ಬುಲ್ಡೋಜರ್ ಕಾರ್ಯಾಚರಣೆ 
ವಿದೇಶ

ಜೆರುಸಲೆಮ್‌ನಲ್ಲಿ ಇಸ್ರೇಲ್ ಬುಲ್ಡೋಜರ್ ಕಾರ್ಯಾಚರಣೆ: ರಾತ್ರೋರಾತ್ರಿ 100 ಪ್ಯಾಲೆಸ್ತೀನಿಯರ ಮನೆ ಧ್ವಂಸ!

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿ ಅನಧಿಕೃತ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿರುವ ಇಸ್ರೇಲಿ ಅಧಿಕಾರಿಗಳು ಬುಲ್ಡೋಜ್ ಕಾರ್ಯಾಚರಣೆ ನಡೆಸಿದ್ದಾರೆ.

ಪೂರ್ವ ಜೆರುಸಲೆಮ್‌ನಲ್ಲಿ ಇಸ್ರೇಲ್ ಬುಲ್ಡೋಜರ್‌ ಕಾರ್ಯಾಚರಣೆ ನಡೆಸಿದ್ದು ನಾಲ್ಕು ಅಂತಸ್ತಿನ ವಸತಿ ಕಟ್ಟಡವನ್ನು ಕೆಡವಿದೆ. ಪರಿಣಾಮ ನೂರಾರು ಪ್ಯಾಲೆಸ್ಟೀನಿಯನ್ನರು ರಾತ್ರೋರಾತ್ರಿ ಮನೆ ಕಳೆದುಕೊಂಡಿದ್ದಾರೆ. ಇದು ಈ ಪ್ರದೇಶದಲ್ಲಿ ನಡೆದ ಅತಿದೊಡ್ಡ ಧ್ವಂಸ ಕಾರ್ಯಾಚರಣೆ ಇದಾಗಿದೆ. ಹಳೆಯ ನಗರದ ಬಳಿಯ ಸಿಲ್ವಾನ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕಟ್ಟಡವು ಒಂದು ಡಜನ್ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು ಸುಮಾರು 100 ಜನರನ್ನು ವಾಸಿಸುತ್ತಿದ್ದರು.

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿ ಅನಧಿಕೃತ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿರುವ ಇಸ್ರೇಲಿ ಅಧಿಕಾರಿಗಳು ಬುಲ್ಡೋಜ್ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯೂ ಎಲ್ಲಾ ನಿವಾಸಿಗಳಿಗೆ ಒಂದು ದುಸ್ವಪ್ನವಾಗಿದೆ ಎಂದು ಕಟ್ಟಡದ ನಿವಾಸಿ ಈದ್ ಶಾವರ್ ತಿಳಿಸಿದರು. ನಾವು ಮಲಗಿದ್ದಾಗ ಇಸ್ರೇಲಿ ಅಧಿಕಾರಿಗಳು ಬಾಗಿಲು ತಟ್ಟಿದರು. ನಾವು ನಮ್ಮ ಬಟ್ಟೆಗಳನ್ನು ಬದಲಾಯಿಸಿ, ಪ್ರಮುಖ ಕಾಗದಪತ್ರಗಳು ಮತ್ತು ದಾಖಲೆಗಳನ್ನು ತೆಗೆದುಕೊಳ್ಳಲು ಮಾತ್ರ ಅವಕಾಶ ನೀಡಿದರು ಎಂದು ನಿವಾಸಿಗಳು ಆರೋಪಿಸಿದರು.

ಏಳು ಜನರ ಕುಟುಂಬವು ಬೇರೆಲ್ಲಿಯೂ ಹೋಗದೆ ತಮ್ಮ ಕಾರಿನಲ್ಲಿ ಮಲಗಬೇಕಾಯಿತು ಎಂದು ಶಾವರ್ ಹೇಳಿದರು. ಇಂದು ಬೆಳಿಗ್ಗೆ ಮೂರು ಬುಲ್ಡೋಜರ್‌ಗಳು ಕಟ್ಟಡವನ್ನು ಕೆಡವಲು ಪ್ರಾರಂಭಿಸಿತು. ಇಸ್ರೇಲಿ ಪೊಲೀಸರು ಸುತ್ತಮುತ್ತಲಿನ ಬೀದಿಗಳನ್ನು ಸುತ್ತುವರೆದರು. ಪ್ರದೇಶದಾದ್ಯಂತ ಮತ್ತು ನೆರೆಯ ಮನೆಗಳ ಮೇಲ್ಛಾವಣಿಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಖಾಸಗಿ ಒಡೆತನದ ಪ್ಯಾಲೆಸ್ಟೀನಿಯನ್ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡವನ್ನು ಪರವಾನಗಿ ಇಲ್ಲದ ಕಾರಣ ಕೆಡವಲು ಯೋಜಿಸಲಾಗಿದೆ.

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಲ್ಲಿ ಜೆರುಸಲೆಮ್‌ನ ಸ್ಥಿತಿ ಅತ್ಯಂತ ವಿವಾದಾತ್ಮಕ ವಿಷಯಗಳಲ್ಲಿ ಒಂದಾಗಿದೆ. 1967ರ ಅರಬ್-ಇಸ್ರೇಲಿ ಯುದ್ಧದಲ್ಲಿ ಇಸ್ರೇಲ್ ಹಳೆಯ ನಗರ ಸೇರಿದಂತೆ ಪೂರ್ವ ಜೆರುಸಲೆಮ್ ಅನ್ನು ವಶಪಡಿಸಿಕೊಂಡಿತು. ತಕ್ಷಣವೇ ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿತು. ಅಲ್ಲಿ ಸುಮಾರು 50,000 ಪ್ಯಾಲೆಸ್ಟೀನಿಯನ್ನರಲ್ಲಿ ಸಾವಿರಾರೂ ಇಸ್ರೇಲಿಗರು ವಾಸಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣ: ಏರ್ ಪೋರ್ಟ್ ನಲ್ಲಿ ಬಿಜೆಪಿ MLA ಬೈರತಿ ಬಸವರಾಜ್ ಬಂಧನ!

OP Sindoor ಎಫೆಕ್ಟ್: ಮೆಗಾ Rafale ಜೆಟ್ ಯೋಜನೆಗೆ 'ಕೇಂದ್ರ' ಅನುಮೋದನೆ, 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ!

News wrap 12-02-2026| ನಾನು ರಾಜಕಾರಣ ಮಾಡೋಕೇ ದಿಲ್ಲಿಗೆ ಬಂದಿರೋದು- ಡಿಕೆ ಶಿವಕುಮಾರ್; ಹೆಬ್ಬಾಳ–ಸರ್ಜಾಪುರ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಬ್ರೇಕ್; ರಾಹುಲ್ ಗಾಂಧಿ ಫೋಟೋ ಎಡಿಟ್: ಶಾಸಕ ಆರಗ ಜ್ಞಾನೇಂದ್ರ PA ಬಂಧನ

ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ ಹೆಚ್ಚಳ: ಮಧ್ಯಮ ವರ್ಗ ತುಳಿಯುವ ಪ್ರಯತ್ನವೇ? ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಮಾರಾಟವಾಗದೇ ಉಳಿದದ್ದಾ? or ಕುಡಿದು ಉಳಿದದ್ದಾ?: ದೆಹಲಿ ಸ್ಟೇಡಿಯಂ ಸಿಬ್ಬಂದಿ ಪಾನೀಯ ತುಂಬುತ್ತಿರುವ Video Viral

SCROLL FOR NEXT