ಸಾಂದರ್ಭಿಕ ಚಿತ್ರ  
ವಿದೇಶ

ಕೆನಡಾ ವೀಸಾ ಪ್ರಮಾಣ ಕಡಿತ: ವಲಸಿಗ ಭಾರತೀಯರ ಮೇಲೆ ಪರಿಣಾಮ!

ಜಸ್ಟಿನ್ ಟ್ರುಡೋ ಅವರ ನಿರ್ಧಾರವು ಭಾರತೀಯರ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುವ ನಿರೀಕ್ಷೆಯಿದೆ. 2023 ರಲ್ಲಿ ಕೆನಡಾದಲ್ಲಿ ಭಾರತದ ಸುಮಾರು 3,19,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು.

ನವದೆಹಲಿ: ಭಾರತದೊಂದಿಗೆ ಇತ್ತೀಚೆಗೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೇಸಿನಲ್ಲಿ ಆರೋಪಕ್ಕಿಳಿದು ಸುದ್ದಿಯಾಗಿದ್ದ ಕೆನಡಾದ ಜಸ್ಟಿನ್ ಟ್ರುಡೊ ಸರ್ಕಾರವು ಮುಂದಿನ ವರ್ಷದಿಂದ ತನ್ನ ಜನಸಂಖ್ಯೆಗೆ ತಕ್ಕಂತೆ ವಲಸಿಗರಿಗೆ ವೀಸಾ ನೀಡುವ ಪ್ರಮಾಣದಲ್ಲಿ ಶೇಕಡಾ 20ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ.

ಕೋವಿಡ್ ಸಮಯದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು, 2025-2026 ರಲ್ಲಿ ತಲಾ 5 ಲಕ್ಷ ವಲಸಿಗರಿಗೆ ಅವಕಾಶ ನೀಡುವುದಾಗಿ ಘೋಷಿಸಿದ್ದಾಗ, ಉದ್ಯೋಗಿಗಳ ಅಗತ್ಯಗಳನ್ನು ಪರಿಹರಿಸುವ ಮತ್ತು ಜನಸಂಖ್ಯೆಯ ಬೆಳವಣಿಗೆಯನ್ನು ನಿರ್ವಹಿಸುವ ನಡುವೆ ಸರಿಯಾದ ಸಮತೋಲನ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಇದೀಗ ಕೆನಡಾ ಸರ್ಕಾರದ ಹೊಸ ಯೋಜನೆಯ ಪ್ರಕಾರ, 2025 ರಲ್ಲಿ 3.95 ಲಕ್ಷ ಹೊಸ ಖಾಯಂ ನಿವಾಸಿಗಳಿಗೆ ಅವಕಾಶ ನೀಡಲಾಗುವುದು, ಅದು ಈ ವರ್ಷದ 4.85 ಲಕ್ಷದಿಂದ ಕಡಿಮೆಯಾಗಿದೆ. 2026 ಮತ್ತು 2027 ರ ಪರಿಷ್ಕೃತ ಗುರಿಗಳು ಕ್ರಮವಾಗಿ 3.8 ಲಕ್ಷ ಮತ್ತು 3.65 ಲಕ್ಷಗಳಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ವಿದ್ಯಾರ್ಥಿ ವೀಸಾಗಳನ್ನು ಸುಮಾರು ಶೇಕಡಾ 35 ರಷ್ಟು ಕಡಿತಗೊಳಿಸಿದ ನಂತರ ಈ ಪ್ರಕಟಣೆ ಬಂದಿದೆ. ಇದಲ್ಲದೆ, ವಿದ್ಯಾರ್ಥಿ ವೀಸಾಗಳನ್ನು ಎರಡು ವರ್ಷಗಳವರೆಗೆ 3,60,000 ಕ್ಕೆ ಮಿತಿಗೊಳಿಸಲಾಯಿತು.

ಜಸ್ಟಿನ್ ಟ್ರುಡೋ ಅವರ ನಿರ್ಧಾರವು ಭಾರತೀಯರ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುವ ನಿರೀಕ್ಷೆಯಿದೆ. 2023 ರಲ್ಲಿ ಕೆನಡಾದಲ್ಲಿ ಭಾರತದ ಸುಮಾರು 3,19,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ವಿದ್ಯಾರ್ಥಿ ವೀಸಾಗಳಲ್ಲಿನ ಕಡಿತವು ಪ್ರಾಥಮಿಕವಾಗಿ ಕೆನಡಾದ ಅಂತಾರಾಷ್ಟ್ರೀಯ ವಿದ್ಯಾರ್ಥಿ ಜನಸಂಖ್ಯೆಯ ಶೇಕಡಾ 41ಕ್ಕಿಂತ ಹೆಚ್ಚು ಇರುವ ಭಾರತೀಯರ ಮೇಲೆ ಪರಿಣಾಮ ಬೀರಿತು.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜಸ್ಟಿನ್ ಟ್ರುಡೋ, ನಾವು ಕೆನಡಾದಲ್ಲಿ ಕೆಲವು ವಿದೇಶಿಗರಿಗೆ ತಾತ್ಕಾಲಿಕ ಉದ್ಯೋಗ ವೀಸಾವನ್ನು ನೀಡಲಿದ್ದೇವೆ. ಕಂಪನಿಗಳು ಕೆನಡಾದ ಪ್ರಜೆಗಳಿಗೆ ಏಕೆ ಆದ್ಯತೆ ನೀಡಿಲ್ಲ ಎಂಬುದಕ್ಕೆ ನಾವು ಕಠಿಣ ನಿಯಮಗಳನ್ನು ತರುತ್ತಿದ್ದೇವೆ ಎಂದರು. ಈ ಕ್ರಮವು ಕೆನಡಾದಲ್ಲಿ ನೆಲೆಸಿರುವ ವಲಸಿಗರಿಗೆ ಉದ್ಯೋಗಾವಕಾಶಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ ಎಂದು ಹೇಳಿದರು.

ಕೆನಡಾದ ಅಂಕಿಅಂಶ ಪ್ರಕಾರ, 2024 ರ ಎರಡನೇ ತ್ರೈಮಾಸಿಕದಲ್ಲಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ 2.8 ಮಿಲಿಯನ್ ತಾತ್ಕಾಲಿಕ ನಿವಾಸಿಗಳನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT