ಸಂಗ್ರಹ ಚಿತ್ರ AFP
ವಿದೇಶ

ಹವಾಮಾನ ಬದಲಾವಣೆ: ಜಗತ್ತಿಗೆ ರೆಡ್ ಅಲರ್ಟ್! 10 ವರ್ಷಗಳಿಂದ ಭೂಮಿಯು ಕಾದ ಕುಲುಮೆಯಂತಾಗಿದೆ; ವಿಶ್ವಸಂಸ್ಥೆ ಎಚ್ಚರಿಕೆ

ಕಳೆದ ವರ್ಷ ಬಿಸಿಲ ಝಳ ಎಲ್ಲಾ ದಾಖಲೆಗಳನ್ನು ಮುರಿದಿತ್ತು. ವಿಶ್ವಸಂಸ್ಥೆಯ ಇತ್ತೀಚಿನ ವರದಿಯಲ್ಲಿ ಇದು ದೃಢಪಟ್ಟಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಇಂದು ಈ ವರದಿಯನ್ನು ಬಿಡುಗಡೆ ಮಾಡಿದೆ.

ಕಳೆದ ವರ್ಷ ಬಿಸಿಲ ಝಳ ಎಲ್ಲಾ ದಾಖಲೆಗಳನ್ನು ಮುರಿದಿತ್ತು. ವಿಶ್ವಸಂಸ್ಥೆಯ ಇತ್ತೀಚಿನ ವರದಿಯಲ್ಲಿ ಇದು ದೃಢಪಟ್ಟಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಇಂದು ಈ ವರದಿಯನ್ನು ಬಿಡುಗಡೆ ಮಾಡಿದೆ.

ಈ ವರದಿಯ ಪ್ರಕಾರ, 2023ರಲ್ಲಿ ವಿಪರೀತ ಶಾಖವಿತ್ತು. ಇದು ಇಲ್ಲಿಯವರೆಗಿನ ಅತ್ಯಂತ ಬಿಸಿಯಾದ ವರ್ಷ ಎಂದು ದಾಖಲಾಗಿದೆ. ಈ ಅವಧಿಯಲ್ಲಿ ಅನೇಕ ಬಿಸಿ ಅಲೆಗಳು ಇದ್ದವು. ಅದರ ಪರಿಣಾಮವು ಸಮುದ್ರದಿಂದ ಹಿಮನದಿಯವರೆಗೆ ಗೋಚರಿಸುತ್ತದೆ. WMO ಪ್ರಕಾರ, 2023 ಮಾತ್ರವಲ್ಲ 2014ರಿಂದ 2023ರವರೆಗಿನ ಸಂಪೂರ್ಣ ದಶಕವು ತೀವ್ರ ಶಾಖದ ಹಿಡಿತದಲ್ಲಿದೆ. ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಕೂಡ ಈ ವರದಿಯು ಭೂಮಿ ಅಪಾಯದ ಅಂಚಿನಲ್ಲಿದೆ ಎಂದು ತೋರಿಸುತ್ತದೆ ಎಂದು ಹೇಳಿದ್ದಾರೆ.

ಕಠಿಣ ಎಚ್ಚರಿಕೆ

ಈ ಬಗ್ಗೆ ವಿಶ್ವಸಂಸ್ಥೆಯ ಮುಖ್ಯಸ್ಥರು ತೀವ್ರ ಎಚ್ಚರಿಕೆ ನೀಡಿದ್ದಾರೆ. ಬದಲಾವಣೆ ಅತ್ಯಂತ ವೇಗವಾಗಿ ಆಗುತ್ತಿದೆ. ಭೂಮಿಯಿಂದ ನಿರಂತರವಾಗಿ ಅಪಾಯದ ಸಂಕೇತಗಳು ಬರುತ್ತಿವೆ. WMO ವರದಿಯ ಪ್ರಕಾರ, ಕಳೆದ ವರ್ಷ ಸರಾಸರಿ ಮೇಲ್ಮೈ ತಾಪಮಾನವು ಮಟ್ಟಕ್ಕಿಂತ 1.45 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. 2015ರ ಪ್ಯಾರಿಸ್ ಹವಾಮಾನ ಒಪ್ಪಂದದಲ್ಲಿ ನಿಗದಿಪಡಿಸಿದ ಮಿತಿಯು 1.5 ಡಿಗ್ರಿ ಇತ್ತು. ವರದಿಯ ಪ್ರಕಾರ, ಇದು ರೆಡ್ ಅಲರ್ಟ್ ಪರಿಸ್ಥಿತಿಯಾಗಿದೆ. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಕಳೆದ ವರ್ಷ ಸಮುದ್ರದ ಶಾಖದ ಅಲೆಯು ಪ್ರಪಂಚದ ಮೂರನೇ ಒಂದು ಭಾಗದಷ್ಟು ಸಾಗರಗಳ ಮೇಲೆ ಪರಿಣಾಮ ಬೀರಿತು. 2023ರ ಅಂತ್ಯದ ವೇಳೆಗೆ ಈ ಅಂಕಿ ಅಂಶವು 90 ಪ್ರತಿಶತವನ್ನು ತಲುಪಿದೆ.

ಏರುತ್ತಿರುವ ಸಮುದ್ರ ಮಟ್ಟ

ಸಮುದ್ರ ಮಟ್ಟ ಏರುತ್ತಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಾಪಮಾನ ಏರಿಕೆಯೇ ಇದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ. ಇದರ ಪ್ರಕಾರ, ಹೆಚ್ಚುತ್ತಿರುವ ಶಾಖದಿಂದಾಗಿ ಹಿಮನದಿಗಳು ವೇಗವಾಗಿ ಕರಗುತ್ತಿವೆ. ಕಳೆದ ದಶಕದಲ್ಲಿ (2014-2023) ಸಮುದ್ರ ಮಟ್ಟವು ಹಿಂದಿನ ದಶಕಕ್ಕೆ ಹೋಲಿಸಿದರೆ ಎರಡು ಪಟ್ಟು ವೇಗದಲ್ಲಿ ಏರಿದೆ ಎಂದು WMO ವರದಿ ಮಾಡಿದೆ. ಇಂತಹ ಹವಾಮಾನ ಬದಲಾವಣೆಯಿಂದ ಜಗತ್ತಿನಾದ್ಯಂತ ಸಮಸ್ಯೆ ಉಂಟಾಗುತ್ತಿದೆ ಎಂದೂ ವರದಿ ಹೇಳುತ್ತದೆ. ಇದರಿಂದಾಗಿ ವಿಪರೀತ ಸೆಖೆ, ಪ್ರವಾಹ, ಅನಾವೃಷ್ಟಿ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ