ಇಸ್ರೇಲ್ ವಾಯುದಾಳಿ 
ವಿದೇಶ

ಗಾಜಾದಲ್ಲಿ ತೀವ್ರ ಬಾಂಬ್ ದಾಳಿಯ ನಡುವೆ ಕಾರ್ಯಾಚರಣೆ ವಿಸ್ತರಿಸುತ್ತಿರುವ ಇಸ್ರೇಲಿ ಪಡೆಗಳು!

ಮುತ್ತಿಗೆ ಹಾಕಿದ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದಂತೆ, ಶುಕ್ರವಾರ ರಾತ್ರಿ ತೀವ್ರವಾದ ಬಾಂಬ್ ದಾಳಿಯಡಿ ಗಾಜಾ ಪಟ್ಟಿಯಲ್ಲಿ ಇಂಟರ್ನೆಟ್ ಮತ್ತು ಫೋನ್ ಸೇವೆಗಳು ರದ್ದಾಗಿ ಅದರ 2.3 ಮಿಲಿಯನ್ ಜನರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಂತಾಯಿತು. 

ದೇರ್ ಅಲ್-ಬಾಲಾ: ಮುತ್ತಿಗೆ ಹಾಕಿದ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದಂತೆ, ಶುಕ್ರವಾರ ರಾತ್ರಿ ತೀವ್ರವಾದ ಬಾಂಬ್ ದಾಳಿಯಡಿ ಗಾಜಾ ಪಟ್ಟಿಯಲ್ಲಿ ಇಂಟರ್ನೆಟ್ ಮತ್ತು ಫೋನ್ ಸೇವೆಗಳು ರದ್ದಾಗಿ ಅದರ 2.3 ಮಿಲಿಯನ್ ಜನರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಂತಾಯಿತು. 

ಮೂರು ವಾರಗಳ ಹಿಂದೆ ದಕ್ಷಿಣ ಇಸ್ರೇಲ್‌ನಲ್ಲಿ ಆಕ್ರಮಣದ ನಂತರ ಹಮಾಸ್ ಬಂಡುಕೋರರ ಗುಂಪನ್ನು ಹತ್ತಿಕ್ಕಲು ಪ್ರತಿಜ್ಞೆ ಮಾಡಿದ್ದಂತೆ ಗಾಜಾ ಸಂಪೂರ್ಣವಾಗಿ ಆಕ್ರಮಣಕ್ಕೆ ಹತ್ತಿರವಾಗುತ್ತಿರುವುದನ್ನು ಮಿಲಿಟರಿ ಹೇಳಿಕೆ ಸೂಚಿಸುತ್ತಿದೆ. ಶುಕ್ರವಾರ ರಾತ್ರಿಯ ನಂತರ ವೈಮಾನಿಕ ದಾಳಿಯಿಂದ ಗಾಜಾ ನಗರದಲ್ಲಿ  ಆಗಾಗ ಸ್ಫೋಟಗಳು ಆಗುತ್ತಿದ್ದಂತೆಯೇ, ಇಂಟರ್ನೆಟ್, ಸೆಲ್ಯುಲಾರ್ ಮತ್ತು ಲ್ಯಾಂಡ್‌ಲೈನ್ ಸೇವೆಗಳು ಸ್ಥಗಿತಗೊಂಡಿವೆ.

ವೈದ್ಯಕೀಯ ತಂಡ ಮತ್ತು ಕಾರ್ಯಾಚರಣೆಯ ಕೊಠಡಿಯೊಂದಿಗೆ ಎಲ್ಲಾ ಸಂಪರ್ಕವನ್ನು ಕಳೆದುಕೊಂಡಿದ್ದು, ಜನರು ಇನ್ನು ಮುಂದೆ ಆಂಬ್ಯುಲೆನ್ಸ್ ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಭಯವಾಗುತ್ತಿದೆ ಎಂದು ರೆಡ್ ಕ್ರೆಸೆಂಟ್ ಹೇಳಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು  ಇತರ ಸಹಾಯ ಗುಂಪುಗಳು ಹೇಳಿವೆ. 

ಬಾಂಬ್ ಸ್ಫೋಟದಿಂದಾಗಿ "ಎಲ್ಲಾ ಸಂವಹನ ಮತ್ತು ಇಂಟರ್ನೆಟ್ ಸೇವೆಗಳಿಗೆ ಸಂಪೂರ್ಣ ಅಡ್ಡಿಯಾಗಿದೆ ಎಂದು ಪ್ಯಾಲೆಸ್ತೀನ್ ಟೆಲಿಕಮ್ಯುನಿಕೇಶನ್ಸ್ ಕಂಪನಿ ಪಾಲ್ಟೆಲ್ ಘೋಷಿಸಿದೆ. ಯುದ್ಧದ ಗುರಿ ಸಾಧನೆ ನಿಟ್ಟಿನಲ್ಲಿ  ಗಾಜಾದಲ್ಲಿನ ಇಸ್ರೇಲ್ ಪಡೆಗಳು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿವೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರ, ರಿಯರ್ ಅಡ್ಮ್. ಡೇನಿಯಲ್ ಹಗರಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಮಹಾ ಅಷ್ಟಮಿಯಂದು ಮದ್ಯದಂಗಡಿ ಮತ್ತು ಬಾರ್‌ಗಳು ಬಂದ್; ದುರ್ಗಾ ಪೂಜೆ ವೇಳೆ ಡಿಜೆ ಸಂಗೀತ ನಿಷೇಧ!

ಸಾಕು ಮಾಡಿ: ಸೇವಾಶ್ರಯ ಪ್ರಕರಣದಲ್ಲಿ ಕೊನೆಗೂ ಅಭಿಷೇಕ್ ಬ್ಯಾನರ್ಜಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, ಬಂಧನಕ್ಕೆ ತಡೆ!

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಶೇ. 7.5 ರಷ್ಟು ಮೀಸಲಾತಿ – ಕರಡು ನಿಯಮ ಪ್ರಕಟ

ಸ್ವಚ್ಛ ವಾಯು ಸರ್ವೇಕ್ಷಣ 2026: ಬೆಂಗಳೂರು, ಶ್ರೀನಗರ ಹಿಂದಿಕ್ಕಿದ ದೆಹಲಿ; ಅತ್ಯಂತ ಸ್ವಚ್ಛ ಗಾಳಿ ಯಾವ ನಗರದಲ್ಲಿದೆ ಗೊತ್ತಾ?