ಪಾಕಿಸ್ತಾನದ ಮಹಿಳೆ ನಿಕಿತಾ 
ವಿದೇಶ

ದೆಹಲಿಯಲ್ಲಿ 2ನೇ ಮದುವೆಗೆ ಪತಿಯ ಸಿದ್ಧತೆ: ನ್ಯಾಯ ಕೋರಿ ಪ್ರಧಾನಿ ಮೋದಿಗೆ ಪಾಕ್ ಮಹಿಳೆ ಮನವಿ!

ನಿಕಿತಾ ನಾಗ್ದೇವ್ ಎಂದು ಗುರುತಿಸಲಾದ ಮಹಿಳೆ ಪ್ರಧಾನಿ ನರೇಂದ್ರ ಮೋದಿಯವರಿಂದ ನ್ಯಾಯ ಕೋರಿ ಹತಾಶೆಯ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ

ನವದೆಹಲಿ: ಕರಾಚಿಯಲ್ಲಿ ತನ್ನನ್ನು ಕೈಬಿಟ್ಟ ಪತಿ ದೆಹಲಿಯಲ್ಲಿ ರಹಸ್ಯವಾಗಿ ಎರಡನೇ ಮದುವೆಗೆ ಸಿದ್ಧತೆಗೆ ನಡೆಸಿದ್ದಾರೆ ಎಂದು ಪಾಕಿಸ್ತಾನದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ನಿಕಿತಾ ನಾಗ್ದೇವ್ ಎಂದು ಗುರುತಿಸಲಾದ ಮಹಿಳೆ ಪ್ರಧಾನಿ ನರೇಂದ್ರ ಮೋದಿಯವರಿಂದ ನ್ಯಾಯ ಕೋರಿ ಹತಾಶೆಯ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಇದು ಎರಡೂ ದೇಶಗಳ ಸಾಮಾಜಿಕ ಮಾಧ್ಯಮ ಗುಂಪುಗಳು ಮತ್ತು ಕಾನೂನು ಸಂಸ್ಥೆಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕರಾಚಿಯ ನಿವಾಸಿ ನಿಕಿತಾ, ದೀರ್ಘಾವಧಿಯ ವೀಸಾದಲ್ಲಿ ಇಂದೋರ್‌ನಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಮೂಲದ ವ್ಯಕ್ತಿ ವಿಕ್ರಮ್ ನಾಗ್ದೇವ್ ಅವರನ್ನು ಜನವರಿ 26, 2020 ರಂದು ಹಿಂದೂ ಪದ್ಧತಿಗಳ ಪ್ರಕಾರ ಕರಾಚಿಯಲ್ಲಿ ವಿವಾಹವಾಗಿರುವುದಾಗಿ ಆರೋಪಿಸಿದ್ದಾರೆ.

ಒಂದು ತಿಂಗಳ ನಂತರ ವಿಕ್ರಮ್ ಆಕೆಯನ್ನು ಫೆಬ್ರವರಿ 26 ರಂದು ಭಾರತಕ್ಕೆ ಕರೆತಂದರು. ಆದರೆ ತಿಂಗಳುಗಳಲ್ಲಿ, ಅವರ ಜೀವನ ತಲೆಕೆಳಗಾಗಿತ್ತು ಎಂದು ನಿಕಿತಾ ಹೇಳಿಕೊಂಡಿದ್ದಾರೆ.

ಜುಲೈ 9, 2020 ರಂದು, ವೀಸಾ ತಾಂತ್ರಿಕ ದೋಷದ ನೆಪದಲ್ಲಿ ಅಟ್ಟಾರಿ ಗಡಿಯಲ್ಲಿ ಕೈಬಿಡಲಾಯಿತು. ಅಲ್ಲದೇ ಬಲವಂತವಾಗಿ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಯಿತು. ಅಂದಿನಿಂದ ನನ್ನನ್ನು ಮರಳಿ ಕರೆತರಲು ವಿಕ್ರಮ್ ಎಂದಿಗೂ ಪ್ರಯತ್ನಿಸಲಿಲ್ಲ. ನಾನು ಅವರನ್ನು ಭಾರತಕ್ಕೆ ಕರೆಯುವಂತೆ ಮನವಿ ಮಾಡುತ್ತಲೇ ಇದೆ. ಆದರೆ ಅವರು ಪ್ರತಿ ಬಾರಿಯೂ ನಿರಾಕರಿಸಿದರು ಎಂದು ನಿಕಿತಾ, ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಇಂದು ನ್ಯಾಯ ಸಿಗದಿದ್ದರೆ ಮಹಿಳೆಯರು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಅನೇಕ ಹುಡುಗಿಯರು ತಮ್ಮ ವೈವಾಹಿಕ ಮನೆಗಳಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳ ಎದುರಿಸುತ್ತಾರೆ. ಎಲ್ಲರೂ ನನ್ನೊಂದಿಗೆ ನಿಲ್ಲಬೇಕೆಂದು ನಾನು ವಿನಂತಿಸುತ್ತೇನೆ" ಎಂದು ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಿ ಗ್ರೇಡ್ ಸಿನಿಮಾಗಿಂತ ಕಳಪೆ': ಪಾಕ್ ಸಂಪರ್ಕ ಆರೋಪಕ್ಕೆ ಗೊಗೋಯ್ ತಿರುಗೇಟು!

ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ, ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್!

ಮೆಟ್ರೋ ದರ ಏರಿಕೆ: 'Mr.CM, Cut the Drama': ತೇಜಸ್ವಿ ಸೂರ್ಯ ಗೆ ಪೊಲೀಸ್ ನೋಟಿಸ್!

ಟಿ20 ವಿಶ್ವಕಪ್ 2026: ಐರ್ಲೆಂಡ್ ವಿರುದ್ಧ ಶ್ರೀಲಂಕಾಗೆ 20 ರನ್ ಜಯ

ವೀರ್ ಸಾವರ್ಕರ್‌ಗೆ 'ಭಾರತ ರತ್ನ' ನೀಡಿದರೆ, ಪ್ರಶಸ್ತಿಯ ಘನತೆ ಮತ್ತಷ್ಟು ಹೆಚ್ಚುತ್ತದೆ: ಮೋಹನ್ ಭಾಗವತ್

SCROLL FOR NEXT