ಕೈರೋ ಶೃಂಗಸಭೆಯಲ್ಲಿ ಪಾಲ್ಗೊಂಡ ನಾಯಕರು 
ವಿದೇಶ

ಕೈರೋ ಶೃಂಗಸಭೆ: ಗಾಜಾಯುದ್ಧ, ಇಸ್ರೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅರಬ್ ರಾಷ್ಟ್ರಗಳ ನಾಯಕರು!

ಕೈರೋ: ಶನಿವಾರ ನಡೆದ ಕೈರೋ ಶೃಂಗಸಭೆಯಲ್ಲಿ ಗಾಜಾದಲ್ಲಿನ ಇಸ್ರೇಲ್‌ ಕ್ರಮವನ್ನು ಈಜಿಪ್ಟ್ ಮತ್ತು ಜೋರ್ಡಾನ್ ಕಟುವಾಗಿ ಟೀಕಿಸಿದ್ದು, ದಶಕಗಳ ಹಿಂದೆ ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದ ಎರಡು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಹಮಾಸ್ ವಿರುದ್ಧದ ಎರಡು ವಾರಗಳ ಯುದ್ಧದಿಂದ ತಾಳ್ಮೆ ಕಳೆದುಕೊಳ್ಳುತ್ತಿರುವಂತೆ ತೋರಿಸಿತು.  

ಕೈರೋ: ಶನಿವಾರ ನಡೆದ ಕೈರೋ ಶೃಂಗಸಭೆಯಲ್ಲಿ ಗಾಜಾದಲ್ಲಿನ ಇಸ್ರೇಲ್‌ ಕ್ರಮವನ್ನು ಈಜಿಪ್ಟ್ ಮತ್ತು ಜೋರ್ಡಾನ್ ಕಟುವಾಗಿ ಟೀಕಿಸಿದ್ದು, ದಶಕಗಳ ಹಿಂದೆ ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದ ಎರಡು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಹಮಾಸ್ ವಿರುದ್ಧದ ಎರಡು ವಾರಗಳ ಯುದ್ಧದಿಂದ ತಾಳ್ಮೆ ಕಳೆದುಕೊಳ್ಳುತ್ತಿರುವಂತೆ ತೋರಿಸಿತು. 

ಶೃಂಗಸಭೆಯನ್ನು ಆಯೋಜಿಸಿದ್ದ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸ್ಸಿ ಅವರು ಗಾಜಾದ 2.3 ಮಿಲಿಯನ್ ಪ್ಯಾಲೆಸ್ಟೀನಿಯನ್ನರನ್ನು ಸಿನಾಯ್ ಪರ್ಯಾಯ ದ್ವೀಪಕ್ಕೆ ಓಡಿಸುವ ಯಾವುದೇ ಮಾತನ್ನು ಮತ್ತೊಮ್ಮೆ ತಿರಸ್ಕರಿಸಿದರು ಮತ್ತು ಪ್ಯಾಲೆಸ್ತೀನ್ ನಾಶದ ವಿರುದ್ಧ ಎಚ್ಚರಿಕೆ ನೀಡಿದರು.  

ಹಮಾಸ್ ದಾಳಿಯಿಂದ ಉಂಟಾದ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಯುದ್ಧ ಅಂತ್ಯಗೊಳದ ಲಕ್ಷಣ ಕಾಣುತ್ತಿರುವುದರಿಂದ ಆಗಾಗ್ಗೆ ಮಧ್ಯವರ್ತಿಗಳಾಗಿ ಇಸ್ರೇಲ್‌ನೊಂದಿಗೆ ನಿಕಟ ಸಂಬಂಧ ಹೊಂದಿರುವವರಲ್ಲಿಯೂ ಸಹ ಇಸ್ರೇಲ್ ವಿರುದ್ಧ ಕೋಪ ಹೆಚ್ಚಾಗುತ್ತಿರುವುದು ಶೃಂಗಸಭೆಯ ಭಾಷಣಗಳಲ್ಲಿ ಕೇಳಿಬಂತು. 

ಜೋರ್ಡಾನ್‌ ದೊರೆ ಕೂಡಾ ಅದೇ ರೀತಿಯ ಸಂದೇಶ ನೀಡಿದರು. ಜೋರ್ಡಾನ್ ಈಗಾಗಲೇ ಹಿಂದಿನ ಮಧ್ಯಪ್ರಾಚ್ಯ ಯುದ್ಧಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯನ್ನರನ್ನು ಹೊಂದಿದೆ. ಈಗ ಇಸ್ರೇಲ್ ಮಾಡುತ್ತಿರುವುದು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಯುದ್ಧಾಪರಾಧವಾಗಿದೆ ಮತ್ತು ನಮಗೆಲ್ಲರಿಗೂ ಕೆಂಪು ಗೆರೆಯಾಗಿದೆ ಎಂದು  ಹೇಳಿದರು.

ಗಾಜಾದಲ್ಲಿ ಇಸ್ರೇಲ್ ತನ್ನ ಬರ್ಬರ ಆಕ್ರಮಣವನ್ನು ನಿಲ್ಲಿಸುವಂತೆ ಪ್ಯಾಲೇಸ್ಟಿನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಕರೆ ನೀಡಿದರು. ಪ್ಯಾಲೇಸ್ಟಿನಿಯನ್ನರನ್ನು ಕರಾವಳಿ ಪ್ರದೇಶದಿಂದ ಹೊರಹಾಕುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು. "ನಾವು ಬಿಡುವುದಿಲ್ಲ, ನಾವು ಬಿಡುವುದಿಲ್ಲ, ನಾವು ಬಿಡುವುದಿಲ್ಲ, ಮತ್ತು ನಾವು ನಮ್ಮ ಭೂಮಿಯಲ್ಲಿ ಉಳಿಯುತ್ತೇವೆ" ಎಂದು ಅವರು ಶೃಂಗಸಭೆಯಲ್ಲಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT