ಪ್ರಧಾನಿ ಮೋದಿ - ಅನುರ ಕುಮಾರ ದಿಸನಾಯಕೆ 
ವಿದೇಶ

ಶ್ರೀಲಂಕಾದ ಪವಿತ್ರ ಬೋಧಿ ವೃಕ್ಷಕ್ಕೆ ಪ್ರಧಾನಿ ಮೋದಿ ಭೇಟಿ, ಭಾರತದ ನೆರವಿನ ರೈಲ್ವೆ ಯೋಜನೆಗಳಿಗೆ ಚಾಲನೆ

ಭಾರತದ ನೆರವಿನೊಂದಿಗೆ ನವೀಕರಿಸಲಾದ ಮಾಹೋ-ಒಮಂಥೈ ರೈಲು ಮಾರ್ಗ ಮತ್ತು ಮಾಹೋ-ಅನುರಾಧಪುರ ವಿಭಾಗಕ್ಕೆ ಹೊಸದಾಗಿ ಸ್ಥಾಪಿಸಲಾದ ಸಿಗ್ನಲಿಂಗ್ ವ್ಯವಸ್ಥೆಯನ್ನು ಉಭಯ ನಾಯಕರು ಅಧಿಕೃತವಾಗಿ ಉದ್ಘಾಟಿಸಿದರು.

ಕೊಲಂಬೊ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಶ್ರೀಲಂಕಾದ ಐತಿಹಾಸಕ ನಗರ ಅನುರಾಧಪುರಕ್ಕೆ ಭೇಟಿ ನೀಡಿ, ಲಂಕಾ ಅಧ್ಯಕ್ಷ ಅನುರ ಕುಮಾರ ದಿಸನಾಯಕೆ ಅವರೊಂದಿಗೆ ಭಾರತದ ನೆರವಿನ ಎರಡು ಪ್ರಮುಖ ರೈಲ್ವೆ ಯೋಜನೆಗಳನ್ನು ಉದ್ಘಾಟಿಸಿದರು.

ಅನುರಾಧಪುರ ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ನೆರವಿನೊಂದಿಗೆ ನವೀಕರಿಸಲಾದ ಮಾಹೋ-ಒಮಂಥೈ ರೈಲು ಮಾರ್ಗ ಮತ್ತು ಮಾಹೋ-ಅನುರಾಧಪುರ ವಿಭಾಗಕ್ಕೆ ಹೊಸದಾಗಿ ಸ್ಥಾಪಿಸಲಾದ ಸಿಗ್ನಲಿಂಗ್ ವ್ಯವಸ್ಥೆಯನ್ನು ಉಭಯ ನಾಯಕರು ಅಧಿಕೃತವಾಗಿ ಉದ್ಘಾಟಿಸಿದರು.

ಈ ನವೀಕರಣಗಳು ಶ್ರೀಲಂಕಾದ ಉತ್ತರ ರೈಲು ಸಂಪರ್ಕ ಜಾಲವನ್ನು ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಇದೇ ವೇಳೆ ಪ್ರಧಾನಿ ಮೋದಿ ಅನುರಾಧಪುರದಲ್ಲಿರುವ ಬೋಧಿ ವೃಕ್ಷ ಮತ್ತು ಮಹಾ ಬೋಧಿ ಬೌದ್ಧ ಮಂದಿರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT