ಖಾವಾಜಾ ಆಸಿಫ್-ಅಮರ್ ಪ್ರೀತ್ ಸಿಂಗ್ 
ವಿದೇಶ

ಭಾರತ ನಮ್ಮ ಒಂದೇ ಒಂದು ವಿಮಾನವನ್ನೂ ಹೊಡೆದಿಲ್ಲ: IAF ಮುಖ್ಯಸ್ಥರ ಹೇಳಿಕೆಗೆ ಪಾಕಿಸ್ತಾನ ರಕ್ಷಣಾ ಸಚಿವ ಕಿಡಿ!

ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ ಆರು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಹೇಳಿಕೆ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದೆ.

ನವದೆಹಲಿ/ಇಸ್ಲಾಮಾಬಾದ್: ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ ಆರು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಹೇಳಿಕೆ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಭಾರತೀಯ ವಾಯುಪಡೆಯ ಮುಖ್ಯಸ್ಥರ ಹೇಳಿಕೆಗಳನ್ನು ಸುಳ್ಳು ಎಂದು ಕರೆದಿದ್ದು ಇದನ್ನು ನಂಬಲಾಗದು ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಬರೆದಿದ್ದಾರೆ.

ಭಾರತೀಯ ಸೇನಾ ಅಧಿಕಾರಿಗಳನ್ನು ಭಾರತೀಯ ರಾಜಕಾರಣಿಗಳ ಕಾರ್ಯತಂತ್ರದ ವೈಫಲ್ಯದ ಮುಖವನ್ನಾಗಿ ಮಾಡಲಾಗುತ್ತಿದೆ. ಕಳೆದ ಮೂರು ತಿಂಗಳಿನಿಂದ ಭಾರತವು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಪಾಕಿಸ್ತಾನವು ತಕ್ಷಣವೇ ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ತಾಂತ್ರಿಕ ವಿವರಣೆಯನ್ನು ನೀಡಿತು. ರಫೇಲ್ ಸೇರಿದಂತೆ ಹಲವಾರು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿದ್ದಾಗ ತಿಳಿಸಿದ್ದೇವು ಎಂದು ಹೇಳಿದರು.

ಪಾಕಿಸ್ತಾನದ ಒಂದೇ ಒಂದು ವಿಮಾನವನ್ನು ಹೊಡೆದುರುಳಿಸುವಲ್ಲಿ ಭಾರತ ಯಶಸ್ವಿಯಾಗಲಿಲ್ಲ ಎಂದು ಆಸಿಫ್ ಪುನರುಚ್ಚರಿಸಿದರು. ಬದಲಾಗಿ, ಪಾಕಿಸ್ತಾನವು ಆರು ಭಾರತೀಯ ಜೆಟ್‌ಗಳು, S-400 ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಹಲವಾರು ಡ್ರೋನ್‌ಗಳನ್ನು ನಾಶಪಡಿಸಿತು. ಪಾಕಿಸ್ತಾನವು ಹಲವಾರು ಭಾರತೀಯ ವಾಯುನೆಲೆಗಳನ್ನು ಸಹ ನಿಷ್ಕ್ರಿಯಗೊಳಿಸಿದೆ ಎಂದರು.

ಪಾಕಿಸ್ತಾನದ ನಿರಾಕರಣೆ ವಾಸ್ತವವಾಗಿ ತನ್ನ ಮಿಲಿಟರಿ ಸೋಲಿನ ನೋವನ್ನು ಮರೆಮಾಚುವ ಪ್ರಯತ್ನವಾಗಿದೆ. ಆಪರೇಷನ್ ಸಿಂಧೂರ್ ಭಾರತವು ಬಯಸಿದಾಗಲೆಲ್ಲಾ ನಿಖರವಾದ ದಾಳಿಗಳೊಂದಿಗೆ ಪಾಕಿಸ್ತಾನದ ಮಿಲಿಟರಿ ಸಾಮರ್ಥ್ಯವನ್ನು ನಿರ್ಣಾಯಕವಾಗಿ ದುರ್ಬಲಗೊಳಿಸಬಹುದು ಎಂದು ಸಾಬೀತುಪಡಿಸಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಆಪರೇಷನ್ ಸಿಂಧೂರ್‌ನಲ್ಲಿ ಭಾರತವು ಕನಿಷ್ಠ ಐದು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ಒಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಿದೆ ಎಂದು ವಾಯುಪಡೆಯ ಮುಖ್ಯಸ್ಥರು ಬಹಿರಂಗಪಡಿಸಿದರು. ಈ ವಿಮಾನವು ELINT ಅಥವಾ AEW&C ಆಗಿತ್ತು. ಇದನ್ನು 300 ಕಿಮೀ ದೂರದಿಂದ ಗುರಿಯಾಗಿಸಲಾಗಿತ್ತು. ಇದು ವಾಯುಪಡೆಯ ಇತಿಹಾಸದಲ್ಲಿ ಅತಿದೊಡ್ಡ ಮೇಲ್ಮೈಯಿಂದ ಆಗಸಕ್ಕೆ ನಡೆದ ಕಾರ್ಯಾಚರಣೆಯಾಗಿತ್ತು.

ಮುರಿಯದ್ ಮತ್ತು ಚಕ್ಲಾದಂತಹ ಎರಡು ಪಾಕಿಸ್ತಾನಿ ಕಮಾಂಡ್-ಅಂಡ್-ಕಂಟ್ರೋಲ್ ಕೇಂದ್ರಗಳು, ಆರು ರಾಡಾರ್‌ಗಳು, ಲಾಹೋರ್ ಮತ್ತು ಒಕಾರಾದಲ್ಲಿ ಎರಡು SAGW ವ್ಯವಸ್ಥೆಗಳು ಮತ್ತು ಮೂರು ಪ್ರಮುಖ ಹ್ಯಾಂಗರ್‌ಗಳು ಸಹ ನಾಶವಾದವು ಎಂದು ವಾಯುಪಡೆಯ ಮುಖ್ಯಸ್ಥರು ಹೇಳಿದರು. ಇವುಗಳಲ್ಲಿ ಅನೇಕ ವಿಮಾನಗಳು ದುರಸ್ತಿಯಲ್ಲಿದ್ದ ಜಕೋಬಾಬಾದ್‌ನಲ್ಲಿರುವ F-16 ಹ್ಯಾಂಗರ್ ಸೇರಿತ್ತು. 80-90 ಗಂಟೆಗಳಲ್ಲಿ, ಪಾಕಿಸ್ತಾನವು ತುಂಬಾ ಹಾನಿಯನ್ನು ಅನುಭವಿಸಿತು, ಅದು ಕದನ ವಿರಾಮಕ್ಕಾಗಿ ಭಾರತವನ್ನು ಸಂಪರ್ಕಿಸಬೇಕಾಯಿತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ; ಭೀಕರ ಭೂಕುಸಿತದಲ್ಲಿ 14 ಸಾವು, ಸಿಕ್ಕಿಂ ಸಂಪರ್ಕ ಕಡಿತ

ಡೊನಾಲ್ಡ್ ಟ್ರಂಪ್ ಕರೆಗೂ ನಿಲ್ಲದ ಘರ್ಷಣೆ: ಇಸ್ರೇಲ್ ದಾಳಿಗೆ ಗಾಜಾದಲ್ಲಿ ಕನಿಷ್ಠ 60 ಮಂದಿ ಸಾವು

Cricket: ಕೇವಲ 141 ಎಸೆತಗಳಲ್ಲಿ ಬರೊಬ್ಬರಿ 314 ರನ್ ಚಚ್ಚಿದ ಭಾರತ ಮೂಲದ ಆಸಿಸ್ ಕ್ರಿಕೆಟಿಗ Harjas Singh, ಇತಿಹಾಸ ನಿರ್ಮಾಣ!

ಬಿಹಾರ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ: ಶೇ.50ರಷ್ಟು ಸಚಿವರಿಗೆ ಕೊಕ್..?

ಕೆಮ್ಮಿನ ಸಿರಪ್ ಬಗ್ಗೆ ಕೇಂದ್ರ ಸರ್ಕಾರ ಯೂ-ಟರ್ನ್: ಮಧ್ಯ ಪ್ರದೇಶ, ರಾಜಸ್ತಾನ, ತಮಿಳು ನಾಡು ಬ್ಯಾನ್

SCROLL FOR NEXT