ಬುಲ್ಡೋಜರ್ ಕಾರ್ಯಾಚರಣೆ 
ವಿದೇಶ

ಜೆರುಸಲೆಮ್‌ನಲ್ಲಿ ಇಸ್ರೇಲ್ ಬುಲ್ಡೋಜರ್ ಕಾರ್ಯಾಚರಣೆ: ರಾತ್ರೋರಾತ್ರಿ 100 ಪ್ಯಾಲೆಸ್ತೀನಿಯರ ಮನೆ ಧ್ವಂಸ!

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿ ಅನಧಿಕೃತ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿರುವ ಇಸ್ರೇಲಿ ಅಧಿಕಾರಿಗಳು ಬುಲ್ಡೋಜ್ ಕಾರ್ಯಾಚರಣೆ ನಡೆಸಿದ್ದಾರೆ.

ಪೂರ್ವ ಜೆರುಸಲೆಮ್‌ನಲ್ಲಿ ಇಸ್ರೇಲ್ ಬುಲ್ಡೋಜರ್‌ ಕಾರ್ಯಾಚರಣೆ ನಡೆಸಿದ್ದು ನಾಲ್ಕು ಅಂತಸ್ತಿನ ವಸತಿ ಕಟ್ಟಡವನ್ನು ಕೆಡವಿದೆ. ಪರಿಣಾಮ ನೂರಾರು ಪ್ಯಾಲೆಸ್ಟೀನಿಯನ್ನರು ರಾತ್ರೋರಾತ್ರಿ ಮನೆ ಕಳೆದುಕೊಂಡಿದ್ದಾರೆ. ಇದು ಈ ಪ್ರದೇಶದಲ್ಲಿ ನಡೆದ ಅತಿದೊಡ್ಡ ಧ್ವಂಸ ಕಾರ್ಯಾಚರಣೆ ಇದಾಗಿದೆ. ಹಳೆಯ ನಗರದ ಬಳಿಯ ಸಿಲ್ವಾನ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕಟ್ಟಡವು ಒಂದು ಡಜನ್ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು ಸುಮಾರು 100 ಜನರನ್ನು ವಾಸಿಸುತ್ತಿದ್ದರು.

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿ ಅನಧಿಕೃತ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿರುವ ಇಸ್ರೇಲಿ ಅಧಿಕಾರಿಗಳು ಬುಲ್ಡೋಜ್ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯೂ ಎಲ್ಲಾ ನಿವಾಸಿಗಳಿಗೆ ಒಂದು ದುಸ್ವಪ್ನವಾಗಿದೆ ಎಂದು ಕಟ್ಟಡದ ನಿವಾಸಿ ಈದ್ ಶಾವರ್ ತಿಳಿಸಿದರು. ನಾವು ಮಲಗಿದ್ದಾಗ ಇಸ್ರೇಲಿ ಅಧಿಕಾರಿಗಳು ಬಾಗಿಲು ತಟ್ಟಿದರು. ನಾವು ನಮ್ಮ ಬಟ್ಟೆಗಳನ್ನು ಬದಲಾಯಿಸಿ, ಪ್ರಮುಖ ಕಾಗದಪತ್ರಗಳು ಮತ್ತು ದಾಖಲೆಗಳನ್ನು ತೆಗೆದುಕೊಳ್ಳಲು ಮಾತ್ರ ಅವಕಾಶ ನೀಡಿದರು ಎಂದು ನಿವಾಸಿಗಳು ಆರೋಪಿಸಿದರು.

ಏಳು ಜನರ ಕುಟುಂಬವು ಬೇರೆಲ್ಲಿಯೂ ಹೋಗದೆ ತಮ್ಮ ಕಾರಿನಲ್ಲಿ ಮಲಗಬೇಕಾಯಿತು ಎಂದು ಶಾವರ್ ಹೇಳಿದರು. ಇಂದು ಬೆಳಿಗ್ಗೆ ಮೂರು ಬುಲ್ಡೋಜರ್‌ಗಳು ಕಟ್ಟಡವನ್ನು ಕೆಡವಲು ಪ್ರಾರಂಭಿಸಿತು. ಇಸ್ರೇಲಿ ಪೊಲೀಸರು ಸುತ್ತಮುತ್ತಲಿನ ಬೀದಿಗಳನ್ನು ಸುತ್ತುವರೆದರು. ಪ್ರದೇಶದಾದ್ಯಂತ ಮತ್ತು ನೆರೆಯ ಮನೆಗಳ ಮೇಲ್ಛಾವಣಿಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಖಾಸಗಿ ಒಡೆತನದ ಪ್ಯಾಲೆಸ್ಟೀನಿಯನ್ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡವನ್ನು ಪರವಾನಗಿ ಇಲ್ಲದ ಕಾರಣ ಕೆಡವಲು ಯೋಜಿಸಲಾಗಿದೆ.

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಲ್ಲಿ ಜೆರುಸಲೆಮ್‌ನ ಸ್ಥಿತಿ ಅತ್ಯಂತ ವಿವಾದಾತ್ಮಕ ವಿಷಯಗಳಲ್ಲಿ ಒಂದಾಗಿದೆ. 1967ರ ಅರಬ್-ಇಸ್ರೇಲಿ ಯುದ್ಧದಲ್ಲಿ ಇಸ್ರೇಲ್ ಹಳೆಯ ನಗರ ಸೇರಿದಂತೆ ಪೂರ್ವ ಜೆರುಸಲೆಮ್ ಅನ್ನು ವಶಪಡಿಸಿಕೊಂಡಿತು. ತಕ್ಷಣವೇ ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿತು. ಅಲ್ಲಿ ಸುಮಾರು 50,000 ಪ್ಯಾಲೆಸ್ಟೀನಿಯನ್ನರಲ್ಲಿ ಸಾವಿರಾರೂ ಇಸ್ರೇಲಿಗರು ವಾಸಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ನಾಯಕತ್ವ ಗೊಂದಲ 'ಮಾಧ್ಯಮಗಳ ಸೃಷ್ಟಿ': ಡಿಕೆಶಿ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲು; BMC ಚುನಾವಣೆಗೆ ಕಾಂಗ್ರೆಸ್ ಜತೆ ಮೈತ್ರಿಗೆ ಶಿವಸೇನೆ(ಯುಬಿಟಿ) ಯತ್ನ!

ದೇವರೇ ಇದ್ದಿದ್ದರೆ ಗಾಜಾದಲ್ಲಿ ಅಷ್ಟು ಜನ ಯಾಕೆ ಸಾಯ್ತಿದ್ರೂ! ಆ ದೇವರಿಗಿಂತ ನಮ್ಮ ಪ್ರಧಾನಿಯೇ ಉತ್ತಮ; ಮುಫ್ತಿಗೆ ಜಾವೇದ್ ಅಖ್ತರ್ ತಿರುಗೇಟು

Mark: ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? ಸುದೀಪ್ ಬೆನ್ನಿಗೆ ನಿಂತ ಚಕ್ರವರ್ತಿ ಚಂದ್ರಚೂಡ್

Hate Speech Bill: ದ್ವೇಷ ಭಾಷಣ ವಿಧೇಯಕ ತಡೆಹಿಡಿಯುವಂತೆ ರಾಜ್ಯಪಾಲರಿಗೆ ಯತ್ನಾಳ ಪತ್ರ!

SCROLL FOR NEXT