ವಿಮಾನದಲ್ಲಿ ತಬ್ಬಿಕೊಂಡು ಮಲಗಿರುವ ದಂಪತಿಗಳು 
ವಿದೇಶ

ವಿಮಾನದಲ್ಲಿ 4 ಗಂಟೆ ಕಾಲ ಇವರ ಭಂಗಿಗಳ ನೋಡಿ ಸಾಕಾಯ್ತು; ಫೋಟೋ ಹರಿಬಿಟ್ಟ ಸಹ ಪ್ರಯಾಣಿಕ!

ವಿಮಾನದಲ್ಲಿ ಪ್ರಯಾಣಿಸುವಾಗ, ನೀವು ವಿವಿಧ ರೀತಿಯ ಪ್ರಯಾಣಿಕರನ್ನು ನೋಡುತ್ತೀರಿ. ಕೆಲವರು ಶಾಂತವಾಗಿ ಕುಳಿತುಕೊಳ್ಳುತ್ತಾರೆ. ಕೆಲವರು ಮಲಗುತ್ತಾರೆ, ಕೆಲವರು ಸಹ-ಪ್ರಯಾಣಿಕರೊಂದಿಗೆ ಮಾತನಾಡುತ್ತ ಕಿರಿಕಿರಿ ಮಾಡುತ್ತಾರೆ.

ವಿಮಾನದಲ್ಲಿ ಪ್ರಯಾಣಿಸುವಾಗ, ನೀವು ವಿವಿಧ ರೀತಿಯ ಪ್ರಯಾಣಿಕರನ್ನು ನೋಡುತ್ತೀರಿ. ಕೆಲವರು ಶಾಂತವಾಗಿ ಕುಳಿತುಕೊಳ್ಳುತ್ತಾರೆ. ಕೆಲವರು ಮಲಗುತ್ತಾರೆ, ಕೆಲವರು ಸಹ-ಪ್ರಯಾಣಿಕರೊಂದಿಗೆ ಮಾತನಾಡುತ್ತಲೇ ಇರುತ್ತಾರೆ. ಇನ್ನೂ ಕೆಲವರು ಸಾರ್ವಜನಿಕವಾಗಿ ಪ್ರೀತಿಯನ್ನು ತೋರಿಸುತ್ತಾರೆ. ಆದರೆ ಇತ್ತೀಚೆಗೆ ದಂಪತಿಗಳು ನೀವು ಹಿಂದೆಂದೂ ನೋಡಿರದ ಕೆಲಸವನ್ನು ಮಾಡಿದ್ದಾರೆ.

ನಾಲ್ಕು ಗಂಟೆಗಳ ಹಾರಾಟದ ಸಮಯದಲ್ಲಿ, ಈ ದಂಪತಿಗಳು ಸೀಟಿನ ಮೇಲೆ ಒಬ್ಬರ ಮೇಲೆ ಒಬ್ಬರು ಮಲಗಿರುವುದು ಕಂಡುಬಂದಿದೆ. ಇದು ಭದ್ರತಾ ದೃಷ್ಟಿಕೋನದಿಂದ ಸಂಪೂರ್ಣವಾಗಿ ತಪ್ಪು ಮತ್ತು ನಿಯಮಗಳ ಉಲ್ಲಂಘನೆಯಾಗಿದೆ. ಆದರೆ ಇದು ನೈತಿಕವಾಗಿ ಸರಿ ಅಥವಾ ಇಲ್ಲವೇ ಎಂಬುದನ್ನು ನೀವು ನಿರ್ಧರಿಸಬೇಕು.

ಇತ್ತೀಚಿಗೆ ಟ್ವಿಟ್ಟರ್ ಖಾತೆ @babyibeenajoint ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಅದು ವಿಮಾನದ ಒಳಗೆ ದಂಪತಿಗಳು ವಿಮಾನದ ಸೀಟಿನಲ್ಲಿ ಒಬ್ಬರ ಮೇಲೆ ಒಬ್ಬರು ಮಲಗಿರುವುದು ಕಂಡುಬರುತ್ತದೆ. ಫ್ಲೈಟ್ ಅಟೆಂಡೆಂಟ್ ಅವರನ್ನು ಹಾಗೆ ಮಾಡದಂತೆ ಏಕೆ ತಡೆಯಲಿಲ್ಲ ಎಂಬುದು ಆಶ್ಚರ್ಯಕರವಾಗಿದೆ. ಈ ಫೋಟೋ ವೈರಲ್ ಆದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಉಂಟಾಗಿತ್ತು. ಈ ಮಧ್ಯೆ ಆದರೆ ದಂಪತಿಯ ಹಿಂದಿನ ಸೀಟಿನಲ್ಲಿ ಮಲಗಿರುವ ಹುಡುಗಿಯ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.

ಫೋಟೋಗಳಲ್ಲಿ ದಂಪತಿಗಳು ಆಸನದ ಮೇಲೆ ಮಲಗಿದ್ದಾರೆ. ಪರಸ್ಪರ ತಬ್ಬಿಕೊಂಡು ಮಲಗಿದ್ದಾರೆ. ಶೂ ಮತ್ತು ಚಪ್ಪಲಿಯನ್ನೂ ತೆಗೆದಿದ್ದಾರೆ. ಆತ ನಿದ್ರಿಸುತ್ತಿರುವಂತೆ ಕಾಣುತ್ತಿದ್ದರೂ ಒಂದು ಫೋಟೋದಲ್ಲಿ ಇಬ್ಬರು ಹಾರ್ಟ್ ಸಿಂಬಲ್ ತೋರಿಸಿರುವುದು ಕಾಣಿಸುತ್ತದೆ. ಈ ಫೋಟೋ ಪೋಸ್ಟ್ ಮಾಡಿರುವ ಸಹ ಪ್ರಯಾಣಿಕ ಈ ವಿಮಾನವು 4 ಗಂಟೆಗಳದ್ದಾಗಿದೆ ಎಂದು ಹೇಳಲಾಗಿದೆ. ಅವರು ಇಡೀ ಸಮಯ ಹೀಗೆಯೇ ಮಲಗಿದ್ದರು. ವಿಮಾನ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ, ಆದರೆ ಜನರು ಈ ಜೋಡಿಯನ್ನು ಸಾಕಷ್ಟು ಟ್ರೋಲ್ ಮಾಡಿದ್ದಾರೆ.

ಪೋಸ್ಟ್‌ಗೆ 2 ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿದ್ದು ಹಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

ಶಿಸ್ತಿನಲ್ಲಿರಿಸಲು 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT