ಕದನ ವಿರಾಮ ಮಾತುಕತೆ 
ವಿದೇಶ

ಕದನ ವಿರಾಮಕ್ಕೆ ಥೈಲ್ಯಾಂಡ್ - ಕಾಂಬೋಡಿಯಾ ಒಪ್ಪಿಕೊಂಡಿವೆ: ಮಲೇಷ್ಯಾ ಪ್ರಧಾನಿ

ಆಸಿಯಾನ್ ಪ್ರಾದೇಶಿಕ ಬಣದ ಮುಖ್ಯಸ್ಥರಾಗಿ ಮಾತುಕತೆಯ ಅಧ್ಯಕ್ಷತೆ ವಹಿಸಿದ್ದ ಅನ್ವರ್, ಸಾಮಾನ್ಯ ಸ್ಥಿತಿಗೆ ಮರಳಲು ಕ್ರಮ ತೆಗೆದುಕೊಳ್ಳಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ತಿಳಿಸಿದರು.

ಪುತ್ರಜಯ: ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಮಾರಣಾಂತಿಕ ಗಡಿ ಘರ್ಷಣೆ ಪರಿಹರಿಸಲು ಮಧ್ಯರಾತ್ರಿಯಿಂದ "ತಕ್ಷಣ ಮತ್ತು ಬೇಷರತ್ತಾದ" ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಸೋಮವಾರ ಹೇಳಿದ್ದಾರೆ.

ಆಸಿಯಾನ್ ಪ್ರಾದೇಶಿಕ ಬಣದ ಮುಖ್ಯಸ್ಥರಾಗಿ ಮಾತುಕತೆಯ ಅಧ್ಯಕ್ಷತೆ ವಹಿಸಿದ್ದ ಅನ್ವರ್, ಸಾಮಾನ್ಯ ಸ್ಥಿತಿಗೆ ಮರಳಲು ಕ್ರಮ ತೆಗೆದುಕೊಳ್ಳಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ತಿಳಿಸಿದರು.

ಕಾಂಬೋಡಿಯಾ ಪ್ರಧಾನಿ ಹುನ್ ಮಾನೆಟ್ ಮತ್ತು ಥಾಯ್ ಹಂಗಾಮಿ ಪ್ರಧಾನಿ ಫುಮ್ತಾಮ್ ವೆಚಾಯಾಚೈ "ಜುಲೈ 28 ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ತಕ್ಷಣ ಮತ್ತು ಬೇಷರತ್ತಾದ ಕದನ ವಿರಾಮಕ್ಕೆ" ಒಪ್ಪಿಕೊಂಡಿದ್ದಾರೆ ಎಂದು ಅನ್ವರ್ ಅವರು ಜಂಟಿ ಪ್ರಕಟಣೆಯನ್ನು ಓದುತ್ತಾ ಹೇಳಿದ್ದಾರೆ.

ಹುನ್ ಮಾನೆಟ್ ಮತ್ತು ಫುಮ್ತಾಮ್ ಸಭೆಯ ಫಲಿತಾಂಶವನ್ನು ಶ್ಲಾಘಿಸಿದರು ಮತ್ತು ಸಂಕ್ಷಿಪ್ತ ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಕೈಕುಲುಕಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bihar Election Results 2025 Live: 202 ಸ್ಥಾನಗಳಲ್ಲಿ NDA ಮುನ್ನಡೆ; ಇಂಡಿಯಾ ಬಣ, ಪ್ರಶಾಂತ್ ಕಿಶೋರ್ ಗೆ ಮುಖಭಂಗ

Assembly bypolls: ಜುಬಿಲಿ ಹಿಲ್ಸ್‌ನಲ್ಲಿ ಕಾಂಗ್ರೆಸ್ ಮುನ್ನಡೆ; ನಗ್ರೋಟಾದಲ್ಲಿ ಬಿಜೆಪಿ ಗೆಲುವು; ಬುಡ್ಗಾಮ್‌ನಲ್ಲಿ ಪಿಡಿಪಿ ಮುನ್ನಡೆ

ವೃಕ್ಷಮಾತೆ- ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ವಿಧಿವಶ: ಸಿಎಂ- ಡಿಸಿಎಂ ಸೇರಿ ಹಲವು ಗಣ್ಯರ ಸಂತಾಪ

ಬಿಹಾರ ಚುನಾವಣಾ ಫಲಿತಾಂಶ 2025: ಕಾಂಗ್ರೆಸ್​​ಗೆ ಭಾರೀ ಮುಖಭಂಗ, ಸೋಲು ಖಚಿತವಾಗುತ್ತಿದ್ದಂತೆ ವೋಟ್ ಚೋರಿ ಎಂದ ಸಿದ್ದರಾಮಯ್ಯ

ಆಳಂದ ವಿಧಾನಸಭಾ ಚುನಾವಣೆಯಲ್ಲಿ ಮತ ಕಳ್ಳತನ; ಪಶ್ಚಿಮ ಬಂಗಾಳದ ವ್ಯಕ್ತಿಯನ್ನು ಬಂಧಿಸಿದ ಸಿಐಡಿ!

SCROLL FOR NEXT