ಗಾಜಾದಲ್ಲಿ ಇಸ್ರೇಲ್ ಸೇನಾ ದಾಳಿ 
ವಿದೇಶ

ಗಾಜಾದಲ್ಲಿದ್ದ 'ಹಮಾಸ್ ಕಮಾಂಡ್ ಹಬ್' ಧ್ವಂಸ ಮಾಡಿದ ಇಸ್ರೇಲ್, ದಕ್ಷಿಣ ಗಾಜಾದತ್ತ ಚಿತ್ತ

ಉತ್ತರ ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ಕಮಾಂಡ್ ಹಬ್ ಅನ್ನು ಸಂಪೂರ್ಣ ಧ್ವಂಸ ಮಾಡುವಲ್ಲಿ ಕೊನೆಗೂ ಇಸ್ರೇಲ್ ಸೇನೆ ಯಶಸ್ವಿಯಾಗಿದ್ದು, ಇದೀಗ ತನ್ನ ಸಂಪೂರ್ಣ ಚಿತ್ತವನ್ನು ದಕ್ಷಿಣ ಗಾಜಾದತ್ತ ಮರಳಿಸಿದೆ.

ಜೆರುಸಲೇಮ್: ಉತ್ತರ ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ಕಮಾಂಡ್ ಹಬ್ ಅನ್ನು ಸಂಪೂರ್ಣ ಧ್ವಂಸ ಮಾಡುವಲ್ಲಿ ಕೊನೆಗೂ ಇಸ್ರೇಲ್ ಸೇನೆ ಯಶಸ್ವಿಯಾಗಿದ್ದು, ಇದೀಗ ತನ್ನ ಸಂಪೂರ್ಣ ಚಿತ್ತವನ್ನು ದಕ್ಷಿಣ ಗಾಜಾದತ್ತ ಮರಳಿಸಿದೆ.

ಈ ಬಗ್ಗೆ ಇಸ್ರೇಲ್ ಸೇನಾ ವಕ್ತಾರ ಡೇನಿಯಲ್ ಹಗರಿ ಮಾಹಿತಿ ನೀಡಿದ್ದು, 'ನಾವು ಉತ್ತರ ಗಾಜಾ ಪಟ್ಟಿಯಲ್ಲಿ ಹಮಾಸ್ ಮಿಲಿಟರಿ ಚೌಕಟ್ಟನ್ನು ಕಿತ್ತುಹಾಕುವಿಕೆಯನ್ನು ಪೂರ್ಣಗೊಳಿಸಿದ್ದೇವೆ. ಪ್ಯಾಲೇಸ್ಟಿನಿಯನ್ನರು ಈಗ ಈ ಪ್ರದೇಶದಲ್ಲಿ ನಿರ್ಭಯವಾಗಿ ವಿರಳವಾಗಿ ಮತ್ತು "ಕಮಾಂಡರ್‌ಗಳಿಲ್ಲದೆ" ಕಾರ್ಯನಿರ್ವಹಿಸಬಹುದಾಗಿದೆ. ಈಗ ಗಾಜಾ ಪಟ್ಟಿಯ ಮಧ್ಯಭಾಗದಲ್ಲಿ ಮತ್ತು ಗಾಜಾ ಪಟ್ಟಿಯ ದಕ್ಷಿಣದಲ್ಲಿ ಹಮಾಸ್ ಅನ್ನು ಕಿತ್ತುಹಾಕುವತ್ತ ಸೇನೆ ಗಮನ ಹರಿಸಿದೆ" ಎಂದು ಹೇಳಿದರು.

ಅಂತೆಯೇ ಸೇನೆಯ ಈ ಮುಂದಿನ ಕಾರ್ಯಕ್ಕೆ ಕೊಂಚ ಸಮಯ ತೆಗೆದುಕೊಳ್ಳುತ್ತದೆ ಎಂದು ಒಪ್ಪಿಕೊಂಡ ಅವರು, ನಾವು ಅದನ್ನು ವಿಭಿನ್ನ ರೀತಿಯಲ್ಲಿ ಮಾಡುತ್ತೇವೆ. ಮಧ್ಯ ಗಾಜಾ ಪಟ್ಟಿಯಲ್ಲಿರುವ ನಿರಾಶ್ರಿತರ ಶಿಬಿರಗಳು ಕಿಕ್ಕಿರಿದು ತುಂಬಿವೆ ಮತ್ತು ಭಯೋತ್ಪಾದಕರಿಂದ ತುಂಬಿವೆ. ದಕ್ಷಿಣದಲ್ಲಿ, ಖಾನ್ ಯುನಿಸ್‌ನ ದೊಡ್ಡ ನಗರ ಭೂದೃಶ್ಯವು ಸುರಂಗಗಳ ವಿಸ್ತಾರವಾದ ಭೂಗತ ಜಾಲವನ್ನು ಹೊಂದಿದೆ. ಹೀಗಾಗಿ ಇದು ಸಮಯ ತೆಗೆದುಕೊಳ್ಳುತ್ತದೆ. ನಾವು ಎಲ್ಲಾ ಗುರಿಗಳನ್ನು ಸಾಧಿಸುವವರೆಗೆ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಹಗರಿ ಸ್ಪಷ್ಟಪಡಿಸಿದರು.

ಹಿಂದಿನ ಶನಿವಾರ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಸರ್ಕಾರವು "ಹಮಾಸ್ ಅನ್ನು ತೊಡೆದುಹಾಕಲು" ಸೈನ್ಯಕ್ಕೆ ನಿರ್ದೇಶಿಸಿದೆ. ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸುವುದು ಸೇನೆಯ ಜವಾಬ್ದಾರಿಯಾಗಿದೆ. ಗಾಜಾವು "ಇಸ್ರೇಲ್ಗೆ ಎಂದಿಗೂ ಬೆದರಿಕೆಯಾಗುವುದಿಲ್ಲ" ಎಂದು ಖಚಿತಪಡಿಸುತ್ತದೆ. ಆ ಕೆಲಸವನ್ನು ಸೇನೆ ಮಾಡುತ್ತಿದೆ ಎಂದು ಹಗರಿ ಹೇಳಿದರು.

ಅಕ್ಟೋಬರ್ 7 ರಂದು ಇಸ್ರೇಲ್ ದೇಶದ ಇತಿಹಾಸದಲ್ಲಿ ಅತ್ಯಂತ ಭೀಕರ ದಾಳಿಯನ್ನು ನಡೆಸಿದ ಹಿನ್ನಲೆಯಲ್ಲಿ ಹಮಾಸ್ ಸಂಘಟನೆ ವಿರುದ್ಧ ಯುದ್ಧ ಸಾರಿದ್ದ ಇಸ್ರೇಲ್ ಅದನ್ನೂ ಸಂಪೂರ್ಣ ನಾಶ ಮಾಡುವ ಪ್ರತಿಜ್ಞೆ ಮಾಡಿತ್ತು.  ಹಮಾಸ್ ನಡೆಸಿದ್ದ ಅಂದಿನ ದಾಳಿಯಲ್ಲಿ 1,140 ಜನರು ಸಾವನ್ನಪ್ಪಿ 132ಕ್ಕೂ ಅಧಿಕ ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳಾಗಿರಿಸಲಾಗಿತ್ತು.  ಬಳಿಕ ನಡೆದಿದ್ದ ಇಸ್ರೇಲ್ ಸೇನೆ ವೈಮಾನಿಕ ಮತ್ತು ಸೇನಾ ದಾಳಿಯಲ್ಲಿ ಕನಿಷ್ಠ 22,722 ಜನರು ಹತರಾಗಿದ್ದು, ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಹೇಳಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT