ಬೆಂಜಮಿನ್ ನೆತನ್ಯಾಹು 
ವಿದೇಶ

'ನಮ್ಮ ವ್ಯಾಪ್ತಿಯನ್ನು ಮೀರಿದ ಸ್ಥಳವಿಲ್ಲ': ಇರಾನ್‌ಗೆ ನೆತನ್ಯಾಹು ಎಚ್ಚರಿಕೆ

ಯಾರಾದರೂ ನಿಮ್ಮನ್ನು ಕೊಲ್ಲಲು ಮುಂದಾದರೆ ಅವರನ್ನು ಕೊಂದುಬಿಡಿ, ನಿನ್ನೆ, ಇಸ್ರೇಲ್ ರಾಜ್ಯವು ಕಮಾನು-ಹಂತಕ ಹಸನ್ ನಸ್ರಲ್ಲಾನನ್ನು ನಿರ್ಮೂಲನೆ ಮಾಡಿದೆ. ನಸ್ರಲ್ಲಾ ಭಯೋತ್ಪಾದಕ. ಅವನು ಮತ್ತು ಅವನ ಜನರು ಇಸ್ರೇಲ್ ನ್ನು ನಾಶಮಾಡುವ ಯೋಜನೆ ರೂಪಿಸುತ್ತಿದ್ದರು ಎಂದಿದ್ದಾರೆ.

ಜೆರುಸಲೇಂ: ಇಸ್ರೇಲಿ ರಕ್ಷಣಾ ಪಡೆಗಳ (IDF) ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಮರಣ ನಂತರ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್‌ನ ಅಯತೊಲ್ಲಾ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ನ್ನು ಗುರಿಯಾಗಿಸುವವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಯಾರಾದರೂ ನಿಮ್ಮನ್ನು ಕೊಲ್ಲಲು ಮುಂದಾದರೆ ಅವರನ್ನು ಕೊಂದುಬಿಡಿ, ನಿನ್ನೆ, ಇಸ್ರೇಲ್ ರಾಜ್ಯವು ಕಮಾನು-ಹಂತಕ ಹಸನ್ ನಸ್ರಲ್ಲಾನನ್ನು ನಿರ್ಮೂಲನೆ ಮಾಡಿದೆ. ನಸ್ರಲ್ಲಾ ಭಯೋತ್ಪಾದಕ. ಅವನು ಮತ್ತು ಅವನ ಜನರು ಇಸ್ರೇಲ್ ನ್ನು ನಾಶಮಾಡುವ ಯೋಜನೆ ರೂಪಿಸುತ್ತಿದ್ದರು ಎಂದಿದ್ದಾರೆ.

ಇರಾನ್‌ನ ಹಿಂಸಾತ್ಮಕ ಸರ್ವಾಧಿಕಾರದ ಅಡಿಯಲ್ಲಿ ಹೋರಾಡುತ್ತಿರುವ ಎಲ್ಲರೂ ಮತ್ತು ಲೆಬನಾನ್, ಸಿರಿಯಾ, ಇರಾನ್ ಮತ್ತು ಇತರ ಸ್ಥಳಗಳಲ್ಲಿ ಅದರ ಪ್ರಾಕ್ಸಿಗಳ ಅಡಿಯಲ್ಲಿ ಹೋರಾಡುತ್ತಿರುವ ಎಲ್ಲರೂ ಇಂದು ಭರವಸೆ ಹೊಂದಿದ್ದಾರೆ ಎಂದಿದ್ದಾರೆ.

ಇಸ್ರೇಲಿ ಒತ್ತೆಯಾಳುಗಳನ್ನು ಮರಳಿಸುವ ಗುರಿಯನ್ನು ಸಾಧಿಸುವಲ್ಲಿ ಹಸನ್ ನಸ್ರಲ್ಲಾ ಅವರ ಹತ್ಯೆಯು ನಿರ್ಣಾಯಕವಾಗಿದೆ ಎಂದು ನೆತನ್ಯಾಹು ಒತ್ತಿ ಹೇಳಿದರು.

ದೇಶದ ರಕ್ಷಣಾ ಪಡೆಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, "ಐಡಿಎಫ್, ಏರ್ ಫೋರ್ಸ್, ಐಡಿಎಫ್ ಇಂಟೆಲಿಜೆನ್ಸ್, ಮೊಸಾದ್ ಮತ್ತು ಐಎಸ್ಎ ಮಹಾನ್ ಸಾಧನೆಗಳಿಗಾಗಿ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದರು.

ನೆತನ್ಯಾಹು ತನ್ನ ನಾಗರಿಕರನ್ನು ರಕ್ಷಿಸಲು ಇಸ್ರೇಲ್‌ನ ಬದ್ಧತೆಯನ್ನು ಪುನರುಚ್ಚರಿಸಿದರು, ಬೈರುತ್‌ನಲ್ಲಿ ಇಸ್ರೇಲಿ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಸನ್ ನಸ್ರಲ್ಲಾಹ್ ಹತ್ಯೆಯನ್ನು ಐಡಿಎಫ್ ದೃಢಪಡಿಸಿತು.

ಹಸನ್ ನಸ್ರಲ್ಲಾ ಅವರು ಇನ್ನು ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

ದಹಿಯೆಹ್ ಎಂದು ಕರೆಯಲ್ಪಡುವ ಹಿಜ್ಬುಲ್ಲಾ ಭದ್ರಕೋಟೆಯಾದ ಬೈರುತ್‌ನ ದಕ್ಷಿಣ ಉಪನಗರದಲ್ಲಿರುವ ಹಿಜ್ಬುಲ್ಲಾದ ಮುಖ್ಯ ಕೇಂದ್ರ ಕಚೇರಿಯನ್ನು ಶುಕ್ರವಾರ ಗುರಿಯಾಗಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT