ಬರಾಕ್ ಒಬಾಮಾ  
ವಿದೇಶ

'ಹೌದು, ಆಕೆ ಸಮರ್ಥರು... ಅಮೆರಿಕ ಅವರ ಅಧ್ಯಕ್ಷತೆಗೆ ಸಿದ್ಧವಾಗಿದೆ': ಕಮಲಾ ಹ್ಯಾರಿಸ್ ಗೆ ಬರಾಕ್ ಒಬಾಮಾ ಬೆಂಬಲ!

ಕಮಲಾ ಹ್ಯಾರಿಸ್ ಅವರು ಜನರಿಗಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ, ಅವರ ಧ್ವನಿ ಯಾವಾಗಲೂ ಅಮೆರಿಕದ ಪ್ರಜೆಗಳ ಪರವಾಗಿರುತ್ತದೆ. ಯಾರಾದರೂ ಮತ್ತು ಪ್ರತಿದಿನ ಎದ್ದು ನಿಮಗಾಗಿ ಹೋರಾಡುವವರಿದ್ದರೆ ಅವರು ಕಮಲಾ ಹ್ಯಾರಿಸ್ ಎಂದಿದ್ದಾರೆ.

ಚಿಕಾಗೋ: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್‌ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಬಗ್ಗೆ ನಿನ್ನೆ ಚಿಕಾಗೊದಲ್ಲಿ ಸಾರ್ವಜನಿಕ ಭಾಷಣದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಕಮಲಾ ಹ್ಯಾರಿಸ್ ಅವರಿಗೆ ಉರಿಯುವ ಬೆಳಕಿನ ಜ್ಯೋತಿದೀಪವನ್ನು ಹಸ್ತಾಂತರಿಸಲಾಗಿದ್ದು, ಅವರ ಅಧ್ಯಕ್ಷತೆಗೆ ಅಮೆರಿಕ ಸಜ್ಜಾಗಿದೆ ಎಂದು ಹೇಳುವ ಮೂಲಕ ತಮ್ಮ ಬೆಂಬಲವನ್ನು ನೀಡಿದ್ದಾರೆ.

ಪಕ್ಷದ ನಾಮನಿರ್ದೇಶನ ಸಮಾವೇಶವನ್ನು ಆಯೋಜಿಸುವ ಕಿಕ್ಕಿರಿದ ಅಖಾಡದಲ್ಲಿ ಸಂಭ್ರಮದ ಚಪ್ಪಾಳೆ ಮತ್ತು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲ್ಪಟ್ಟ ಮಾಜಿ ಅಧ್ಯಕ್ಷ ಒಬಾಮಾ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಮೆರಿಕನ್ನರಿಗಾಗಿ ಹೋರಾಡುತ್ತಾರೆ ಎಂದು ಹೇಳಿದರಲ್ಲದೆ ನವೆಂಬರ್ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರನ್ನು "ಅಪಾಯಕಾರಿ" ಎಂದು ವ್ಯಾಖ್ಯಾನಿಸಿದ್ದಾರೆ.

ಕಮಲಾ ಹ್ಯಾರಿಸ್ ಅವರು ಜನರಿಗಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ, ಅವರ ಧ್ವನಿ ಯಾವಾಗಲೂ ಅಮೆರಿಕದ ಪ್ರಜೆಗಳ ಪರವಾಗಿರುತ್ತದೆ. ನಿಮ್ಮನ್ನು ನೋಡುವ ಮತ್ತು ಕೇಳುವ ಯಾರಾದರೂ ಮತ್ತು ಪ್ರತಿದಿನ ಎದ್ದು ನಿಮಗಾಗಿ ಹೋರಾಡುವವರಿದ್ದರೆ ಅವರು ಕಮಲಾ ಹ್ಯಾರಿಸ್ ಎಂದಿದ್ದಾರೆ.

ಅವರ ಭಾಷಣಕ್ಕೆ ಮುನ್ನ ಅವರ ಪತ್ನಿ ಮತ್ತು ಯುಎಸ್ ನ ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಅವರು ಏನೋ ಇಲ್ಲಿ ಮಾಂತ್ರಿಕತೆ ಅದ್ಬುತವಾದದ್ದು ನಡೆಯುತ್ತಿದೆ. ತಮ್ಮ ಪತಿ 2008ರಲ್ಲಿ ಗೆದ್ದಿದ್ದು, ಆ ಯಶಸ್ಸು ಮತ್ತೆ ಮರುಕಳಿಸುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಕಮಲಾ ಹ್ಯಾರಿಸ್ ಮತ್ತು ಟಿಮ್ ವಾಲ್ಜ್ ಬ್ಲೂ-ಕಾಲರ್ ಕಾರ್ಮಿಕರ ಯೋಗಕ್ಷೇಮಕ್ಕೆ ಬದ್ಧರಾಗಿರುವ ನಾಯಕರು ಎಂದು ಹೇಳುವ ಮೂಲಕ ಬರಾಕ್ ಒಬಾಮಾ ಪ್ರೇಕ್ಷಕರನ್ನು ಹುರಿದುಂಬಿಸಿದರು.

ಈ ಹೊಸ ಆರ್ಥಿಕತೆಯಲ್ಲಿ ನಮ್ಮ ರೋಗಿಗಳನ್ನು ನೋಡಿಕೊಳ್ಳಲು, ನಮ್ಮ ಬೀದಿಗಳನ್ನು ಸ್ವಚ್ಛಗೊಳಿಸಲು ಮತ್ತು ನಮ್ಮ ಪ್ಯಾಕೇಜ್ ಗಳನ್ನು ತಲುಪಿಸಲು ಅಗತ್ಯವಾದ ಆಗಾಗ್ಗೆ ಕೃತಜ್ಞತೆಯಿಲ್ಲದ ಕೆಲಸವನ್ನು ಮಾಡಲು ಪ್ರತಿದಿನ ಎಚ್ಚರಗೊಳ್ಳುವ ಈ ದೇಶಾದ್ಯಂತದ ಲಕ್ಷಾಂತರ ಜನರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವ ಅಧ್ಯಕ್ಷರ ಅಗತ್ಯವಿದೆ. ಉತ್ತಮ ವೇತನ ಮತ್ತು ಕೆಲಸದ ಪರಿಸ್ಥಿತಿಗಳಿಗಾಗಿ ಚೌಕಾಸಿ ಮಾಡುವ ಅವರ ಹಕ್ಕಿಗಾಗಿ ನಿಲ್ಲುತ್ತಾರೆ ಎಂದು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಬರೆದ ಭಾರತ: ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ಮಹಿಳಾ ಪಡೆ; ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ

Bengaluru tunnel project: ಟ್ರಾಫಿಕ್ ಸಮಸ್ಯೆ ಹೋಗಲಾಡಿಸುವ ಯೋಜನೆಗೆ ವಿರೋಧವೇಕೆ? ಸಿಎಂ ಸಿದ್ದರಾಮಯ್ಯ

ನನ್ನ ಮೇಲೆ ಒತ್ತಡ ಹೇರಲು ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗಿತ್ತು : ನಿವೃತ್ತ ಸಿಜೆಐ ಸ್ಫೋಟಕ ಹೇಳಿಕೆ; ಮಾಜಿ CJI ಆರೋಪ ಯಾರ ವಿರುದ್ಧ?

ಫಲೋಡಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 18 ಯಾತ್ರಾರ್ಥಿಗಳ ಸಾವು!

News healines 02-11-2025| ಟನಲ್ ರಸ್ತೆ: ಟನಲ್ ರಸ್ತೆ: ಅಶೋಕ್ ನೇತೃತ್ವದಲ್ಲಿ ಸಮಿತಿಗೆ ಸಿದ್ಧ-DCM; ಮದರಸಾ ಉರ್ದು ಶಾಲೆಗಳಲ್ಲಿ ಕನ್ನಡ ಕಡ್ಡಾಯ- ಜಮೀರ್ ಅಹ್ಮದ್ ಖಾನ್

SCROLL FOR NEXT