ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್
ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ 
ವಿದೇಶ

'ನಿಮ್ಮ ಚುನಾವಣಾ ಭಾಷಣದಲ್ಲಿ ನಮ್ಮ ದೇಶವನ್ನು ಎಳೆದು ತರಬೇಡಿ, ಕಾಶ್ಮೀರ ನಮ್ಮದೇ'- Pakistan

Srinivasamurthy VN

ಇಸ್ಲಾಮಾಬಾದ್: ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಕುರಿತು ನೆರೆಯ ಪಾಕಿಸ್ತಾನ ತಕರಾರು ತೆಗೆದಿದ್ದು, ಭಾರತದ ರಾಜಕೀಯ ನಾಯಕರು ತಮ್ಮ ಚುನಾವಣಾ ಭಾಷಣದಲ್ಲಿ ಅನಾವಶ್ಯಕವಾಗಿ ಪಾಕಿಸ್ತಾನವನ್ನು ಎಳೆದು ತರುತ್ತಿದ್ದಾರೆ ಎಂದು ಕಿಡಿಕಾರಿದೆ.

ಭಾರತದ ಸಾರ್ವತ್ರಿಕ ಚುನಾವಣಾ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ತಮ್ಮ ಭಾಷಣಗಳಲ್ಲಿ ದೇಶವನ್ನು ಎಳೆಯುವುದನ್ನು ನಿಲ್ಲಿಸಬೇಕೆಂದು ಪಾಕಿಸ್ತಾನ ಶುಕ್ರವಾರ ಭಾರತೀಯ ರಾಜಕೀಯ ನಾಯಕರನ್ನು ಒತ್ತಾಯಿಸಿದೆ.

ಈ ಕುರಿತು ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್, 'ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಭಾರತೀಯ ನಾಯಕರು ಮಾಡುವ ಎಲ್ಲಾ ಹಕ್ಕುಗಳನ್ನು ಇಸ್ಲಾಮಾಬಾದ್ ತಿರಸ್ಕರಿಸುತ್ತದೆ. ಭಾರತದ ರಾಜಕಾರಣಿಗಳು ಚುನಾವಣಾ ಉದ್ದೇಶಗಳಿಗಾಗಿ ಪಾಕಿಸ್ತಾನವನ್ನು ತಮ್ಮ ಸಾರ್ವಜನಿಕ ಭಾಷಣದಲ್ಲಿ ಎಳೆದು ತರುವ ಅಜಾಗರೂಕ ಅಭ್ಯಾಸವನ್ನು ಕೂಡಲೇ ನಿಲ್ಲಿಸಬೇಕು" ಎಂದು ಅವರು ಕಿಡಿಕಾರಿದ್ದಾರೆ.

'ಕಾಶ್ಮೀರ ನಮ್ಮದೇ'

ಅಲ್ಲದೆ "ಜಮ್ಮು ಮತ್ತು ಕಾಶ್ಮೀರದ ಮೇಲೆ ಅನಗತ್ಯವಾದ ಹಕ್ಕುಗಳನ್ನು ಪ್ರತಿಪಾದಿಸುವ ಭಾರತೀಯ ನಾಯಕರಿಂದ ಪ್ರಚೋದನಕಾರಿ ಹೇಳಿಕೆಗಳು ಆತಂಕಕಾರಿ. ಪಾಕಿಸ್ತಾನವು ಈ ಹಕ್ಕುಗಳನ್ನು ತಿರಸ್ಕರಿಸುತ್ತದೆ. ಅತಿ-ರಾಷ್ಟ್ರೀಯತೆಯಿಂದ ಉತ್ತೇಜಿತವಾಗಿರುವ ಈ ಪ್ರಚೋದನಕಾರಿ ಮಾತುಗಳು ಪ್ರಾದೇಶಿಕ ಶಾಂತಿ ಮತ್ತು ಸಂವೇದನಾಶೀಲತೆಗೆ ಗಂಭೀರ ಬೆದರಿಕೆಯನ್ನುಂಟುಮಾಡುತ್ತದೆ.

ಭಾರತದ ಹಕ್ಕುಗಳು ಐತಿಹಾಸಿಕ ಮತ್ತು ಕಾನೂನು ಸತ್ಯಗಳಿಗೆ ವಿರುದ್ಧವಾಗಿವೆ. ಐತಿಹಾಸಿಕ ಮತ್ತು ಕಾನೂನು ಸಂಗತಿಗಳು ಮತ್ತು ನೆಲದ ವಾಸ್ತವಗಳು ಜಮ್ಮು ಮತ್ತು ಕಾಶ್ಮೀರದ ಮೇಲಿನ ಭಾರತದ ಆಧಾರರಹಿತ ಹಕ್ಕುಗಳನ್ನು ನಿರಾಕರಿಸುತ್ತವೆ ಎಂದು ಜಹ್ರಾ ಪ್ರತಿಪಾದಿಸಿದರು.

ಭಾರತ ತಿರುಗೇಟು

ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಇಂತಹ ಹೇಳಿಕೆಗಳನ್ನು ಭಾರತ ಈ ಹಿಂದೆ ತಿರಸ್ಕರಿಸಿತ್ತು. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಮತ್ತು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿರುತ್ತವೆ ಮತ್ತು ಬೇರೆ ಯಾವ ದೇಶಕ್ಕೂ ಈ ಬಗ್ಗೆ ಪ್ರತಿಕ್ರಿಯಿಸಲು ಅವಕಾಶವಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪದೇ ಪದೇ ಪ್ರತಿಪಾದಿಸಿದೆ.

SCROLL FOR NEXT