ಗಾಜಾದಲ್ಲಿ ಇಸ್ರೇಲ್ ಸೇನಾ ದಾಳಿ 
ವಿದೇಶ

ಗಾಜಾದಲ್ಲಿದ್ದ 'ಹಮಾಸ್ ಕಮಾಂಡ್ ಹಬ್' ಧ್ವಂಸ ಮಾಡಿದ ಇಸ್ರೇಲ್, ದಕ್ಷಿಣ ಗಾಜಾದತ್ತ ಚಿತ್ತ

ಉತ್ತರ ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ಕಮಾಂಡ್ ಹಬ್ ಅನ್ನು ಸಂಪೂರ್ಣ ಧ್ವಂಸ ಮಾಡುವಲ್ಲಿ ಕೊನೆಗೂ ಇಸ್ರೇಲ್ ಸೇನೆ ಯಶಸ್ವಿಯಾಗಿದ್ದು, ಇದೀಗ ತನ್ನ ಸಂಪೂರ್ಣ ಚಿತ್ತವನ್ನು ದಕ್ಷಿಣ ಗಾಜಾದತ್ತ ಮರಳಿಸಿದೆ.

ಜೆರುಸಲೇಮ್: ಉತ್ತರ ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ಕಮಾಂಡ್ ಹಬ್ ಅನ್ನು ಸಂಪೂರ್ಣ ಧ್ವಂಸ ಮಾಡುವಲ್ಲಿ ಕೊನೆಗೂ ಇಸ್ರೇಲ್ ಸೇನೆ ಯಶಸ್ವಿಯಾಗಿದ್ದು, ಇದೀಗ ತನ್ನ ಸಂಪೂರ್ಣ ಚಿತ್ತವನ್ನು ದಕ್ಷಿಣ ಗಾಜಾದತ್ತ ಮರಳಿಸಿದೆ.

ಈ ಬಗ್ಗೆ ಇಸ್ರೇಲ್ ಸೇನಾ ವಕ್ತಾರ ಡೇನಿಯಲ್ ಹಗರಿ ಮಾಹಿತಿ ನೀಡಿದ್ದು, 'ನಾವು ಉತ್ತರ ಗಾಜಾ ಪಟ್ಟಿಯಲ್ಲಿ ಹಮಾಸ್ ಮಿಲಿಟರಿ ಚೌಕಟ್ಟನ್ನು ಕಿತ್ತುಹಾಕುವಿಕೆಯನ್ನು ಪೂರ್ಣಗೊಳಿಸಿದ್ದೇವೆ. ಪ್ಯಾಲೇಸ್ಟಿನಿಯನ್ನರು ಈಗ ಈ ಪ್ರದೇಶದಲ್ಲಿ ನಿರ್ಭಯವಾಗಿ ವಿರಳವಾಗಿ ಮತ್ತು "ಕಮಾಂಡರ್‌ಗಳಿಲ್ಲದೆ" ಕಾರ್ಯನಿರ್ವಹಿಸಬಹುದಾಗಿದೆ. ಈಗ ಗಾಜಾ ಪಟ್ಟಿಯ ಮಧ್ಯಭಾಗದಲ್ಲಿ ಮತ್ತು ಗಾಜಾ ಪಟ್ಟಿಯ ದಕ್ಷಿಣದಲ್ಲಿ ಹಮಾಸ್ ಅನ್ನು ಕಿತ್ತುಹಾಕುವತ್ತ ಸೇನೆ ಗಮನ ಹರಿಸಿದೆ" ಎಂದು ಹೇಳಿದರು.

ಅಂತೆಯೇ ಸೇನೆಯ ಈ ಮುಂದಿನ ಕಾರ್ಯಕ್ಕೆ ಕೊಂಚ ಸಮಯ ತೆಗೆದುಕೊಳ್ಳುತ್ತದೆ ಎಂದು ಒಪ್ಪಿಕೊಂಡ ಅವರು, ನಾವು ಅದನ್ನು ವಿಭಿನ್ನ ರೀತಿಯಲ್ಲಿ ಮಾಡುತ್ತೇವೆ. ಮಧ್ಯ ಗಾಜಾ ಪಟ್ಟಿಯಲ್ಲಿರುವ ನಿರಾಶ್ರಿತರ ಶಿಬಿರಗಳು ಕಿಕ್ಕಿರಿದು ತುಂಬಿವೆ ಮತ್ತು ಭಯೋತ್ಪಾದಕರಿಂದ ತುಂಬಿವೆ. ದಕ್ಷಿಣದಲ್ಲಿ, ಖಾನ್ ಯುನಿಸ್‌ನ ದೊಡ್ಡ ನಗರ ಭೂದೃಶ್ಯವು ಸುರಂಗಗಳ ವಿಸ್ತಾರವಾದ ಭೂಗತ ಜಾಲವನ್ನು ಹೊಂದಿದೆ. ಹೀಗಾಗಿ ಇದು ಸಮಯ ತೆಗೆದುಕೊಳ್ಳುತ್ತದೆ. ನಾವು ಎಲ್ಲಾ ಗುರಿಗಳನ್ನು ಸಾಧಿಸುವವರೆಗೆ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಹಗರಿ ಸ್ಪಷ್ಟಪಡಿಸಿದರು.

ಹಿಂದಿನ ಶನಿವಾರ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಸರ್ಕಾರವು "ಹಮಾಸ್ ಅನ್ನು ತೊಡೆದುಹಾಕಲು" ಸೈನ್ಯಕ್ಕೆ ನಿರ್ದೇಶಿಸಿದೆ. ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸುವುದು ಸೇನೆಯ ಜವಾಬ್ದಾರಿಯಾಗಿದೆ. ಗಾಜಾವು "ಇಸ್ರೇಲ್ಗೆ ಎಂದಿಗೂ ಬೆದರಿಕೆಯಾಗುವುದಿಲ್ಲ" ಎಂದು ಖಚಿತಪಡಿಸುತ್ತದೆ. ಆ ಕೆಲಸವನ್ನು ಸೇನೆ ಮಾಡುತ್ತಿದೆ ಎಂದು ಹಗರಿ ಹೇಳಿದರು.

ಅಕ್ಟೋಬರ್ 7 ರಂದು ಇಸ್ರೇಲ್ ದೇಶದ ಇತಿಹಾಸದಲ್ಲಿ ಅತ್ಯಂತ ಭೀಕರ ದಾಳಿಯನ್ನು ನಡೆಸಿದ ಹಿನ್ನಲೆಯಲ್ಲಿ ಹಮಾಸ್ ಸಂಘಟನೆ ವಿರುದ್ಧ ಯುದ್ಧ ಸಾರಿದ್ದ ಇಸ್ರೇಲ್ ಅದನ್ನೂ ಸಂಪೂರ್ಣ ನಾಶ ಮಾಡುವ ಪ್ರತಿಜ್ಞೆ ಮಾಡಿತ್ತು.  ಹಮಾಸ್ ನಡೆಸಿದ್ದ ಅಂದಿನ ದಾಳಿಯಲ್ಲಿ 1,140 ಜನರು ಸಾವನ್ನಪ್ಪಿ 132ಕ್ಕೂ ಅಧಿಕ ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳಾಗಿರಿಸಲಾಗಿತ್ತು.  ಬಳಿಕ ನಡೆದಿದ್ದ ಇಸ್ರೇಲ್ ಸೇನೆ ವೈಮಾನಿಕ ಮತ್ತು ಸೇನಾ ದಾಳಿಯಲ್ಲಿ ಕನಿಷ್ಠ 22,722 ಜನರು ಹತರಾಗಿದ್ದು, ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಹೇಳಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel