ಪ್ರಧಾನಿ ಮೋದಿ- ಡೊನಾಲ್ಡ್ ಟ್ರಂಪ್ online desk
ವಿದೇಶ

"21 ಮಿಲಿಯನ್ ಡಾಲರ್ ಹೋಗಿದ್ದು ನನ್ನ ಫ್ರೆಂಡ್ ಮೋದಿಗೆ": Trump ಹೊಸ ಬಾಂಬ್!

ನಾವು ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ 21 ಮಿಲಿಯನ್ ಡಾಲರ್ ಕೊಟ್ಟಿದ್ದೇವೆ, ನಮ್ಮ ಕಥೆಯೇನು? ನಮ್ಮ ಮತದಾನ ಪ್ರಮಾಣವೂ ಹೆಚ್ಚಾಗಬೇಕು ಎಂದು ಟ್ರಂಪ್ ಹೇಳಿದ್ದಾರೆ

ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅಮೆರಿಕ USAID ಮೂಲಕ ಭಾರತಕ್ಕೆ ಬೈಡನ್ ಅವಧಿಯಲ್ಲಿ 21 ಮಿಲಿಯನ್ ಡಾಲರ್ ಫಂಡಿಂಗ್ ಮಾಡಿತ್ತು ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆ ಭಾರಿ ಸದ್ದು ಮಾಡಿದ ಬೆನ್ನಲ್ಲೇ ಟ್ರಂಪ್ ಅವರ ಇತ್ತೀಚಿನ ಮತ್ತೊಂದು ಹೇಳಿಕೆ ಈಗ ಭಾರಿ ವಿವಾದ ಉಂಟುಮಾಡಿದೆ.

ಭಾರತದಲ್ಲಿ ಬಹುಶಃ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಲು ಬೈಡನ್ ಆಡಳಿತ ಈ ಪ್ರಮಾಣದ ಫಂಡಿಂಗ್ ಮಾಡಿರಬೇಕೆಂಬ ಅರ್ಥದಲ್ಲಿ ಟ್ರಂಪ್ ಮಾತನಾಡಿದ್ದರು. ಇದು ಈ ಹಣ ಭಾರತದಲ್ಲಿ ಕೈಸೇರಿದ್ದು ಯಾರಿಗೆ ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು ಅಷ್ಟೇ ಅಲ್ಲದೇ ಮೋದಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವುದಕ್ಕೆ ಈ ಹಣ ಬಳಕೆಯಾಗಿದ್ದು ಎಂಬ ಗುಮಾನಿಗೂ ಪುಷ್ಟಿ ನೀಡಿತ್ತು.

ಈಗ ಟ್ರಂಪ್ ಇದೇ ವಿಷಯವಾಗಿ ಗವರ್ನರ್ಸ್ ವರ್ಕಿಂಗ್ ಸೆಷನ್ ನಲ್ಲಿ ಮತ್ತೊಮ್ಮೆ ಮಾತನಾಡಿದ್ದು, 21 ಮಿಲಿಯನ್ ಡಾಲರ್ ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕಾಗಿ ನನ್ನ ಫ್ರೆಂಡ್ ಮೋದಿಗೆ ಹೋಗಿದೆ. ನಾವು ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ 21 ಮಿಲಿಯನ್ ಡಾಲರ್ ಕೊಟ್ಟಿದ್ದೇವೆ, ನಮ್ಮ ಕಥೆಯೇನು? ನಮ್ಮ ಮತದಾನ ಪ್ರಮಾಣವೂ ಹೆಚ್ಚಾಗಬೇಕು ಎಂದು ಹೇಳಿದ್ದಾರೆ, ಈ ಕಾರ್ಯಕ್ರಮದ ವೀಡಿಯೊ ಕ್ಲಿಪ್ಪಿಂಗ್ ಅನ್ನು ಶ್ವೇತಭವನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಟ್ರಂಪ್ ಅವರ ಈ ಹೇಳಿಕೆ ಈಗ ಭಾರಿ ಸುದ್ದಿಯಾಗತೊಡಗಿದೆ.

ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿಯನ್ನು ಬಲಪಡಿಸಲು ಹಣ ಯಾರೂ ಕೇಳಿರದ ಸಂಸ್ಥೆಗೆ ಹೋಗಿದೆ ಎಂದು ಟ್ರಂಪ್ ಹೇಳಿದರು. "$29 ಮಿಲಿಯನ್ ಸಿಕ್ಕಿತು. ಅವರಿಗೆ ಚೆಕ್ ಸಿಕ್ಕಿತು. ನೀವು ಊಹಿಸಬಲ್ಲಿರಾ? ನಿಮಗೆ ಸ್ವಲ್ಪ ದೃಢತೆ ಇದೆ, ನಿಮಗೆ ಇಲ್ಲಿ 10,000, ಅಲ್ಲಿ 10,000 ಸಿಗುತ್ತದೆ, ಮತ್ತು ನಂತರ ನಮಗೆ ಅಮೆರಿಕ ಸರ್ಕಾರದಿಂದ 29 ಮಿಲಿಯನ್ ಸಿಗುತ್ತದೆ.

"ಆ ಸಂಸ್ಥೆಯಲ್ಲಿ ಇಬ್ಬರು ಜನರು ಕೆಲಸ ಮಾಡುತ್ತಿದ್ದಾರೆ... ಅವರು ತುಂಬಾ ಸಂತೋಷವಾಗಿದ್ದಾರೆಂದು ನಾನು ಭಾವಿಸುತ್ತೇನೆ, ಅವರು ತುಂಬಾ ಶ್ರೀಮಂತರು. ಅವರು ಶೀಘ್ರದಲ್ಲೇ ಉತ್ತಮ ವ್ಯವಹಾರ ನಿಯತಕಾಲಿಕೆಯ ಮುಖಪುಟದಲ್ಲಿ ಮಹಾನ್ ಹಗರಣಗಾರರಾಗಿ ಕಾಣಿಸಿಕೊಳ್ಳುತ್ತಾರೆ. ಹಣಕಾಸಿನ ಫೆಡರಲಿಸಂಗೆ $20 ಮಿಲಿಯನ್, ನೇಪಾಳದಲ್ಲಿ ಜೀವವೈವಿಧ್ಯಕ್ಕೆ $90 ಮಿಲಿಯನ್ ಮತ್ತು ಏಷ್ಯಾದಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು $47 ಮಿಲಿಯನ್... ಹೀಗೆ ಏಷ್ಯಾಕ್ಕೆ ಬಹಳಷ್ಟು ಹಣ ಸಿಕ್ಕಿದೆ" ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ರಾಜಕೀಯ ಪಕ್ಷಗಳು, ವ್ಯಕ್ತಿಗಳು, ಎನ್‌ಜಿಒಗಳು, ಸಂಸ್ಥೆಗಳು ಅಭಿವೃದ್ಧಿ ಸಂಸ್ಥೆಗಳು, ನೆರವು ಕಾರ್ಯವಿಧಾನಗಳು ಮತ್ತು ಬಹುಪಕ್ಷೀಯ ವೇದಿಕೆಗಳಿಂದ ಪಡೆದ ನಿಧಿಗಳ ಕುರಿತು ಸಮಗ್ರ ಶ್ವೇತಪತ್ರವನ್ನು ಪ್ರಕಟಿಸುವಂತೆ ಆಗ್ರಹಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT