಾಸ್- ಇಸ್ರೆಲ್ ಸಂಘರ್ಷದ ಆರಂಭದಿಂದ ಈ ವರೆಗೂ ಕನಿಷ್ಟ 70 ಮಂದಿ ಪತ್ರಕರ್ತರು ಅಥವಾ ಮಾಧ್ಯಮ ಉದ್ಯೋಗಿಗಳು ಹತ್ಯೆಯಾಗಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ ಎಂದು ಪ್ಯಾಲೆಸ್ತೇನ್ ಪತ್ರಕರ್ತರ ಸಿಂಡಿಕೇಟ್ ನ ಡೇಟಾ ಹೇಳಿದೆ.

ಹಮಾಸ್- ಇಸ್ರೆಲ್ ಸಂಘರ್ಷದ ಆರಂಭದಿಂದ ಈ ವರೆಗೂ ಕನಿಷ್ಟ 70 ಮಂದಿ ಪತ್ರಕರ್ತರು ಅಥವಾ ಮಾಧ್ಯಮ ಉದ್ಯೋಗಿಗಳು ಹತ್ಯೆಯಾಗಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ ಎಂದು ಪ್ಯಾಲೆಸ್ತೇನ್ ಪತ್ರಕರ್ತರ ಸಿಂಡಿಕೇಟ್ ನ ಡೇಟಾ ಹೇಳಿದೆ.

ಆರ್ ಎಸ್ ಎಫ್ (Reporters Without Borders) ನ ಮಾಹಿತಿಯ ಪ್ರಕಾರ ಗಾಜಾದಲ್ಲಿ ಪತ್ರಿಕೋದ್ಯಮವನ್ನು ನಿರ್ನಾಮ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದೆ. 

ಕಳೆದ 3 ದಿನಗಳಲ್ಲಿ ಪ್ಯಾಲೆಸ್ತೇನ್ ನ 10 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಅ.07 ರಿಂದ ನ.22 ವರೆಗೆ ಹತ್ಯೆಗೀಡಾದ ಮಾಧ್ಯಮದವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ ಎಂದು ಆರ್ ಎಸ್ ಎಫ್ ಎಕ್ಸ್ ನಲ್ಲಿ ತಿಳಿಸಿದೆ.

ಆರ್‌ಎಸ್‌ಎಫ್‌ ನ ಮಧ್ಯಪ್ರಾಚ್ಯ ಡೆಸ್ಕ್‌ನ ಮುಖ್ಯಸ್ಥ ಜೊನಾಥನ್ ಡಾಘರ್ ಪ್ರಕಾರ, “ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯಲ್ಲಿ 45 ದಿನಗಳಲ್ಲಿ ಸುಮಾರು 50 ಪತ್ರಕರ್ತರನ್ನು ಕೊಂದಿವೆ, ಕಾರ್ಯನಿರತರಾಗಿದ್ದಾಗ 11 ಮಂದಿ ಸಾವನ್ನಪ್ಪಿದ್ದಾರೆ. ಇದು ಶತಮಾನದಲ್ಲೇ ಅತ್ಯಂತ ಭೀಕರ ಹತ್ಯೆಗಳಲ್ಲಿ ಒಂದಾಗಿದೆ. ಅಂತರಾಷ್ಟ್ರೀಯ ಪತ್ರಕರ್ತರು ಗಾಜಾಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ವರದಿಗಾರರಿಗೆ ಸುರಕ್ಷಿತ ಆಶ್ರಯವಿಲ್ಲ. ಒಬ್ಬರ ನಂತರ ಒಬ್ಬರು ಕೊಲ್ಲಲ್ಪಡುತ್ತಿದ್ದಾರೆ. ಅಕ್ಟೋಬರ್ 7 ರಿಂದ, ಪ್ಯಾಲೇಸ್ಟಿನಿಯನ್ ಪ್ರದೇಶವು ಪತ್ರಿಕೋದ್ಯಮದ ನಿಜವಾದ ನಿರ್ಮೂಲನೆಗೆ ಒಳಪಟ್ಟಿದೆ.

"ಅಲ್ಲಿನ ಪತ್ರಕರ್ತರನ್ನು ರಕ್ಷಿಸಲು, ರಫಾ ಗಡಿ ದಾಟುವಿಕೆಯನ್ನು ತೆರೆಯಲು ಮತ್ತು ಅಂತರರಾಷ್ಟ್ರೀಯ ವರದಿಗಾರರು ಒಳಗೆ ಹೋಗಲು ಮಧ್ಯಪ್ರವೇಶಿಸುವಂತೆ ನಾವು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

ಶಿಸ್ತಿನಲ್ಲಿರಿಸಲು 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT