ಇಸ್ರೇಲ್ ಪಠ್ಯಪುಸ್ತಕಗಳಿಂದ ಗ್ರೇಟಾ ಥನ್ಬರ್ಗ್ ಪಠ್ಯಕ್ಕೆ ಗೇಟ್ ಪಾಸ್ 
ವಿದೇಶ

ಗಾಜಾಪಟ್ಟಿಗೆ ಬೆಂಬಲ: ಇಸ್ರೇಲ್ ಪಠ್ಯಪುಸ್ತಕಗಳಿಂದ ಗ್ರೇಟಾ ಥನ್ಬರ್ಗ್ ಪಠ್ಯಕ್ಕೆ ಗೇಟ್ ಪಾಸ್!

ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಗಾಜಾಪಟ್ಟಿಗೆ ಬೆಂಬಲ ಘೋಷಣೆ ಮಾಡಿದ್ದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ನಡೆಯನ್ನು ಖಂಡಿಸಿ ಇಸ್ರೇಲ್ ಶಿಕ್ಷಣ ಸಚಿವಾಲಯ ಆಕೆಯ ಕುರಿತ ಪಠ್ಯವನ್ನು ತನ್ನ ಪಠ್ಯಪುಸ್ತಕಗಳಿಂದ ಕೈಬಿಟ್ಟಿದೆ.

ಟೆಲ್ ಅವೀವ್: ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಗಾಜಾಪಟ್ಟಿಗೆ ಬೆಂಬಲ ಘೋಷಣೆ ಮಾಡಿದ್ದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ನಡೆಯನ್ನು ಖಂಡಿಸಿ ಇಸ್ರೇಲ್ ಶಿಕ್ಷಣ ಸಚಿವಾಲಯ ಆಕೆಯ ಕುರಿತ ಪಠ್ಯವನ್ನು ತನ್ನ ಪಠ್ಯಪುಸ್ತಕಗಳಿಂದ ಕೈಬಿಟ್ಟಿದೆ.

ಇಸ್ರೇಲ್‌ನ ಶಿಕ್ಷಣ ಸಚಿವಾಲಯವು ಗ್ರೆಟಾ ಥನ್‌ಬರ್ಗ್‌ನ ಹವಾಮಾನ ಕ್ರಿಯಾವಾದದ ವಿಭಾಗವನ್ನು ಪಠ್ಯಕ್ರಮದಿಂದ ತೆಗೆದುಹಾಕಿದೆ. ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೇಲ್‌ನ ಶಿಕ್ಷಣ ಸಚಿವಾಲಯವು, ಹಮಾಸ್ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ 1,400 ಮುಗ್ಧ ಇಸ್ರೇಲಿಗಳ ಹತ್ಯೆಗೆ ಕಾರಣವಾದ ಭಯೋತ್ಪಾದಕ ಸಂಘಟನೆಯಾಗಿದೆ ಮತ್ತು ಇದು 200 ಕ್ಕೂ ಹೆಚ್ಚು ಜನರನ್ನು ಅಪಹರಿಸಿದೆ. ಗಾಜಾ.. ಕುರಿತ ನಿಲುವು ಗ್ರೇಟಾ ಥನ್ಬರ್ಗ್ ಳನ್ನು ಶೈಕ್ಷಣಿಕ ಮತ್ತು ನೈತಿಕ ರೋಲ್ ಮಾಡೆಲ್ ಆಗಿ ಅನರ್ಹಗೊಳಿಸುತ್ತದೆ ಮತ್ತು ಆಕೆ ಇನ್ನು ಮುಂದೆ ಇಸ್ರೇಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮತ್ತು ಶಿಕ್ಷಕರಾಗಿ ಸೇವೆ ಸಲ್ಲಿಸಲು ಅರ್ಹಳಾಗಿಲ್ಲ ಎಂದು ಹೇಳಿದೆ.

ಈ ಹಿಂದೆ ಗಾಜಾಕ್ಕೆ ಬೆಂಬಲ ವ್ಯಕ್ತಪಡಿಸಿ ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಪೋಸ್ಟ್ ಮಾಡಿದ್ದರು. ಪೋಸ್ಟ್ ನಲ್ಲಿ ಗಾಜಾದ ಬಗ್ಗೆ ಜಗತ್ತು ಮಾತನಾಡಬೇಕು ಮತ್ತು ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಇಂದು ನಾವು ಪ್ಯಾಲೆಸ್ಟೈನ್ ಮತ್ತು ಗಾಜಾದೊಂದಿಗೆ ಒಗ್ಗಟ್ಟಿನಿಂದ ಮುಷ್ಕರ ಮಾಡುತ್ತೇವೆ. ಜಗತ್ತು ಈ ಬಗ್ಗೆ ಮಾತನಾಡಬೇಕು ಮತ್ತು ಪ್ಯಾಲೆಸ್ಟೀನಿಯನ್ನರು ಮತ್ತು ಎಲ್ಲಾ ನಾಗರಿಕರಿಗೆ ತಕ್ಷಣದ ಕದನ ವಿರಾಮ, ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಕರೆ ನೀಡಬೇಕಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾತು ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ; Video

Hong Kong ಅಗ್ನಿ ಪ್ರಮಾದ: ಮೂವರ ಬಂಧನ; 55 ಮಂದಿಯ ಜೀವ ತೆಗೆಯಿತಾ ಸಿಗರೇಟ್ ಕಿಡಿ? ವೈರಲ್ ಆಗಿರುವ ವಿಡಿಯೋದಲ್ಲೇನಿದೆ?

ರಾಜ್ಯದ ಮಹಿಳಾ ಕ್ರೀಡಾಪಟುಗಳನ್ನು ಸನ್ಮಾನಿಸಿ, ತಲಾ 5 ಲಕ್ಷ ರೂ. ಬಹುಮಾನ ಘೋಷಿಸಿದ ಸಿಎಂ

LPG ಆಮದು: ಭಾರತ-ಅಮೆರಿಕ ಒಪ್ಪಂದ ತೈಲ ಸಂಸ್ಥೆಗಳಿಗೆ ದುಬಾರಿ; ಗ್ರಾಹಕರ ಮೇಲೆ ಪರಿಣಾಮ? ತಜ್ಞರು ಹೇಳಿದ್ದೇನು?

SCROLL FOR NEXT