ಇರಾಕ್ ಮಾಲ್ ನಲ್ಲಿ ಅಗ್ನಿ ಅವಘಡ 
ವಿದೇಶ

ಉದ್ಘಾಟನೆಯಾಗಿ ಒಂದೇ ವಾರಕ್ಕೆ ಇರಾಕ್‌ನ ಶಾಪಿಂಗ್ ಮಾಲ್‌ನಲ್ಲಿ ಭಾರಿ ಅಗ್ನಿ ಅವಘಡ; 69 ಮಂದಿ ಸಜೀವದಹನ, Video!

ಇರಾಕ್‌ನ ವಾಸಿಟ್‌ನ ಅಲ್-ಕುಟ್ ನಗರದ ಶಾ ಮಾಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಕನಿಷ್ಠ 69 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಮಾಲ್ ಹೊತ್ತಿಹುರಿಯುತ್ತಿರುವ ವಿಡಿಯೋಗಳು...

ಬುಧವಾರ ತಡರಾತ್ರಿ ಇರಾಕ್‌ನ ವಾಸಿಟ್‌ನ ಅಲ್-ಕುಟ್ ನಗರದ ಶಾ ಮಾಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಕನಿಷ್ಠ 69 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಮಾಲ್ ಹೊತ್ತಿಹುರಿಯುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬೃಹತ್ ಕಟ್ಟಡದಲ್ಲಿ ಬೆಂಕಿಯಲ್ಲಿ ಆವರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಹಲವಾರು ಗಂಟೆಗಳನ್ನು ತೆಗೆದುಕೊಂಡರು ಎಂದು ಸ್ಥಳೀಯರು ಹೇಳಿದ್ದಾರೆ.

ನಾವು ಇಲ್ಲಿಯವರೆಗೆ 68 ಶವಗಳನ್ನು ಗುರುತಿಸಿದ್ದೇವೆ. ಆದರೆ ಒಂದು ಶವ ತುಂಬಾ ಕೆಟ್ಟದಾಗಿ ಸುಟ್ಟುಹೋಗಿದ್ದು ಅದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಶವಗಳನ್ನು ಇನ್ನೂ ಹೊರತೆಗೆಯಲಾಗುತ್ತಿದೆ. ಆದರೆ ಅಗ್ನಿ ಅವಘಡಕ್ಕೆ ಕಾರಣ ತಿಳಿದಿಲ್ಲ. ವಾಸಿತ್ ಪ್ರಾಂತ್ಯದ ಗವರ್ನರ್ ಮೊಹಮ್ಮದ್ ಅಲ್-ಮಿಯಾಹಿ ಅವರು ಕಟ್ಟಡ ಮತ್ತು ಮಾಲ್‌ನ ಮಾಲೀಕರ ವಿರುದ್ಧ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ. ಕಟ್ಟಡದ ಭದ್ರತಾ ವ್ಯವಸ್ಥೆ ಮತ್ತು ಅಗ್ನಿಶಾಮಕ ಸುರಕ್ಷತಾ ಸಾಧನಗಳನ್ನು ಸಹ ತನಿಖೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ.

ಈ ಅಪಘಾತಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಕಾರಣರಾದ ಯಾರಿಗೂ ಯಾವುದೇ ದಯೆ ತೋರಿಸಲ್ಲ ಎಂದು ನಾವು ಅಮಾಯಕ ಬಲಿಪಶುಗಳ ಕುಟುಂಬಗಳಿಗೆ ಭರವಸೆ ನೀಡಲು ಬಯಸುತ್ತೇವೆ ಎಂದು ಗವರ್ನರ್ ಮೊಹಮ್ಮದ್ ಅಲ್-ಮಾಯೆಹ್ ಹೇಳಿದರು. ಇರಾಕ್‌ನಲ್ಲಿ ಕಟ್ಟಡ ನಿರ್ಮಾಣ ಗುಣಮಟ್ಟ ಉತ್ತಮವಾಗಿಲ್ಲದ ಕಾರಣ ಹಿಂದೆಯೂ ಇಂತಹ ದುರಂತ ಘಟನೆಗಳು ಸಂಭವಿಸಿವೆ. ಜುಲೈ 2021ರಲ್ಲಿ ನಸಿರಿಯಾ ನಗರದ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿಯಲ್ಲಿ 60 ರಿಂದ 92 ಜನರು ಸಾವನ್ನಪ್ಪಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮುಂದಿನ ಸಿಜೆಐ ಯಾರು?: ಉತ್ತರಾಧಿಕಾರಿ ಹೆಸರು ಕೇಂದ್ರಕ್ಕೆ ಶಿಫಾರಸು ಮಾಡಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ

Dharmasthala Mass Burial Case: ಸಾಕ್ಷ್ಯಾಧಾರಗಳ ಕೊರತೆ, 'ಷಡ್ಯಂತ್ರ ಸೂತ್ರಧಾರರತ್ತ' ಎಸ್ ಐಟಿ ತನಿಖೆ!

ಸೂಪರ್ ಹಿಟ್ ಆದರೂ ಈ ವರೆಗೂ ಯಾರಿಗೂ ಅರ್ಥವಾಗದ ಕಾಂತಾರ ಚಾಪ್ಟರ್-1 ರಹಸ್ಯ; ದ್ವಿಪಾತ್ರದಲ್ಲಿ ರಿಷಭ್ ಶೆಟ್ಟಿ ಅಭಿನಯ; ಪ್ರೇಕ್ಷಕರಲ್ಲಿ ಮತ್ತೆ ಹೆಚ್ಚಿದ ಕುತೂಹಲ!

ಹೈಕೋರ್ಟ್ ಸ್ಥಳಾಂತರ ಬೇಡಿಕೆ ಬಗ್ಗೆ ಪರಿಶೀಲನೆ: ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ಅನುದಾನ; ಡಿ.ಕೆ ಶಿವಕುಮಾರ್

RSS ರಹಸ್ಯ ಸಂಘಟನೆಯಲ್ಲ- ಶತ್ರುಗಳೂ ಇಲ್ಲ: ನೆಹರು ಮರಿಮೊಮ್ಮಕ್ಕಳು ಅರ್ಥಮಾಡಿಕೊಳ್ಳಲು ಸಮಯ ಬೇಕು; ರಾಮ್ ಮಾಧವ್

SCROLL FOR NEXT