ಎದೆ ಮೇಲೆ ಬಿದ್ದ ಬಾರ್ಬೆಲ್ 
ವಿದೇಶ

ಎದೆ ಮೇಲೆ ಬಿದ್ದ ಬಾರ್ಬೆಲ್; ಮ್ಯೂಸಿಯಂ ನಿರ್ದೇಶಕ ದುರಂತ ಸಾವು! Video

ರೊನಾಲ್ಡ್ ಮಾಂಟೆನೆಗ್ರೊ ಹವ್ಯಾಸಿ ವೇಟ್‌ಲಿಫ್ಟರ್ ಕೂಡ ಆಗಿದ್ದು, ಬ್ರೆಜಿಲ್ ನ ವಸ್ತುಸಂಗ್ರಹಾಲಯ ಅಧ್ಯಕ್ಷರಾಗಿದ್ದರು ಎಂದು ತಿಳಿದುಬಂದಿದೆ.

ಒಲಿಂಡಾ: ಜಿಮ್ ನಲ್ಲಿ ಬಾರ್ಬೆಲ್ ಬಾರ್ ಎದೆ ಮೇಲೆ ಬಿದ್ದು ಬ್ರೆಜಿಲ್ ಮ್ಯೂಸಿಯಂ ನಿರ್ದೇಶಕ ದುರಂತ ಸಾವಿಗೀಡಾದ ಘಟನೆ ವರದಿಯಾಗಿದೆ.

ಡಿಸೆಂಬರ್ 1 ರಂದು ಬ್ರೆಜಿಲ್ ನ ಒಲಿಂದಾದಲ್ಲಿ ಈ ಘಟನೆ ನಡೆದಿದ್ದು, ಜಿಮ್‌ನಲ್ಲಿ ತೂಕ ಎತ್ತುವಾಗ 55 ವರ್ಷದ ಬ್ರೆಜಿಲ್ ನ ಮ್ಯೂಸಿಯಂ ನಿರ್ದೇಶಕ ರೊನಾಲ್ಡ್ ಮಾಂಟೆನೆಗ್ರೊ (Ronald Montenegro) ಎದೆ ಮೇಲೆ ಬಾರ್ಬೆಲ್ ಬಾರ್ ಬಿದ್ದು ಸಾವನ್ನಪ್ಪಿದ್ದಾರೆ.

ರೊನಾಲ್ಡ್ ಮಾಂಟೆನೆಗ್ರೊ ಹವ್ಯಾಸಿ ವೇಟ್‌ಲಿಫ್ಟರ್ ಕೂಡ ಆಗಿದ್ದು, ಬ್ರೆಜಿಲ್ ನ ವಸ್ತುಸಂಗ್ರಹಾಲಯ ಅಧ್ಯಕ್ಷರಾಗಿದ್ದರು ಎಂದು ತಿಳಿದುಬಂದಿದೆ.

ಬೆಂಚ್ ಪ್ರೆಸ್ ಬಾರ್ಬೆಲ್ ಎತ್ತುವಾಗ ಬಾರ್ ಜಾರಿ ರೊನಾಲ್ಡ್ ಮಾಂಟೆನೆಗ್ರೊ ಅವರ ಎದೆ ಮೇಲೆ ಬಿದ್ದಿದೆ. ಈ ವೇಳೆ ರೊನಾಲ್ಡ್ ಮಾಂಟೆನೆಗ್ರೊ ನೋವಿನಿಂದ ಕುಸಿದಿದ್ದಾರೆ. ಅದೇ ಸಂದರ್ಭದಲ್ಲಿ ಜಿಮ್ ನಲ್ಲಿದ್ದ ಇತರರು ಅವರ ನೆರವಿಗೆ ಧಾವಿಸಿದ್ದು, ಅವರ ದೇಹದ ಮೇಲಿದ್ದ ಬಾರ್ ತೆಗೆದು ಪಕಕ್ಕೆ ಸರಿಸಿದ್ದಾರೆ.

ಕೂಡಲೇ ರೊನಾಲ್ಡ್ ಮಾಂಟೆನೆಗ್ರೊ ರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ರೊನಾಲ್ಡ್ ಮಾಂಟೆನೆಗ್ರೊ ಸಾವನ್ನಪ್ಪಿದ್ದಾರೆ. ಪೊಲೀಸರು ಘಟನೆಯ ತನಿಖೆ ನಡೆಸಿ ಇದು ಆಕಸ್ಮಿಕ ಅಪಘಾತ ಎಂದು ದೃಢಪಡಿಸಿದ್ದಾರೆ.

ಮಾಂಟೆನೆಗ್ರೊ ಒಲಿಂಡಾದಲ್ಲಿರುವ ಪಲಾಸಿಯೊ ಡಾಸ್ ಬೊನೆಕೋಸ್ ಗಿಗಾಂಟೆಸ್ ಪ್ರಖ್ಯಾತ ಮ್ಯೂಸಿಯಂ ನಿರ್ದೇಶಕರಾಗಿದ್ದಾರೆ. ಇಲ್ಲಿ 15 ಅಡಿಗೂ ಎತ್ತರದ ಮಾನವಾಕೃತಿ ಬೊಂಬೆಗಳಿದ್ದು, ಬ್ರೆಜಿಲ್ ಸಾಂಪ್ರದಾಯಿಕ ಉತ್ಸವದ ಪ್ರಮುಖ ಆಕರ್ಷಣೆಯಾಗುವ ಈ ಬೊಂಬೆಗಳಿಗೆಂದೇ ಇರುವ ಮ್ಯೂಸಿಯಂ ಇದಾಗಿದೆ.

ಇಂತಹ ಮ್ಯೂಸಿಯಂ ನಿರ್ದೇಶಕರಾಗಿದ್ದ ರೊನಾಲ್ಡ್ ಮಾಂಟೆನೆಗ್ರೊ ನಗರದ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸಲು ಸಹಾಯ ಮಾಡಿದ ಅತ್ಯಗತ್ಯ ವ್ಯಕ್ತಿ ಎಂದೂ ಖ್ಯಾತಿ ಗಳಿಸಿದ್ದರು. ಅವರನ್ನು ಸಮರ್ಪಿತ ನಾಯಕ, ಕಲಾವಿದ ಮತ್ತು ಕಾರ್ನೀವಲ್ ಸಂಸ್ಕೃತಿಯ ಬಲವಾದ ಬೆಂಬಲಿಗ ಎಂದು ಬಣ್ಣಿಸಲಾಗುತ್ತಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

1st T20I: ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

35 ಎಸೆತಗಳಲ್ಲಿ 84 ರನ್: 5000 ರನ್ ಸೇರಿದಂತೆ ಒಂದೇ ಪಂದ್ಯದಲ್ಲಿ 5 ದಾಖಲೆ ಮುರಿದ ಅಭಿಷೇಕ್ ಶರ್ಮಾ

ರಾಸಲೀಲೆ ಪ್ರಕರಣ: ಅಮಾನತುಗೊಂಡ ಡಿಜಿಪಿ ರಾಮಚಂದ್ರ ರಾವ್ ಸ್ಥಾನಕ್ಕೆ ಉಮೇಶ್ ಕುಮಾರ್ ನೇಮಕ

ಜಂಟಿ ಅಧಿವೇಶನ: ಸದನ ಕದನಕ್ಕೆ ಆಡಳಿತರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸಿದ್ಧತೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ನಾವು ರೆಡಿ, ಆದರೆ RCB ಹಿಂಜರಿಯುತ್ತಿದೆ: ವೆಂಕಟೇಶ್ ಪ್ರಸಾದ್

SCROLL FOR NEXT