ಡೊನಾಲ್ಡ್ ಟ್ರಂಪ್-ಜಾನ್ ಬೋಲ್ಟನ್ 
ವಿದೇಶ

ಭಾರತದ ಮೇಲೆ ಸುಂಕ ವಿಧಿಸಿದ್ದನ್ನು ಟೀಕಿಸಿದ್ದ ಟ್ರಂಪ್ ಆಪ್ತ, ಮಾಜಿ NSA ಮುಖ್ಯಸ್ಥನ ಮನೆ ಮೇಲೆ FBI ದಾಳಿ!

ಜಾನ್ ಬೋಲ್ಟನ್ ಟ್ರಂಪ್ ಅವರ ಮಾಜಿ ಸಹಾಯಕರಾಗಿದ್ದು ಸುಂಕಗಳ ಕುರಿತು ಹಲವಾರು ಬಾರಿ ಅಮೆರಿಕ ಸರ್ಕಾರವನ್ನು ಟೀಕಿಸಿದ್ದರು.

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗಳನ್ನು ಟೀಕಿಸಿದ್ದ ಮಾಜಿ ಎನ್ಎಸ್ಎ ಜಾನ್ ಬೋಲ್ಟನ್ ಅವರ ಮನೆ ಮೇಲೆ FBI ದಾಳಿ ನಡೆಸಿದೆ. ಜಾನ್ ಬೋಲ್ಟನ್ ಟ್ರಂಪ್ ಅವರ ಮಾಜಿ ಸಹಾಯಕರಾಗಿದ್ದು ಸುಂಕಗಳ ಕುರಿತು ಹಲವಾರು ಬಾರಿ ಅಮೆರಿಕ ಸರ್ಕಾರವನ್ನು ಟೀಕಿಸಿದ್ದರು.

ದಾಖಲೆಗಳಿಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಎಫ್‌ಬಿಐ ಅಧಿಕಾರಿಗಳು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಜಾನ್ ಬೋಲ್ಟನ್ ಅವರ ವಾಷಿಂಗ್ಟನ್ ಡಿಸಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರ ಆದೇಶದ ಮೇರೆಗೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಮೇರಿಲ್ಯಾಂಡ್‌ನ ಬೆಥೆಸ್ಡಾದಲ್ಲಿರುವ ಬೋಲ್ಟನ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿ ಪ್ರಾರಂಭವಾದ ಸ್ವಲ್ಪ ಸಮಯದ ನಂತರ, ಪಟೇಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, 'ಯಾರೂ ಕಾನೂನಿಗಿಂತ ದೊಡ್ಡವರಿಲ್ಲ. ಎಫ್‌ಬಿಐ ಅಧಿಕಾರಿಗಳು ಕಾರ್ಯಾಚರಣೆಯಲ್ಲಿದ್ದಾರೆ' ಎಂದು ಬರೆದಿದ್ದಾರೆ.

ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ಟ್ರಂಪ್ ಸುಂಕವನ್ನು ವಿಧಿಸಿದ್ದಾರೆ. ಆದರೆ ಚೀನಾದ ಮೇಲೆ ಸುಂಕ ವಿಧಿಸಿಲ್ಲ. ಹೀಗಾಗಿ ಭಾರತ ರಷ್ಯಾ-ಚೀನಾಕ್ಕೆ ಹತ್ತಿರವಾಗಲು ಇದೇ ಕಾರಣವಾಗಿರಬಹುದು. ಟ್ರಂಪ್ ಆಡಳಿತವು ಇದರ ಬಗ್ಗೆ ಗಮನ ಹರಿಸದಿರುವುದು ಉದ್ದೇಶಪೂರ್ವಕವಲ್ಲದ ತಪ್ಪು ಎಂದು ಬೋಲ್ಟನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಟ್ರಂಪ್ ಭಾರತದೊಂದಿಗಿನ ಸಂಬಂಧವನ್ನು ನಿಭಾಯಿಸಬೇಕಾಗಿದೆ ಎಂದು ಬೋಲ್ಟನ್ ಹೇಳಿದರು. ನಾವು ಸಂಬಂಧಕ್ಕೆ ಆಗುವ ಹಾನಿಯ ಬಗ್ಗೆ ಗಮನಹರಿಸಬೇಕು. ಸಾಧ್ಯವಾದಷ್ಟು ಬೇಗ ಭಾರತದೊಂದಿಗಿನ ಸಂಬಂಧವನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ನಾವು ಯೋಚಿಸಬೇಕು.

ಭಾರತ-ಯುಎಸ್ ಸಂಬಂಧಗಳು ಕೆಟ್ಟ ಸ್ಥಿತಿಯಲ್ಲಿವೆ. ಇದು ಭಾರತವನ್ನು ಚೀನಾ ಮತ್ತು ರಷ್ಯಾಕ್ಕೆ ಹತ್ತಿರ ತರುತ್ತಿದೆ. ಇದು ಭವಿಷ್ಯದಲ್ಲಿ ಅಮೆರಿಕಕ್ಕೆ ಸಮಸ್ಯೆಗಳು ಉಂಟು ಮಾಡಬಹುದು ಎಂದು ಬೋಲ್ಟನ್ ಹೇಳಿದರು. ಟ್ರಂಪ್ ಮತ್ತು ಅಮೆರಿಕ ಭಾರತ ರಷ್ಯಾದ ತೈಲವನ್ನು ಖರೀದಿಸುವುದು. ಅದನ್ನು ಸಂಸ್ಕರಿಸುವುದು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಲ್ಲಿ ಸಮಸ್ಯೆ ಇದ್ದರೆ ಈ ಬಗ್ಗೆ ಚರ್ಚೆ ನಡೆಯಬೇಕು. ಭಾರತ ಯಾವುದೇ ರೀತಿಯ ನಿಷೇಧವನ್ನು ಉಲ್ಲಂಘಿಸಿಲ್ಲ ಎಂಬುದು ಸಹ ಸತ್ಯ ಎಂದು ಬೋಲ್ಟನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

SCROLL FOR NEXT