ಇಸ್ರೇಲ್ ಪಠ್ಯಪುಸ್ತಕಗಳಿಂದ ಗ್ರೇಟಾ ಥನ್ಬರ್ಗ್ ಪಠ್ಯಕ್ಕೆ ಗೇಟ್ ಪಾಸ್ 
ವಿದೇಶ

ಗಾಜಾಪಟ್ಟಿಗೆ ಬೆಂಬಲ: ಇಸ್ರೇಲ್ ಪಠ್ಯಪುಸ್ತಕಗಳಿಂದ ಗ್ರೇಟಾ ಥನ್ಬರ್ಗ್ ಪಠ್ಯಕ್ಕೆ ಗೇಟ್ ಪಾಸ್!

ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಗಾಜಾಪಟ್ಟಿಗೆ ಬೆಂಬಲ ಘೋಷಣೆ ಮಾಡಿದ್ದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ನಡೆಯನ್ನು ಖಂಡಿಸಿ ಇಸ್ರೇಲ್ ಶಿಕ್ಷಣ ಸಚಿವಾಲಯ ಆಕೆಯ ಕುರಿತ ಪಠ್ಯವನ್ನು ತನ್ನ ಪಠ್ಯಪುಸ್ತಕಗಳಿಂದ ಕೈಬಿಟ್ಟಿದೆ.

ಟೆಲ್ ಅವೀವ್: ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಗಾಜಾಪಟ್ಟಿಗೆ ಬೆಂಬಲ ಘೋಷಣೆ ಮಾಡಿದ್ದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ನಡೆಯನ್ನು ಖಂಡಿಸಿ ಇಸ್ರೇಲ್ ಶಿಕ್ಷಣ ಸಚಿವಾಲಯ ಆಕೆಯ ಕುರಿತ ಪಠ್ಯವನ್ನು ತನ್ನ ಪಠ್ಯಪುಸ್ತಕಗಳಿಂದ ಕೈಬಿಟ್ಟಿದೆ.

ಇಸ್ರೇಲ್‌ನ ಶಿಕ್ಷಣ ಸಚಿವಾಲಯವು ಗ್ರೆಟಾ ಥನ್‌ಬರ್ಗ್‌ನ ಹವಾಮಾನ ಕ್ರಿಯಾವಾದದ ವಿಭಾಗವನ್ನು ಪಠ್ಯಕ್ರಮದಿಂದ ತೆಗೆದುಹಾಕಿದೆ. ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೇಲ್‌ನ ಶಿಕ್ಷಣ ಸಚಿವಾಲಯವು, ಹಮಾಸ್ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ 1,400 ಮುಗ್ಧ ಇಸ್ರೇಲಿಗಳ ಹತ್ಯೆಗೆ ಕಾರಣವಾದ ಭಯೋತ್ಪಾದಕ ಸಂಘಟನೆಯಾಗಿದೆ ಮತ್ತು ಇದು 200 ಕ್ಕೂ ಹೆಚ್ಚು ಜನರನ್ನು ಅಪಹರಿಸಿದೆ. ಗಾಜಾ.. ಕುರಿತ ನಿಲುವು ಗ್ರೇಟಾ ಥನ್ಬರ್ಗ್ ಳನ್ನು ಶೈಕ್ಷಣಿಕ ಮತ್ತು ನೈತಿಕ ರೋಲ್ ಮಾಡೆಲ್ ಆಗಿ ಅನರ್ಹಗೊಳಿಸುತ್ತದೆ ಮತ್ತು ಆಕೆ ಇನ್ನು ಮುಂದೆ ಇಸ್ರೇಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮತ್ತು ಶಿಕ್ಷಕರಾಗಿ ಸೇವೆ ಸಲ್ಲಿಸಲು ಅರ್ಹಳಾಗಿಲ್ಲ ಎಂದು ಹೇಳಿದೆ.

ಈ ಹಿಂದೆ ಗಾಜಾಕ್ಕೆ ಬೆಂಬಲ ವ್ಯಕ್ತಪಡಿಸಿ ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಪೋಸ್ಟ್ ಮಾಡಿದ್ದರು. ಪೋಸ್ಟ್ ನಲ್ಲಿ ಗಾಜಾದ ಬಗ್ಗೆ ಜಗತ್ತು ಮಾತನಾಡಬೇಕು ಮತ್ತು ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಇಂದು ನಾವು ಪ್ಯಾಲೆಸ್ಟೈನ್ ಮತ್ತು ಗಾಜಾದೊಂದಿಗೆ ಒಗ್ಗಟ್ಟಿನಿಂದ ಮುಷ್ಕರ ಮಾಡುತ್ತೇವೆ. ಜಗತ್ತು ಈ ಬಗ್ಗೆ ಮಾತನಾಡಬೇಕು ಮತ್ತು ಪ್ಯಾಲೆಸ್ಟೀನಿಯನ್ನರು ಮತ್ತು ಎಲ್ಲಾ ನಾಗರಿಕರಿಗೆ ತಕ್ಷಣದ ಕದನ ವಿರಾಮ, ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಕರೆ ನೀಡಬೇಕಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT