ವಿವೇಕ್ ರಾಮಸ್ವಾಮಿ 
ವಿದೇಶ

ಹೆಚ್-1 ಬಿ ವೀಸಾ ವ್ಯವಸ್ಥೆಯನ್ನು ಬದಲಿಸಬೇಕಿದೆ: ಯುಎಸ್ ಅಧ್ಯಕ್ಷೀಯ ಸ್ಪರ್ಧೆ ಆಕಾಂಕ್ಷಿ ವಿವೇಕ್ ರಾಮಸ್ವಾಮಿ ಮಾತು

ಹೆಚ್-1 ಬಿ ವೀಸಾ ವ್ಯವಸ್ಥೆಯನ್ನು ಒಪ್ಪಂದದ ಜೀತಪದ್ಧತಿ ಎಂಬ ಅರ್ಥದಲ್ಲಿ ಮಾತನಾಡಿರುವ ಅಮೇರಿಕಾದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಸ್ಪರ್ಧೆ ಆಕಾಂಕ್ಷಿ ವಿವೇಕ್ ರಾಮಸ್ವಾಮಿ, ಲಾಟರಿ ಆಧರಿತ ವ್ಯವಸ್ಥೆಯನ್ನು ಬದಲಿಸಬೇಕಿದೆ ಎಂದು ಹೇಳಿದ್ದಾರೆ. 

ವಾಷಿಂಗ್ ಟನ್: ಹೆಚ್-1 ಬಿ ವೀಸಾ ವ್ಯವಸ್ಥೆಯನ್ನು ಒಪ್ಪಂದದ ಜೀತಪದ್ಧತಿ ಎಂಬ ಅರ್ಥದಲ್ಲಿ ಮಾತನಾಡಿರುವ ಅಮೇರಿಕಾದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಸ್ಪರ್ಧೆ ಆಕಾಂಕ್ಷಿ ವಿವೇಕ್ ರಾಮಸ್ವಾಮಿ, ಲಾಟರಿ ಆಧರಿತ ವ್ಯವಸ್ಥೆಯನ್ನು ಬದಲಿಸಬೇಕಿದೆ ಎಂದು ಹೇಳಿದ್ದಾರೆ. 

2024 ರಲ್ಲಿ ತಾವು ಅಮೇರಿಕ ಅಧ್ಯಕ್ಷರಾದರೆ, ಅರ್ಹತೆಯ ಪ್ರವೇಶದ ಆಧಾರದಲ್ಲಿ ಹೆಚ್-1 ಬಿ ವೀಸಾ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಹೆಚ್-1 ಬಿ ವೀಸಾಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಐಟಿ ಉದ್ಯೋಗಿಗಳಿಂದ ಬೇಡಿಕೆ ಇದೆ. ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು US ಕಂಪನಿಗಳಿಗೆ ಅವಕಾಶ ನೀಡುವ ವಲಸೆಯೇತರ ವೀಸಾ ವ್ಯವಸ್ಥೆ ಈ ಹೆಚ್-1 ಬಿ ವೀಸಾ ವ್ಯವಸ್ಥೆಯಾಗಿದೆ.

ವಿವೇಕ್ ರಾಮಸ್ವಾಮಿ ಅವರೇ ಎಚ್-1ಬಿ ವೀಸಾ ಯೋಜನೆಯನ್ನು 29 ಬಾರಿ ಬಳಸಿದ್ದಾರೆ ಎಂಬುದು ಗಮನಾರ್ಹವಾಗಿದೆ.
 
ಉದ್ಯೋಗಿಗಳನ್ನು ಹೆಚ್-1 ಬಿ ವೀಸಾ ಅಡಿಯಲ್ಲಿ ನೇಮಕ ಮಾಡಿಕೊಳ್ಳುವುದಕ್ಕಾಗಿ 2018-2023 ವರೆಗೆ ವಿವೇಕ್ ರಾಮಸ್ವಾಮಿ ಅವರ ಈ ಹಿಂದಿನ ಸಂಸ್ಥೆ ರೋವಂಟ್ ಸೈನ್ಸಸ್ ನ 29 ಅರ್ಜಿಗಳಿಗೆ ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಅನುಮೋದನೆ ನೀಡಿದೆ.

H-1B ವ್ಯವಸ್ಥೆಯು "ಒಳಗೊಂಡಿರುವ ಪ್ರತಿಯೊಬ್ಬರಿಗೂ ಕೆಟ್ಟದ್ದಾಗಿದೆ" ಎಂದು 38 ವರ್ಷದ ಬಯೋಟೆಕ್ ಉದ್ಯಮಿ ಹೇಳಿರುವುದಾಗಿ ಪೊಲಿಟಿಕೋ ವರದಿ ಪ್ರಕಟಿಸಿದೆ.

ಲಾಟರಿ ವ್ಯವಸ್ಥೆಯನ್ನು ನಿಜವಾದ ಅರ್ಹತೆಯ ಪ್ರವೇಶದಿಂದ ಬದಲಾಯಿಸಬೇಕಾಗಿದೆ. ಇದು H-1B ವಲಸಿಗರನ್ನು ಪ್ರಾಯೋಜಿಸಿದ ಕಂಪನಿಯ ಪ್ರಯೋಜನಕ್ಕೆ ಮಾತ್ರ ಸೇರಿಕೊಳ್ಳುವ ಒಪ್ಪಂದದ ಜೀತದ ಒಂದು ರೂಪವಾಗಿದೆ. ನಾನು ಅದನ್ನು ತೆಗೆದುಹಾಕುತ್ತೇನೆ, ಯುಎಸ್ ಸರಣಿ ಆಧಾರಿತ ವಲಸೆಯನ್ನು ತೊಡೆದುಹಾಕುವ ಅಗತ್ಯವಿದೆ”ಎಂದು ರಾಮಸ್ವಾಮಿ ಹೇಳಿದ್ದಾರೆ.

"ಕುಟುಂಬದ ಸದಸ್ಯರಾಗಿ ಬರುವ ಜನರು ಈ ದೇಶಕ್ಕೆ ಕೌಶಲ್ಯ ಆಧಾರಿತ ಕೊಡುಗೆಗಳನ್ನು ನೀಡುವ ಅರ್ಹ ವಲಸಿಗರಲ್ಲ ಎಂದೂ ರಾಮಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT