ಕದನ ವಿರಾಮ ಮಾತುಕತೆ 
ವಿದೇಶ

ಕದನ ವಿರಾಮಕ್ಕೆ ಥೈಲ್ಯಾಂಡ್ - ಕಾಂಬೋಡಿಯಾ ಒಪ್ಪಿಕೊಂಡಿವೆ: ಮಲೇಷ್ಯಾ ಪ್ರಧಾನಿ

ಆಸಿಯಾನ್ ಪ್ರಾದೇಶಿಕ ಬಣದ ಮುಖ್ಯಸ್ಥರಾಗಿ ಮಾತುಕತೆಯ ಅಧ್ಯಕ್ಷತೆ ವಹಿಸಿದ್ದ ಅನ್ವರ್, ಸಾಮಾನ್ಯ ಸ್ಥಿತಿಗೆ ಮರಳಲು ಕ್ರಮ ತೆಗೆದುಕೊಳ್ಳಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ತಿಳಿಸಿದರು.

ಪುತ್ರಜಯ: ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಮಾರಣಾಂತಿಕ ಗಡಿ ಘರ್ಷಣೆ ಪರಿಹರಿಸಲು ಮಧ್ಯರಾತ್ರಿಯಿಂದ "ತಕ್ಷಣ ಮತ್ತು ಬೇಷರತ್ತಾದ" ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಸೋಮವಾರ ಹೇಳಿದ್ದಾರೆ.

ಆಸಿಯಾನ್ ಪ್ರಾದೇಶಿಕ ಬಣದ ಮುಖ್ಯಸ್ಥರಾಗಿ ಮಾತುಕತೆಯ ಅಧ್ಯಕ್ಷತೆ ವಹಿಸಿದ್ದ ಅನ್ವರ್, ಸಾಮಾನ್ಯ ಸ್ಥಿತಿಗೆ ಮರಳಲು ಕ್ರಮ ತೆಗೆದುಕೊಳ್ಳಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ತಿಳಿಸಿದರು.

ಕಾಂಬೋಡಿಯಾ ಪ್ರಧಾನಿ ಹುನ್ ಮಾನೆಟ್ ಮತ್ತು ಥಾಯ್ ಹಂಗಾಮಿ ಪ್ರಧಾನಿ ಫುಮ್ತಾಮ್ ವೆಚಾಯಾಚೈ "ಜುಲೈ 28 ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ತಕ್ಷಣ ಮತ್ತು ಬೇಷರತ್ತಾದ ಕದನ ವಿರಾಮಕ್ಕೆ" ಒಪ್ಪಿಕೊಂಡಿದ್ದಾರೆ ಎಂದು ಅನ್ವರ್ ಅವರು ಜಂಟಿ ಪ್ರಕಟಣೆಯನ್ನು ಓದುತ್ತಾ ಹೇಳಿದ್ದಾರೆ.

ಹುನ್ ಮಾನೆಟ್ ಮತ್ತು ಫುಮ್ತಾಮ್ ಸಭೆಯ ಫಲಿತಾಂಶವನ್ನು ಶ್ಲಾಘಿಸಿದರು ಮತ್ತು ಸಂಕ್ಷಿಪ್ತ ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಕೈಕುಲುಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ರಾಹುಲ್ ಗಾಂಧಿ ಎದೆಗೆ ಗುಂಡು ಹೊಡೆಯುತ್ತೇವೆ': ಕೇರಳ BJP ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ; ಅಮಿತ್ ಶಾಗೆ ಪತ್ರ ಬರೆದ ಕಾಂಗ್ರೆಸ್, ಕ್ರಮಕ್ಕೆ ಆಗ್ರಹ

ದೇವಾಲಯದ ಹೊರಗೆ ಹಿಂದೂಯೇತರರು ಪ್ರಸಾದ ಮಾರಾಟ ಮಾಡುವುದು ಕಂಡರೆ ಹೊಡೆಯಿರಿ: ಪ್ರಜ್ಞಾ ಠಾಕೂರ್

Asia Cup 2025: ಸೋಲು ಬೆನ್ನಲ್ಲೇ ಟ್ರೋಫಿಯೊಂದಿಗೆ ಮೈದಾನ ತೊರೆದ ಪಾಕ್ ಸಚಿವ; ACCಯಿಂದ ನಖ್ವಿ ವಜಾಗೊಳಿಸುವಂತೆ BCCI ಒತ್ತಡ!

GST 2.0: ಜಾರಿಯಾದಾಗಿನಿಂದ ಗ್ರಾಹಕರ ಸಹಾಯವಾಣಿಯಲ್ಲಿ 3,000 ದೂರುಗಳು ದಾಖಲು! ಕಾರ್ಯದರ್ಶಿ ನಿಧಿ ಖರೆ ಏನಾಂತರೆ?

ಬಿಹಾರದ ಢಾಕಾದಲ್ಲಿ 80,000 ಮುಸ್ಲಿಂ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಬಿಜೆಪಿ ಕ್ರಮ!

SCROLL FOR NEXT