ರಿಷಿ ಸುನಕ್ online desk
ವಿದೇಶ

ರಿಷಿ ಸುನಕ್ ಪಕ್ಷದ ಹಿರಿಯ ಸಂಸದರು ಸಕ್ರಿಯ ರಾಜಕೀಯಕ್ಕೆ ಗುಡ್ ಬೈ: ಸಾರ್ವತ್ರಿಕ ಚುನಾವಣೆಗೂ ಮುನ್ನ 78 ಮಂದಿ ರಾಜೀನಾಮೆ!

ಬ್ರಿಟನ್ ನಲ್ಲಿ ಜುಲೈ 4 ರಂದು ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆಗೂ ಮುನ್ನ ಪ್ರಧಾನಿ ರಿಷಿ ಸುನಕ್ ಗೆ ಸಂಸದರ ರಾಜೀನಾಮೆ ತಲೆ ಬಿಸಿ ಎದುರಾಗಿದೆ.

ಲಂಡನ್: ಬ್ರಿಟನ್ ನಲ್ಲಿ ಜುಲೈ 4 ರಂದು ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆಗೂ ಮುನ್ನ ಪ್ರಧಾನಿ ರಿಷಿ ಸುನಕ್ ಗೆ ಸಂಸದರ ರಾಜೀನಾಮೆ ತಲೆ ಬಿಸಿ ಎದುರಾಗಿದೆ. ಸಾರ್ವತ್ರಿಕ ಚುನಾವಣೆಗೂ ಮುನ್ನ 78 ಸಂಸದರು ರಾಜೀನಾಮೆ ನೀಡಿದ್ದು, ರಿಷಿ ಸುನಕ್ ಚುನಾವಣೆ ಪ್ರಚಾರದ ಮೊದಲ ವಾರಾಂತ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವುಳಿದು, ಶನಿವಾರದಂದು ತಮ್ಮ ಆಪ್ತ ಸಲಹೆಗಾರರೊಂದಿಗೆ ಹೆಚ್ಚು ಸಮಾಲೋಚನೆಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.

ಕನ್ಸರ್ವೇಟೀವ್ ಪಕ್ಷದ ಹಿರಿಯ ಸದಸ್ಯರು ಹಾಗೂ ಸಂಸದರು ಸಾಮೂಹಿಕ ರಾಜೀನಾಮೆ ನೀಡಿದ ಬಳಿಕ ರಿಷಿ ಸುನಕ್ ತಮ್ಮ ಆಪ್ತರು ಹಾಗೂ ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

ಕ್ಯಾಬಿನೆಟ್ ಮಂತ್ರಿಗಳಾದ ಮೈಕೆಲ್ ಗೋವ್ ಮತ್ತು ಆಂಡ್ರಿಯಾ ಲೀಡ್ಸಮ್ ಅವರು ಈ ಚುನಾವಣೆಗೆ ಸ್ಪರ್ಧಿಸದಿರಲು ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ. ಈ ಮೂಲಕ ಚುನಾವಣಾ ರೇಸ್‌ನಿಂದ ನಿರ್ಗಮಿಸಿದ ಪಕ್ಷದ ಸದಸ್ಯರ ಸಂಖ್ಯೆ 78 ಕ್ಕೆ ಏರಿಕೆಯಾಗಿದೆ. ಸುನಕ್‌ಗೆ ಪತ್ರ ಬರೆದಿದ್ದ ಲೀಡ್ಸಮ್ "ಎಚ್ಚರಿಕೆಯಿಂದ ಆಲೋಚಿಸಿದ ನಂತರ, ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲದಿರಲು ನಾನು ನಿರ್ಧರಿಸಿದ್ದೇನೆ ಹೊಸ ಪೀಳಿಗೆ ಮುನ್ನಡೆಸಬೇಕು ಎಂಬುದು ತಿಳಿದಾಗ ಅವರಿಗೆ ದಾರಿ ಮಾಡಿಕೊಡಬೇಕೆಂದು ಅವರು ಹೇಳಿದ್ದರು. ಇದಷ್ಟೇ ಅಲ್ಲದೇ ಮಾಜಿ ಪ್ರಧಾನಿ ಥೆರೆಸಾ ಮೇ ಕೂಡ ಚುನಾವಣೆಯಿಂದ ಹಿಂದೆ ಸರಿದ ಹಿರಿಯ ಸಂಸದರಲ್ಲಿ ಒಬ್ಬರಾಗಿದ್ದಾರೆ. ಮಾಜಿ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ಈಗಾಗಲೇ ಸಕ್ರಿಯ ರಾಜಕೀಯಕ್ಕೆ ಗುಡ್ ಬೈ ಹೇಳುವ ನಿರ್ಧಾರವನ್ನು ಘೋಷಿಸಿದ್ದಾರೆ.

ಸುನಕ್ ಅವರು ಚುನಾವಣಾ ಪ್ರಚಾರದ ಮೊದಲ ವಾರಾಂತ್ಯದಲ್ಲಿ ಒಂದು ದಿನ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿರುವ "ಅಸಾಮಾನ್ಯ ಹೆಜ್ಜೆ" ತೆಗೆದುಕೊಳ್ಳುತ್ತಿದ್ದಾರೆ ಮತ್ತು ತಮ್ಮ ಹತ್ತಿರದ ಸಲಹೆಗಾರರೊಂದಿಗೆ ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚೆಯಲ್ಲಿ ಕಳೆಯುತ್ತಾರೆ ಎಂದು ಗಾರ್ಡಿಯನ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT