ಸ್ಫೋಟಗೊಂಡ ಆಸ್ಪತ್ರೆಯ ಆವರಣ 
ವಿದೇಶ

ಮೃತದೇಹಗಳೆಲ್ಲಿ? ಗಾಜಾ ಆಸ್ಪತ್ರೆ ಸ್ಫೋಟದ ಕುರಿತು ಇಸ್ರೇಲ್ ಪ್ರಶ್ನೆ

ಗಾಜಾಪಟ್ಟಿಯ ಅಲ್ ಅಹಿಲ್ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಪ್ಯಾಲೆಸ್ತೇನ್ ಆರೋಪವನ್ನು ಇಸ್ರೇಲ್ ಸೇನೆ ನಿರಾಕರಿಸಿದೆ.

ಟೆಲ್ ಅವಿವ್: ಗಾಜಾಪಟ್ಟಿಯ ಅಲ್ ಅಹಿಲ್ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಪ್ಯಾಲೆಸ್ತೇನ್ ಆರೋಪವನ್ನು ಇಸ್ರೇಲ್ ಸೇನೆ ನಿರಾಕರಿಸಿದೆ.

ಇದೇ ವೇಳೆ ಸ್ಫೋಟದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂಬ ಹಮಾಸ್ ನ ಆರೋಪದಲ್ಲಿನ ತಪ್ಪುಗಳನ್ನು ತೋರಿಸಿರುವ ಐಡಿಎಫ್ ನ ವಕ್ತಾರ ಲೆಫ್ಟಿನೆಂಟ್ ಕರ್ನಲ್ , ಜೊನಾಥನ್ ಕಾನ್ರಿಕಸ್, ಸ್ಫೋಟದ ಹಿಂದೆ ಇಸ್ಲಾಮಿಕ್ ಜಿಹಾದ್ ನ ಕೈವಾಡವಿದೆ ಎಂಬ ಇಸ್ರೇಲ್ ಪ್ರಧಾನಿಯ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರಾಥಮಿಕ ವಿಶ್ಲೇಷಣೆಗಳ ಪ್ರಕಾರ ರಾಕೆಟ್ ಕಾರು ನಿಲ್ದಾಣದಲ್ಲಿ ಸ್ಫೋಟಗೊಂಡಿದ್ದು, ಯಾರೂ ಸಾವನ್ನಪ್ಪಿರುವ ಸಾಧ್ಯತೆಗಳಿಲ್ಲ ಎಂದು ಹೇಳಿದ್ದಾರೆ. 

"ಈ ಪ್ರದೇಶವು ಸಾಕಷ್ಟು ಕಪ್ಪು ಬಣ್ಣದ್ದಾಗಿದೆ ಎಂದು ನಾವು ನೋಡಬಹುದು, ಇಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ತೋರುತ್ತದೆ. ಇದು ನಿಜವಾಗಿಯೂ ರಾಕೆಟ್ ಪ್ರಭಾವ ಬೀರಿದ ಕೇಂದ್ರವಾಗಿದೆ, ರಾಕೆಟ್‌ನ ಪ್ರಭಾವದ ಬಿಂದುವಾಗಿದ್ದು. ರಾಕೆಟ್‌ನಿಂದ ಪರಿಣಾಮ ಉಂಟಾದ ಸುಮಾರು 15 ಕಾರುಗಳು ಇಲ್ಲಿವೆ ಎಂಬುದು ಕಾಣುತ್ತಿದೆ. ಬೆಂಕಿಯ ಅವಶೇಷಗಳು ಕಾಣುತ್ತಿವೆ. ಆದರೆ ಶವಗಳು ಕಾಣುತ್ತಿಲ್ಲ ಎಂದು ಹೇಳಿದ್ದಾರೆ 

ಇದೇ ವೇಳೆ ನೂರಾರು ಜನ ಸಾವನ್ನಪ್ಪಿದ್ದಾರೆ ಎಂಬ ಹಮಾಸ್ ಆರೋಗ್ಯ ಸಚಿವರ ಹೇಳಿಕೆಯನ್ನು ಪ್ರಶ್ನಿಸಿರುವ ಐಡಿಎಫ್, "ನಿಜವಾಗಿಯೂ ಇಲ್ಲಿ 500 ಮಂದಿ  ಕೊಲ್ಲಲ್ಪಟ್ಟಿದ್ದರೆ ಅಥವಾ 471 ಜನರು ಸಾವನ್ನಪ್ಪಿದ್ದಾರೆ ಎಂಬುದು ಗಾಜಾದಲ್ಲಿ ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯದ ಇತ್ತೀಚಿನ ಅಪ್‌ಡೇಟ್ ಆಗಿದ್ದರೆ, ಎಲ್ಲಾ ದೇಹಗಳು ಎಲ್ಲಿವೆ...? ಇಷ್ಟು ಜನರು ಕೊಲ್ಲಲ್ಪಟ್ಟರು, ದೇಹಗಳು ಎಲ್ಲಿವೆ" ಎಂದು ಲೆಫ್ಟಿನೆಂಟ್ ಕರ್ನಲ್ ಕಾನ್ರಿಕಸ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?